ಇದಕ್ಕೂ ಮೊದಲು ನಡೆದ ನಾಗರಹೊಳೆ ಗಿರಿಜನ ಸಮಗ್ರ ಅಭಿವೃದ್ಧಿ ಸಂಸ್ಥೆಯ ಗಾಯಕರಾದ ರಮೇಶ್ ಮತ್ತು ತಂಡದವರು ಬುಡಕಟ್ಟು ಸಮೂಹದ ಹಾಡು ಮತ್ತು ನೃತ್ಯ ಮನಮೋಹಕವಾಗಿತ್ತು. ಎರವ ಮತ್ತುಜೇನು ಕುರುಬ ಭಾಷೆಯ ಹಾಡುಗಳ ಮೂಲಕ ಪ್ರಕ್ಷಕರ ಹೃದಯಕ್ಕೆ ಲಗ್ಗೆ ಇಟ್ಟರು. ನಂಗ ಜೇನುಕುರ ಮಕ್ಕಳು, ಕಾಡೆ ನಂಗ ದೇವರು. ಅಜ್ಜಯ್ಯ ನಂಗ ದೇವ ಎಂಬ ಹಾಡು ಸಭಿಕರನ್ನು ಕುಣಿಸಿತು. ಒಡೆದ ಡ್ರಂ, ಬಿಂದಿಗೆ, ಹಳೆಯ ಪ್ಲಾಸ್ಟಿಕ್ ಡಬ್ಬ, ಬಿದಿರು ಕೋಲುಗಳೇ ಅವರ ವಾದ್ಯ ಪರಿಕರಗಳಾಗಿದ್ದವು.