ಗ್ರಾಮದಲ್ಲಿ ಬೀಡಿಬಿಟ್ಟು ಉಪಟಳ ನೀಡುತ್ತಿದ್ದ ಒಂಟಿಸಲಗನನ್ನು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದ್ದರು. ಈ ವೇಳೆ ಆನೆ ಚಲನವಲನ ತಿಳಿಯಲು ರೇಡಿಯೋ ಕಾಲರ್ ಅಳವಡಿಸಿದ್ದರು. ಬಳಿಕ ನಾಗರಹೊಳೆ ಅರಣ್ಯದ ಅಂತರಸಂತೆಗೆ ಬಿಡಿಲಾಗಿತ್ತು. ಆದರೆ, ಇದೀಗ ಬಾಡಗ ಬಾಣಂಗಾಲ ಕಾಫಿ ತೋಟದಲ್ಲಿ ಸಂಚರಿಸುತ್ತಿರುವ ದೃಶ್ಯವನ್ನು ಸ್ಥಳೀಯರು ಸೆರೆ ಹಿಡಿದಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.