ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಗ್ರಾಮೀಣ ಪ್ರದೇಶಗಳ ಗೋವುಗಳು ಹಾಗೂ ಎಮ್ಮೆಗಳು ಬೀದಿ ಪಾಲಾದವು. ಆದ್ದರಿಂದ, ಪೋಷಿಸಲಾಗದ ಬಿಡಾಡಿ ಗೋವುಗಳನ್ನು ಟ್ರಸ್ಟ್ ಮೂಲಕ ಭಾಗಮಂಡಲದ ಚೆಟ್ಟಿಮಾನಿ ಗ್ರಾಮದಲ್ಲಿ ಸುಮಾರು 6 ಎಕರೆ ಪ್ರದೇಶದಲ್ಲಿ ಶ್ರೀಕೃಷ್ಣ ಗೋಶಾಲೆಯನ್ನು ಆರಂಭಿಸಿಲಾಗಿದ್ದು, ಇದೀಗ ಗೋಶಾಲೆಗೆ ಕೆಲವು ಗ್ರಾಮಸ್ಥರು ಜಾನುವಾರುಗಳನ್ನು ತಂದು ಬಿಟ್ಟಿದ್ದಾರೆ ಎಂದು ಹೇಳಿದರು.