<p><strong>ನಾಪೋಕ್ಲು:</strong> ಹೋಬಳಿ ವ್ಯಾಪ್ತಿಯಲ್ಲಿ ಒಂದು ವಾರದಿಂದ ಸತತವಾಗಿದ್ದ ಬಿದ್ದ ಮಳೆ ಬಿಡುವು ನೀಡಿದ್ದು ಈ ಭಾಗದಲ್ಲಿ ಭತ್ತದ ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ.</p>.<p>ಕಾಫಿ, ಕಾಳು ಮೆಣಸು ಕೃಷಿ ಜೊತೆಗೆ ಭತ್ತದ ಕೃಷಿ ಚಟುವಟಿಕೆಗಳು ಬಿರುಸಿನಿಂದ ನಡೆಯುತ್ತಿವೆ. ಕೃಷಿಕರು ಅಲ್ಲಲ್ಲಿ ನಾಟಿ ಕಾರ್ಯದಲ್ಲಿ ತೊಡಗಿರುವ ದೃಶ್ಯ ಮಂಗಳವಾರ ಕಂಡು ಬಂತು. ನಾಟಿ ಕೆಲಸಕ್ಕಾಗಿ ಬಹುತೇಕ ಕಡೆಗಳಲ್ಲಿ ಯಂತ್ರೋಪಕರಣಗಳನ್ನು ಬಳಸಿ ರೈತರು ಗದ್ದೆ ಹದ ಮಾಡುತ್ತಿದ್ದರು.</p>.<p> ಮಳೆಯಿಂದಾಗಿ ಕಳೆದ ಕೆಲವು ದಿನಗಳಿಂದ ನಾಟಿ ಕಾರ್ಯ ಸ್ಥಗಿತಗೊಂಡಿತ್ತು. ಸಮೀಪದ ಕಕ್ಕಬ್ಬೆಯಲ್ಲಿ ಕಣಿಯರ ನಾಣಯ್ಯರ ಗದ್ದೆಯಲ್ಲಿ ನಾಟಿ ಬಿರುಸಿನಿಂದ ಸಾಗಿತ್ತು. ವಿವಿದೆಡೆಗಳಲ್ಲಿ ಸಸಿಮಡಿಗಳಿಂದ ಅಗೆ ತೆಗೆಯುವ ಕಾರ್ಯ, ಉಳುಮೆ ಮಾಡುವುದು ನಡೆಯುತ್ತಿದೆ.</p>.<p>ಕಾರ್ಮಿಕರ ಕೊರತೆ ನಡುವೆಯೂ ಸ್ಥಳೀಯ ಕಾರ್ಮಿಕರ ಜೊತೆ ಹೊರಗಿನಿಂದ ಬಂದ ಕಾರ್ಮಿಕರನ್ನು ಒಗ್ಗೂಡಿಸಿ ನಾಟಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಕೂಲಿಕಾರ್ಮಿಕರ ಅಭಾವದಿಂದಾಗಿ ಬಹುತೇಕರು ಹಿಂದಿನ ವರ್ಷಗಳಲ್ಲಿ ಭತ್ತದ ಕೃಷಿ ಕೈಬಿಟ್ಟಿದ್ದರು.</p>.<p>ಅಲ್ಲಲ್ಲಿ ಕಾಡು ಪ್ರಾಣಿಗಳ ಉಪಟಳವೂ ರೈತರನ್ನು ಹೈರಾಣು ಮಾಡಿತ್ತು. ಈ ವರ್ಷ ಮತ್ತೆ ಭತ್ತದ ಕೃಷಿಯತ್ತ ರೈತರು ಒಲವು ತೋರಿದ್ದಾರೆ. ಸಮೀಪದ ಬಲ್ಲಮಾವಟಿ, ನೆಲಜಿ, ಪೇರೂರು, ಪುಲಿಕೋಟು, ಹೊದ್ದೂರು, ಬಲಮುರಿ ಗ್ರಾಮಗಳಲ್ಲಿ ರೈತರು ಗದ್ದೆಗಳಲ್ಲಿ ನಾಟಿ ಸಿದ್ಧತೆಯಲ್ಲಿ ತೊಡಗಿರುವುದು ಕಂಡು ಬಂತು.</p>.