ಮಡಿಕೇರಿ: ಕುಶಾಲನಗರ ನಗರ ಠಾಣೆಯನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವವನ್ನು ಎಡಿಜಿಪಿ ಡಾ.ಎಂ.ಎ.ಸಲೀಂ ಅವರು ಸರ್ಕಾರಕ್ಕೆ ಸಲ್ಲಿಸಿದ್ದಾರೆ.
ಪ್ರಸ್ತುತ ಕುಶಾಲನಗರ ವೃತ್ತದ ವ್ಯಾಪ್ತಿಯಲ್ಲಿ ನಗರ, ಗ್ರಾಮಾಂತರ, ಸಂಚಾರ ಹಾಗೂ ಸುಂಟಿಕೊಪ್ಪ ಠಾಣೆಗಳಿದ್ದವು. ಈಗ ಕುಶಾಲನಗರದ ನಗರ ಠಾಣೆಯನ್ನು ಪ್ರತ್ಯೇಕಿಸಿ ಇನ್ಸ್ಪೆಕ್ಟರ್ನ್ನು ನೇಮಕ ಮಾಡುವುದು. ಜತೆಗೆ, ಸಂಚಾರ ಠಾಣೆಯನ್ನೂ ಕುಶಾಲನಗರ ನಗರ ಠಾಣೆಗೆ ಸೇರಿಸುವ ಅಂಶ ಪ್ರಸ್ತಾವದಲ್ಲಿದೆ.