ಮಂಗಗಳು, ಹುಲಿ, ಚಿರತೆ, ಕರಡಿ, ಕಾಡಾನೆ ಸೇರಿದಂತೆ ಯಾವುದೇ ಬಗೆಯ ವನ್ಯಜೀವಿಗಳು ಎದುರಾದಾಗ, ತೋಟಗಳಿಗೆ ನುಗ್ಗಿದಾಗ ಈ ಕೋವಿಯ ಒಳಗೆ ಪಟಾಕಿ ಇಟ್ಟು, ಬಿರಡೆ ಹಾಕಿ ಬತ್ತಿ ಹೊತ್ತಿಸಬೇಕು. ಅದಕ್ಕೂ ಮುಂಚೆ ಕೋವಿಯ ನಳಿಕೆಯ ಒಳಗೆ 20ರಿಂದ 25 ಸಣ್ಣ ಗಾತ್ರದ ಕಲ್ಲುಗಳನ್ನು ತುಂಬಿರಬೇಕು. ಬತ್ತಿ ಹೊತ್ತಿಸುತ್ತಿದ್ದಂತೆ ಪಟಾಕಿ ಸಿಡಿದು ನಳಿಕೆಯ ಮೂಲಕ ಹೊಗೆ ರಭಸದಿಂದ ಹೊರಕ್ಕೆ ಬರುತ್ತದೆ. ಆಗ ನಳಿಕೆಯಲ್ಲಿ ತುಂಬಿರುವ ಕಲ್ಲುಗಳೂ ದೂರಕ್ಕೆ ಸಿಡಿಯುತ್ತವೆ.