ಮಡಿಕೇರಿ: ಕಾವೇರಿ ತೀರ್ಥೋದ್ಭವಕ್ಕಾಗಿ ಸಹಸ್ರಾರು ಭಕ್ತರು ಭಾಗಮಂಡಲದಿಂದ ತಲಕಾವೇರಿಗೆ ಪಾದಯಾತ್ರೆ ನಡೆಸಿದರು.
ಬೆಂಗಳೂರು, ಮೈಸೂರು, ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಬಂದಿರುವ ಭಕ್ತರು ಸಾಂಪ್ರದಾಯಿಕ ಕೊಡವ ಉಡುಗೆ ಧರಿಸಿ ಕಾವೇರಿ ಮಾತೆಯ ಸ್ತುತಿ ಗೀತೆಗಳನ್ನು ಹಾಡುತ್ತಾ ಬೆಟ್ಟ ಹತ್ತಿದರು.
ಇವರಲ್ಲಿ ನಟಿ ಹರ್ಷಿಕಾ ಪೂಣಚ್ಚ, ನಟ ಭುವನ್ ಪೊನ್ನಣ್ಣ, ಶಾಸಕ ಎ.ಎಸ್.ಪೊನ್ನಣ್ಣ ಇದ್ದರು.
ಅ.18 ರ ನಸುಕಿನ 1.27ಕ್ಕೆ ತೀರ್ಥೋದ್ಭವ ನಿಗದಿಯಾಗಿತ್ತು. ಸಾವಿರಾರು ಜನ ತೀರ್ಥೋದ್ಭವದಲ್ಲಿ ಪಾಲ್ಗೊಂಡು ಫುಳಕಿತರಾದರು.