<p><strong>ಗೋಣಿಕೊಪ್ಪಲು (ಕೊಡಗು ಜಿಲ್ಲೆ)</strong>: ಇಲ್ಲಿನ ಕುಟ್ಟದಲ್ಲಿ ಶನಿವಾರ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಬ ಗೌರವ ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು. </p>.<p>ಕುಟ್ಟ ಕೊಡವ ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಹಾಗೂ ಕುಟ್ಟ ಕೊಡವ ಸಮಾಜಕ್ಕೆ ಜಾಗ ದಾನ ನೀಡಿದ ಮುಕ್ಕಾಟಿರ ರಾಜ ಮಂದಣ್ಣ ಸಾಂಸ್ಕೃತಿಕ ಮೆರವಣಿಗೆಗೆ ಚಾಲನೆ ನೀಡಿದರು.</p>.<p>‘ಕೊಡವ ಸಂಸ್ಕೃತಿ ಮುಂದಿನ ತಲೆಮಾರಿಗೂ ಉಳಿಯಲಿ’ ಎಂದು ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಆಶಿಸಿದರು. </p>.<p>‘ಕೊಡವ ಭಾಷೆ, ಆಚಾರ, ವಿಚಾರ, ಸಂಸ್ಕೃತಿ, ಪರಂಪರೆ ಉಳಿಸಲು ಉಳಿಸುವಲ್ಲಿ, ಕೊಡವ ಭಾಷಿಕರಾದ 23 ಸಮಾಜಗಳನ್ನು ಒಟ್ಟುಗೂಡಿಸಿ ಅಕಾಡೆಮಿ ಮುನ್ನಡೆಯುತ್ತಿರುವುದು ವಿಶೇಷ’ ಎಂದು ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ ಶ್ಲಾಘಿಸಿದರು.</p>.<p>ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮಾತನಾಡಿ, ‘ಕೊಡವ ಸಾಹಿತ್ಯವೊಂದೇ ಕೊಡವ ಸಂಸ್ಕೃತಿಯ ಆಧಾರ ಸ್ತಂಭವಾಗಿದೆ’ ಎಂದು ಹೇಳಿದರು.</p>.<p>ಕೊಡವ ಸಂಸ್ಕೃತಿ ಗುಣ-ಲಕ್ಷಣ ಮತ್ತು ನೀತಿ-ನಡತೆ’ ಕುರಿತು ಅಭಿಮನ್ಯು ಫೌಂಡೇಷನ್ ಅಧ್ಯಕ್ಷ, ಖ್ಯಾತ ಅಂತರಾಪ್ಟ್ರೀಯ ಕ್ರೀಡಾಪಟು ತೀತಮಡ ಅರ್ಜುನ್ ದೇವಯ್ಯ, ‘ಕೊಡವ ಭಾಷೆ ಸಂರಕ್ಷಣೆಯಲ್ಲಿ ಜನಾಂಗದವರ ಜವಾಬ್ದಾರಿ’ ಕುರಿತು ಡಾ.ತೀತಿರ ರೇಖಾ ವಸಂತ ವಿಚಾರ ಮಂಡಿಸಿದರು.</p>.<p>‘ಕೊಡವ ಪುಸ್ತಕ ಪತ್ತಾಯ(ಪುಸ್ತಕ ಭಂಡಾರ)’ವನ್ನು ಕುಟ್ಟ ಕೊಡವ ಸಮಾಜದಲ್ಲಿ ಆರಂಭಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೋಣಿಕೊಪ್ಪಲು (ಕೊಡಗು ಜಿಲ್ಲೆ)</strong>: ಇಲ್ಲಿನ ಕುಟ್ಟದಲ್ಲಿ ಶನಿವಾರ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಬ ಗೌರವ ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು. </p>.<p>ಕುಟ್ಟ ಕೊಡವ ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಹಾಗೂ ಕುಟ್ಟ ಕೊಡವ ಸಮಾಜಕ್ಕೆ ಜಾಗ ದಾನ ನೀಡಿದ ಮುಕ್ಕಾಟಿರ ರಾಜ ಮಂದಣ್ಣ ಸಾಂಸ್ಕೃತಿಕ ಮೆರವಣಿಗೆಗೆ ಚಾಲನೆ ನೀಡಿದರು.</p>.<p>‘ಕೊಡವ ಸಂಸ್ಕೃತಿ ಮುಂದಿನ ತಲೆಮಾರಿಗೂ ಉಳಿಯಲಿ’ ಎಂದು ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಆಶಿಸಿದರು. </p>.<p>‘ಕೊಡವ ಭಾಷೆ, ಆಚಾರ, ವಿಚಾರ, ಸಂಸ್ಕೃತಿ, ಪರಂಪರೆ ಉಳಿಸಲು ಉಳಿಸುವಲ್ಲಿ, ಕೊಡವ ಭಾಷಿಕರಾದ 23 ಸಮಾಜಗಳನ್ನು ಒಟ್ಟುಗೂಡಿಸಿ ಅಕಾಡೆಮಿ ಮುನ್ನಡೆಯುತ್ತಿರುವುದು ವಿಶೇಷ’ ಎಂದು ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ ಶ್ಲಾಘಿಸಿದರು.</p>.<p>ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮಾತನಾಡಿ, ‘ಕೊಡವ ಸಾಹಿತ್ಯವೊಂದೇ ಕೊಡವ ಸಂಸ್ಕೃತಿಯ ಆಧಾರ ಸ್ತಂಭವಾಗಿದೆ’ ಎಂದು ಹೇಳಿದರು.</p>.<p>ಕೊಡವ ಸಂಸ್ಕೃತಿ ಗುಣ-ಲಕ್ಷಣ ಮತ್ತು ನೀತಿ-ನಡತೆ’ ಕುರಿತು ಅಭಿಮನ್ಯು ಫೌಂಡೇಷನ್ ಅಧ್ಯಕ್ಷ, ಖ್ಯಾತ ಅಂತರಾಪ್ಟ್ರೀಯ ಕ್ರೀಡಾಪಟು ತೀತಮಡ ಅರ್ಜುನ್ ದೇವಯ್ಯ, ‘ಕೊಡವ ಭಾಷೆ ಸಂರಕ್ಷಣೆಯಲ್ಲಿ ಜನಾಂಗದವರ ಜವಾಬ್ದಾರಿ’ ಕುರಿತು ಡಾ.ತೀತಿರ ರೇಖಾ ವಸಂತ ವಿಚಾರ ಮಂಡಿಸಿದರು.</p>.<p>‘ಕೊಡವ ಪುಸ್ತಕ ಪತ್ತಾಯ(ಪುಸ್ತಕ ಭಂಡಾರ)’ವನ್ನು ಕುಟ್ಟ ಕೊಡವ ಸಮಾಜದಲ್ಲಿ ಆರಂಭಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>