<p>ಗ್ರಾಮೀಣ ಪ್ರದೇಶಗಳಾದ ಸಮೀಪದ ಬೇತು, ಕೈಕಾಡು, ಪಾರಾಣೆ ನೆಲಜಿ, ಹೊದ್ದೂರು, ಬಲಮಾವಟಿ ಗ್ರಾಮಗಳಲ್ಲಿ ಭತ್ತದ ಗದ್ದೆಯ ಉಳುಮೆ ಕಾರ್ಯ ನಡೆಯುತ್ತಿದೆ. ಈ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಭತ್ತದ ಸಸಿಮಡಿಗಳಿಂದ ಅಗೆ ತೆಗೆಯುವ ಕೆಲಸ ನಡೆಯುತ್ತಿದೆ. </p>.<p>‘ಮಳೆ ಬಿಡುವು ಕೊಟ್ಟಿರುವುದು ಭತ್ತದ ಕೃಷಿಗೆ ಉತ್ತೇಜನಕಾರಿಯಾಗಿದೆ. ಕಾರ್ಮಿಕರನ್ನು ಒಗ್ಗೂಡಿಸಿ ಸಸಿಮಡಿಯಿಂದ ಅಗೆ ತೆಗೆಯುತ್ತಿದ್ದೆವೆ. ಒಂದೆರಡು ದಿನಗಳಲ್ಲಿ ನಾಟಿ ಕೆಲಸ ಪೂರ್ಣಗೊಳ್ಳಲಿದೆ’ ಎಂದು ಬಲ್ಲಮಾವಟಿ ಗ್ರಾಮದ ಶಿವಪ್ರಸಾದ್ ಹೇಳಿದರು.</p>.<p>‘ಸದ್ಯ ಭತ್ತದ ಕೃಷಿಗೆ ಕಾರ್ಮಿಕರ ಕೊರತೆ ಇಲ್ಲ. ಕೊಯ್ಲು ಮಾಡುವ ಅವಧಿಯಲ್ಲಿ ಕಾರ್ಮಿಕರ ಕೊರತೆ ಕಾಡಲಿದೆ. ರೈತರು ಆ ಅವಧಿಯಲ್ಲಿ ಕಾಳಜಿ ವಹಿಸಿದರೆ ಭತ್ತದ ಕೃಷಿ ಲಾಭದಾಯಕ’ ಎಂದರು.</p>.<p>ಭತ್ತದ ಬಿತ್ತನೆ ಸಂದರ್ಭದಲ್ಲಿ ಸುರಿದ ಧಾರಾಕಾರ ಮಳೆಯಿಂದ ಬಿತ್ತನೆ ಮಾಡಿದ್ದ ಭತ್ತ ಕೊಚ್ಚಿಹೋಗಿ ಪೈರುಗಳು ನಾಶವಾಗಿವೆ. ಉಳುಮೆ ಮಾಡಿದ ಗದ್ದೆಗಳನ್ನು ಹಾಗೆಯೇ ಬಿಟ್ಟಿದ್ದೇವೆ. ನಾಟಿ ಕೆಲಸಕ್ಕೆ ಪೈರುಗಳು ಸಿಗುತ್ತಿಲ್ಲ. ಭತ್ತದ ಕೃಷಿ ಕೈಗೊಳ್ಳುವ ಆಸಕ್ತಿ ಇದ್ದರೂ ಈ ಬಾರಿ ಅನಿವಾರ್ಯವಾಗಿ ನಾಟಿ ಕೆಲಸ ಮಾಡಲಾಗುತ್ತಿಲ್ಲ ಎಂದು ನಾಪೋಕ್ಲುವಿನ ಉದಯಶಂಕರ್ ಬೇಸರ ವ್ಯಕ್ತಪಡಿಸಿದರು.</p>.<p>ಪ್ರವಾಹ ಉಂಟಾಗಬಹುದೆಂದು ಆತಂಕದಲ್ಲಿ ಕಾವೇರಿ ನದಿತಟದ ಗದ್ದೆಗಳಲ್ಲಿ ಈಚೆಗೆ ಬಿತ್ತನೆ ಮಾಡಲಾಗಿದೆ. ಕೆಲವು ದಿನಗಳ ಬಳಿಕ ಆ ಭಾಗಗಳಲ್ಲಿ ನಾಟಿ ಕೆಲಸ ಪೂರ್ಣಗೊಳ್ಳಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಪೋಕ್ಲು:</strong> ಹೋಬಳಿ ವ್ಯಾಪ್ತಿಯಲ್ಲಿ ಒಂದು ವಾರದಿಂದ ಸತತವಾಗಿದ್ದ ಬಿದ್ದ ಮಳೆ ಬಿಡುವು ನೀಡಿದ್ದು ಈ ಭಾಗದಲ್ಲಿ ಭತ್ತದ ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ.</p>.<p>ಕಾಫಿ, ಕಾಳು ಮೆಣಸು ಕೃಷಿ ಜೊತೆಗೆ ಭತ್ತದ ಕೃಷಿ ಚಟುವಟಿಕೆಗಳು ಬಿರುಸಿನಿಂದ ನಡೆಯುತ್ತಿವೆ. ಕೃಷಿಕರು ಅಲ್ಲಲ್ಲಿ ನಾಟಿ ಕಾರ್ಯದಲ್ಲಿ ತೊಡಗಿರುವ ದೃಶ್ಯ ಮಂಗಳವಾರ ಕಂಡು ಬಂತು. ನಾಟಿ ಕೆಲಸಕ್ಕಾಗಿ ಬಹುತೇಕ ಕಡೆಗಳಲ್ಲಿ ಯಂತ್ರೋಪಕರಣಗಳನ್ನು ಬಳಸಿ ರೈತರು ಗದ್ದೆ ಹದ ಮಾಡುತ್ತಿದ್ದರು.</p>.<p> ಮಳೆಯಿಂದಾಗಿ ಕಳೆದ ಕೆಲವು ದಿನಗಳಿಂದ ನಾಟಿ ಕಾರ್ಯ ಸ್ಥಗಿತಗೊಂಡಿತ್ತು. ಸಮೀಪದ ಕಕ್ಕಬ್ಬೆಯಲ್ಲಿ ಕಣಿಯರ ನಾಣಯ್ಯರ ಗದ್ದೆಯಲ್ಲಿ ನಾಟಿ ಬಿರುಸಿನಿಂದ ಸಾಗಿತ್ತು. ವಿವಿದೆಡೆಗಳಲ್ಲಿ ಸಸಿಮಡಿಗಳಿಂದ ಅಗೆ ತೆಗೆಯುವ ಕಾರ್ಯ, ಉಳುಮೆ ಮಾಡುವುದು ನಡೆಯುತ್ತಿದೆ.</p>.<p>ಕಾರ್ಮಿಕರ ಕೊರತೆ ನಡುವೆಯೂ ಸ್ಥಳೀಯ ಕಾರ್ಮಿಕರ ಜೊತೆ ಹೊರಗಿನಿಂದ ಬಂದ ಕಾರ್ಮಿಕರನ್ನು ಒಗ್ಗೂಡಿಸಿ ನಾಟಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಕೂಲಿಕಾರ್ಮಿಕರ ಅಭಾವದಿಂದಾಗಿ ಬಹುತೇಕರು ಹಿಂದಿನ ವರ್ಷಗಳಲ್ಲಿ ಭತ್ತದ ಕೃಷಿ ಕೈಬಿಟ್ಟಿದ್ದರು.</p>.<p>ಅಲ್ಲಲ್ಲಿ ಕಾಡು ಪ್ರಾಣಿಗಳ ಉಪಟಳವೂ ರೈತರನ್ನು ಹೈರಾಣು ಮಾಡಿತ್ತು. ಈ ವರ್ಷ ಮತ್ತೆ ಭತ್ತದ ಕೃಷಿಯತ್ತ ರೈತರು ಒಲವು ತೋರಿದ್ದಾರೆ. ಸಮೀಪದ ಬಲ್ಲಮಾವಟಿ, ನೆಲಜಿ, ಪೇರೂರು, ಪುಲಿಕೋಟು, ಹೊದ್ದೂರು, ಬಲಮುರಿ ಗ್ರಾಮಗಳಲ್ಲಿ ರೈತರು ಗದ್ದೆಗಳಲ್ಲಿ ನಾಟಿ ಸಿದ್ಧತೆಯಲ್ಲಿ ತೊಡಗಿರುವುದು ಕಂಡು ಬಂತು.</p>.