ದೇವರ ಹೆಸರಿನಲ್ಲಿ ನಮ್ಮ ಹಿರಿಯರು ಕಾಡನ್ನು ಉಳಿಸಿಕೊಂಡು ಬಂದಿರುವುದು ಹೆಮ್ಮೆಯ ವಿಷಯ. 1873ರಲ್ಲಿ ಮೊದಲ ಬಾರಿಗೆ ಬ್ರಿಟಿಷರು ದೇವರ ಕಾಡನ್ನು ಉಳಿಸಲು ಕಾನೂನು ರೂಪಿಸಿದರು
ಟಿ.ಪಿ.ರಮೇಶ ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ
ವಿಶ್ವಕ್ಕೆ ಮಾದರಿಯಾಗಿರುವ ದೇವರಕಾಡಿಗೆ ಒಂದು ಸಂಸ್ಕೃತಿ ಇರುವಂತೆಯೇ ಸಾಸ್ಥಿಕ ರೂಪವೂ ಇದೆ
ಡಾ.ಎಂ.ಜಿ.ಚಂದ್ರಕಾಂತ್ ಬೆಂಗಳೂರಿನ ನಿವೃತ್ತ ಕೃಷಿ ವಿಜ್ಞಾನಿ.
ಶಾಲಾ ಕಾಲೇಜಿನ ವಿದ್ಯಾರ್ಥಿಗಳನ್ನು ಒಂದು ದಿನದಮಟ್ಟಿಗೆ ದೇವರಕಾಡಿಗೆ ಕರೆದುಕೊಂಡು ಹೋಗಿ ಅದರ ಬಗ್ಗೆ ಮಾಹಿತಿ ಕೊಡುವ ಕಾರ್ಯವನ್ನು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಶಿಕ್ಷಕರು ಮಾಡಬೇಕು
ಎಂ.ಪಿ.ಕೇಶವಕಾಮತ್ ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ
ಕೊಡಗಿನಲ್ಲಿ ಹಿಂದೆ 11 ಸಾವಿರ ಎಕರೆ ದೇವರ ಕಾಡಿತ್ತು. ಇಂದು 9 ಸಾವಿರ ಎಕರೆ ಮಾತ್ರ ಉಳಿದಿದೆ. ರಕ್ಷಕರೇ ದೇವರಕಾಡಿನ ಭಕ್ಷಕರಾಗಿದ್ದಾರೆ
-ಗಿಣಿ ಗಣಪತಿ ಅಧ್ಯಕ್ಷ ವನಭದ್ರಕಾಳಿ ದೇವಸ್ಥಾನ ಸಮಿತಿ ಹಾತೂರು.
ಕೊಡಗಿನಲ್ಲಿ ಶೇ33 ರಷ್ಟು ಅರಣ್ಯ ಇರಬೇಕು ಎಂದು ಬ್ರಟಿಷರೇ ಕಾಯ್ದೆ ರೂಪಿಸಿದ್ದರು. ಅಷ್ಟು ಅರಣ್ಯವನ್ನು ನಾವು ರಕ್ಷಿಸಬೇಕಿದೆ
ಕೋಡಿರ ಲೋಕೇಶ್ ನಿವೃತ್ತ ಪ್ರಾಧ್ಯಾಪಕರು ಮಂಗಳೂರು ವಿಶ್ವವಿದ್ಯಾಲಯ