<p><strong>ಮಡಿಕೇರಿ:</strong> ಕೊಡಗು ಜಿಲ್ಲೆಯಲ್ಲಿ ಮಂಗಳವಾರ ಮಳೆ ತುಸು ತಗ್ಗಿದ್ದರೂ ಗಾಳಿಯ ಆರ್ಭಟ ಮಾತ್ರ ಕಡಿಮೆಯಾಗಿಲ್ಲ. ಭಾರಿ ವೇಗದಲ್ಲಿ ಬೀಸುತ್ತಿರುವ ಗಾಳಿಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.</p>.<p>ಮಡಿಕೇರಿ ನಗರದಲ್ಲಿ ಇನ್ನೂ ಮಳೆ ನಿಂತಿಲ್ಲ. ಒಂದಷ್ಟು ಹೊತ್ತಿಗೆ ಒಮ್ಮೆ ಬಿರುಸಾಗಿಯೇ ಮಳೆ ಸುರಿಯುತ್ತಿದೆ. ಈ ವೇಳೆ ಬೀಸುವ ಗಾಳಿಯಲ್ಲಿ ಕೊಡೆ ಹಿಡಿದು ನಡೆಯುವುದೂ ಕಷ್ಟಕರವಾಗಿ ಪರಿಣಮಿಸಿದೆ. ಕೈಗಳಿಂದ ಕೊಡೆಗಳು ಹಾರಿ ಹೋದರೆ, ಮತ್ತೆ ಕೆಲವು ಬಾರಿ ಕೊಡೆಗಳು ತಿರುಗಿ ಹೋಗುತ್ತಿವೆ. ಜನಜೀವನ ಹಾಗೂ ಜನಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.</p>.<p>ವಿಪರೀತವಾದ ಶೀತ ಗಾಳಿ ಬೀಸುತ್ತಿರುವುದರಿಂದ ಕನಿಷ್ಠ ಉಷ್ಠಾಂಶ ಮಾತ್ರವಲ್ಲ ಗರಿಷ್ಠ ಉಷ್ಣಾಂಶದಲ್ಲೂ ಗಮನೀಯವಾದ ಇಳಿಕೆ ಕಂಡು ಬಂದಿದೆ. 17 ಡಿಗ್ರಿ ಸೆಲ್ಸಿಯಸ್ಗೂ ಕಡಿಮೆ ಉಷ್ಣಾಂಶ ದಾಖಲಾಗಿತ್ತು. ಇದರಿಂದ ಜನರು ಚಳಿಯಿಂದ ನಡುಗುವಂತಾಗಿದೆ.</p>.<p>ಶನಿವಾರಸಂತೆ ಸಮೀಪದ ಕೊಡ್ಲಿಪೇಟೆ–ಸೋಮವಾರವಾರಪೇಟೆ ರಸ್ತೆಗೆ ಮರವೊಂದು ಭಾರಿ ಗಾಳಿಗೆ ಉರುಳಿ ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿತ್ತು. ನಾಪೋಕ್ಲು ಹೋಬಳಿ ಭಾಗದಲ್ಲೂ ಹಲವು ಮನೆಗಳು ಕುಸಿದಿವೆ.</p>.<h2>ಎಲ್ಲೊ ಅಲರ್ಟ್ ಘೋಷಣೆ</h2>.<p>ಮಳೆ ಮುಂದುವರಿಯಲಿದೆ ಎಂದು ಹೇಳಿರುವ ಭಾರತೀಯ ಹವಾಮಾನ ಇಲಾಖೆ ಕೊಡಗು ಜಿಲ್ಲೆಗೆ ಜೂನ್ 25ರಂದು ಎಲ್ಲೊ ಅಲರ್ಟ್ ನೀಡಿದೆ. ಇದರಿಂದ ಬಿಸಿಲಿನ ವಾತಾವರಣ ಬರುವ ಸಾಧ್ಯತೆ ತೀರಾ ಕಡಿಮೆ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ:</strong> ಕೊಡಗು