<p>ಗ್ರಾಮೀಣ ಪ್ರದೇಶಗಳಾದ ಸಮೀಪದ ಬೇತು, ಕೈಕಾಡು, ಪಾರಾಣೆ ನೆಲಜಿ, ಹೊದ್ದೂರು, ಬಲಮಾವಟಿ ಗ್ರಾಮಗಳಲ್ಲಿ ಭತ್ತದ ಗದ್ದೆಯ ಉಳುಮೆ ಕಾರ್ಯ ನಡೆಯುತ್ತಿದೆ. ಈ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಭತ್ತದ ಸಸಿಮಡಿಗಳಿಂದ ಅಗೆ ತೆಗೆಯುವ ಕೆಲಸ ನಡೆಯುತ್ತಿದೆ. </p>.<p>‘ಮಳೆ ಬಿಡುವು ಕೊಟ್ಟಿರುವುದು ಭತ್ತದ ಕೃಷಿಗೆ ಉತ್ತೇಜನಕಾರಿಯಾಗಿದೆ. ಕಾರ್ಮಿಕರನ್ನು ಒಗ್ಗೂಡಿಸಿ ಸಸಿಮಡಿಯಿಂದ ಅಗೆ ತೆಗೆಯುತ್ತಿದ್ದೆವೆ. ಒಂದೆರಡು ದಿನಗಳಲ್ಲಿ ನಾಟಿ ಕೆಲಸ ಪೂರ್ಣಗೊಳ್ಳಲಿದೆ’ ಎಂದು ಬಲ್ಲಮಾವಟಿ ಗ್ರಾಮದ ಶಿವಪ್ರಸಾದ್ ಹೇಳಿದರು.</p>.<p>‘ಸದ್ಯ ಭತ್ತದ ಕೃಷಿಗೆ ಕಾರ್ಮಿಕರ ಕೊರತೆ ಇಲ್ಲ. ಕೊಯ್ಲು ಮಾಡುವ ಅವಧಿಯಲ್ಲಿ ಕಾರ್ಮಿಕರ ಕೊರತೆ ಕಾಡಲಿದೆ. ರೈತರು ಆ ಅವಧಿಯಲ್ಲಿ ಕಾಳಜಿ ವಹಿಸಿದರೆ ಭತ್ತದ ಕೃಷಿ ಲಾಭದಾಯಕ’ ಎಂದರು.</p>.<p>ಭತ್ತದ ಬಿತ್ತನೆ ಸಂದರ್ಭದಲ್ಲಿ ಸುರಿದ ಧಾರಾಕಾರ ಮಳೆಯಿಂದ ಬಿತ್ತನೆ ಮಾಡಿದ್ದ ಭತ್ತ ಕೊಚ್ಚಿಹೋಗಿ ಪೈರುಗಳು ನಾಶವಾಗಿವೆ. ಉಳುಮೆ ಮಾಡಿದ ಗದ್ದೆಗಳನ್ನು ಹಾಗೆಯೇ ಬಿಟ್ಟಿದ್ದೇವೆ. ನಾಟಿ ಕೆಲಸಕ್ಕೆ ಪೈರುಗಳು ಸಿಗುತ್ತಿಲ್ಲ. ಭತ್ತದ ಕೃಷಿ ಕೈಗೊಳ್ಳುವ ಆಸಕ್ತಿ ಇದ್ದರೂ ಈ ಬಾರಿ ಅನಿವಾರ್ಯವಾಗಿ ನಾಟಿ ಕೆಲಸ ಮಾಡಲಾಗುತ್ತಿಲ್ಲ ಎಂದು ನಾಪೋಕ್ಲುವಿನ ಉದಯಶಂಕರ್ ಬೇಸರ ವ್ಯಕ್ತಪಡಿಸಿದರು.</p>.<p>ಪ್ರವಾಹ ಉಂಟಾಗಬಹುದೆಂದು ಆತಂಕದಲ್ಲಿ ಕಾವೇರಿ ನದಿತಟದ ಗದ್ದೆಗಳಲ್ಲಿ ಈಚೆಗೆ ಬಿತ್ತನೆ ಮಾಡಲಾಗಿದೆ. ಕೆಲವು ದಿನಗಳ ಬಳಿಕ ಆ ಭಾಗಗಳಲ್ಲಿ ನಾಟಿ ಕೆಲಸ ಪೂರ್ಣಗೊಳ್ಳಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>