ಮಡಿಕೇರಿ: ಉತ್ತರ ಪ್ರದೇಶದಲ್ಲಿ ಜಾತ್ರೆಗೆ ಹೋಗಿ ತಪ್ಪಿಸಿಕೊಂಡು ಮಡಿಕೇರಿಗೆ ಬಂದಿದ್ದ ತಾಯಿಯೊಬ್ಬರು, ಮತ್ತೆ ಪುತ್ರನ ಸೇರಿದ ಭಾವನಾತ್ಮಕ ಸನ್ನಿವೇಶಕ್ಕೆ ಬುಧವಾರ ‘ಮಂಜಿನ ನಗರಿ’ ಮಡಿಕೇರಿ ಸಾಕ್ಷಿಯಾಯಿತು. ಮಗನನ್ನು ಕಂಡ ತಾಯಿ ಬಿಗಿದಪ್ಪಿ ಮುದ್ದಾಡಿದರೆ, ತಾಯಿಯ ಮಡಿಲು ಸೇರಿದ ತೃಪ್ತಿ ಮಗನದ್ದಾಯಿತು. ಇಬ್ಬರ ಕಣ್ಣಾಲಿಗಳೂ ತೇವಗೊಂಡವು. ಕರುಳ ಬಳ್ಳಿಯನ್ನು ಒಂದುಗೂಡಿಸಿದ ಸಂತೃಪ್ತಿ ಸ್ಥಳೀಯರದ್ದು.