ಜಿಲ್ಲೆಯಲ್ಲಿ ಮಂಗಳವಾರ ಮಳೆ ತುಸು ತಗ್ಗಿದ್ದರೂ ಗಾಳಿಯ ಆರ್ಭಟ ಮಾತ್ರ ಕಡಿಮೆಯಾಗಿಲ್ಲ. ಭಾರಿ ವೇಗದಲ್ಲಿ ಬೀಸುತ್ತಿರುವ ಗಾಳಿಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.</p>.<p>ಮಡಿಕೇರಿ ನಗರದಲ್ಲಿ ಇನ್ನೂ ಮಳೆ ನಿಂತಿಲ್ಲ. ಒಂದಷ್ಟು ಹೊತ್ತಿಗೆ ಒಮ್ಮೆ ಬಿರುಸಾಗಿಯೇ ಮಳೆ ಸುರಿಯುತ್ತಿದೆ. ಈ ವೇಳೆ ಬೀಸುವ ಗಾಳಿಯಲ್ಲಿ ಕೊಡೆ ಹಿಡಿದು ನಡೆಯುವುದೂ ಕಷ್ಟಕರವಾಗಿ ಪರಿಣಮಿಸಿದೆ. ಕೈಗಳಿಂದ ಕೊಡೆಗಳು ಹಾರಿ ಹೋದರೆ, ಮತ್ತೆ ಕೆಲವು ಬಾರಿ ಕೊಡೆಗಳು ತಿರುಗಿ ಹೋಗುತ್ತಿವೆ. ಜನಜೀವನ ಹಾಗೂ ಜನಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.</p>.<p>ವಿಪರೀತವಾದ ಶೀತ ಗಾಳಿ ಬೀಸುತ್ತಿರುವುದರಿಂದ ಕನಿಷ್ಠ ಉಷ್ಠಾಂಶ ಮಾತ್ರವಲ್ಲ ಗರಿಷ್ಠ ಉಷ್ಣಾಂಶದಲ್ಲೂ ಗಮನೀಯವಾದ ಇಳಿಕೆ ಕಂಡು ಬಂದಿದೆ. 17 ಡಿಗ್ರಿ ಸೆಲ್ಸಿಯಸ್ಗೂ ಕಡಿಮೆ ಉಷ್ಣಾಂಶ ದಾಖಲಾಗಿತ್ತು. ಇದರಿಂದ ಜನರು ಚಳಿಯಿಂದ ನಡುಗುವಂತಾಗಿದೆ.</p>.<p>ಶನಿವಾರಸಂತೆ ಸಮೀಪದ ಕೊಡ್ಲಿಪೇಟೆ–ಸೋಮವಾರವಾರಪೇಟೆ ರಸ್ತೆಗೆ ಮರವೊಂದು ಭಾರಿ ಗಾಳಿಗೆ ಉರುಳಿ ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿತ್ತು. ನಾಪೋಕ್ಲು ಹೋಬಳಿ ಭಾಗದಲ್ಲೂ ಹಲವು ಮನೆಗಳು ಕುಸಿದಿವೆ.</p>.<h2>ಎಲ್ಲೊ ಅಲರ್ಟ್ ಘೋಷಣೆ</h2>.<p>ಮಳೆ ಮುಂದುವರಿಯಲಿದೆ ಎಂದು ಹೇಳಿರುವ ಭಾರತೀಯ ಹವಾಮಾನ ಇಲಾಖೆ ಕೊಡಗು ಜಿಲ್ಲೆಗೆ ಜೂನ್ 25ರಂದು ಎಲ್ಲೊ ಅಲರ್ಟ್ ನೀಡಿದೆ. ಇದರಿಂದ ಬಿಸಿಲಿನ ವಾತಾವರಣ ಬರುವ ಸಾಧ್ಯತೆ ತೀರಾ ಕಡಿಮೆ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>