<p><strong>ಮಡಿಕೇರಿ:</strong> ಸಾಧಕರು, ಸುಧಾರಕರನ್ನು ಕೇವಲ ಅವರ ಜಯಂತಿಗಳಂದು ಮಾತ್ರ ನೆನೆಯದೆ ವರ್ಷಪೂರ್ತಿ ನೆನೆಯಬೇಕು. ಅವರ ಪಥದಲ್ಲಿ ಹೆಜ್ಜೆ ಹಾಕಬೇಕು ಎಂದು ಶಾಸಕ ಡಾ.ಮಂತರ್ಗೌಡ ತಿಳಿಸಿದರು.</p>.<p>ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಭಾನುವಾರ ಇಲ್ಲಿನ ಗಾಂಧಿ ಭವನದಲ್ಲಿ ನಡೆದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಮಡಿವಾಳ ಮಾಚಿದೇವರ ತತ್ವ ಮತ್ತು ಆದರ್ಶಗಳು ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿ ಬೇಕಿದೆ. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಭಾಗಿಯಾಗಿರುವುದರಿಂದ ಇದೊಂದು ಅರ್ಥಪೂರ್ಣ ಕಾರ್ಯಕ್ರಮ ಎನಿಸಿದೆ ಎಂದರು.</p>.<p>ಸಮಾನತೆಯನ್ನು ಮಡಿವಾಳ ಮಾಚಿದೇವರು ಅಂದೇ ಬೋಧಿಸಿದರು. ಆದರೆ, ಇಂದಿಗೂ ಸಮಾನತೆ ಎನ್ನುವುದು ಬಂದಿಲ್ಲ. ಮಕ್ಕಳನ್ನು ವಿಭಜಿಸುತ್ತಿದ್ದೇವೆ. ಇದು ಸರಿಯಲ್ಲ ಎಂದು ಹೇಳಿದರು.</p>.<p>‘ನಾನೊಬ್ಬ ವೈದ್ಯ. ಬಂದ ರೋಗಿಗಳ ಕುಲ, ಜಾತಿ ಕೇಳದೇ ಚಿಕಿತ್ಸೆ ನೀಡುವಂತೆ ರಾಜಕಾರಣಿಯಾಗಿಯೂ ನಾನು ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಸೇವೆಗೈಯ್ಯುತ್ತಿರುವೆ’ ಎಂದರು.</p>.<p>ಮಡಿವಾಳ ಮಾಚಿದೇವ ಅವರು ಸಾಮಾಜಿಕ ಸುಧಾರಣೆಯನ್ನು ಮಾತ್ರ ಮಾಡಲಿಲ್ಲ. ಅವರು ಅಧ್ಯಾತ್ಮಿಕ ಬದುಕನ್ನು ನಡೆಸಿದರು. ಆದರೆ, ಇಂದು ಸಾಮಾಜಿಕ ಕಾಳಜಿ ಯಾರಿಗೂ ಇಲ್ಲ. ಬಹುತೇಕರ ಮಂದಿ ಸಮಾಜ ಸೇವೆಗೆ ಕೊನೆಯ ಆದ್ಯತೆ ನೀಡಿದ್ದಾರೆ ಎಂದು ಹೇಳಿದರು.</p>.<p>‘ನಮಗಿರುವುದಷ್ಟೇ ಸಾಕು, ಇನ್ನೊಬ್ಬರಿಗೆ ಸಹಾಯ ಮಾಡಬೇಕು ಎನ್ನುವುದು ಎಲ್ಲರಲ್ಲೂ ಬರಬೇಕು. ಓದುವುದು ಮಾತ್ರವಲ್ಲ ಸಮಾಜ ಸೇವೆ ಹೇಗೆ ಮಾಡಬೇಕು ಎಂಬುದನ್ನು ಸಹ ಮಕ್ಕಳು ಕಲಿಯಬೇಕು ಎಂದರು.</p>.<p>ಮುಂದಿನ ವರ್ಷದ ಕಾರ್ಯಕ್ರಮದಲ್ಲಿ ಸಮಾಜದ ಭವನದಲ್ಲಿ ಮಾಡಬೇಕು. ಇಂತಹ ಕಾರ್ಯಕ್ರಮಗಳಿಗೆ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿಗಳು ಬರಬೇಕು. ಸಮಾಜದ ಜನರ ಸಮಸ್ಯೆಗಳನ್ನು ಆಲಿಸಬೇಕು ಎಂದರು.</p>.<p>ಇಂತಹ ಕಾರ್ಯಕ್ರಮಗಳಿಗೆ ಮಕ್ಕಳನ್ನು ಒತ್ತಾಯವಾಗಿ ಕರೆಸಬಾರದು ಎಂದೂ ಹೇಳಿದರು.</p>.<p>ತಹಶೀಲ್ದಾರ್ ಶ್ರೀಧರ್, ನಿವೃತ್ತ ಉಪನ್ಯಾಸಕ ಶಂಕರಯ್ಯ, ಮಡಿವಾಳರ ಅಭಿವೃದ್ಧಿ ಸಂಘದ ಅಧ್ಯಕ್ಷ ಪಿ.ಜಿ.ಸುಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ, ಮುಖಂಡರಾದ ಮಂಜುನಾಥ್, ದೀಪಿಕಾ, ಪ್ರಸನ್ನಭಟ್ಟ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ:</strong> ಸಾಧಕರು, ಸುಧಾರಕರನ್ನು ಕೇವಲ ಅವರ ಜಯಂತಿಗಳಂದು ಮಾತ್ರ ನೆನೆಯದೆ ವರ್ಷಪೂರ್ತಿ ನೆನೆಯಬೇಕು. ಅವರ ಪಥದಲ್ಲಿ ಹೆಜ್ಜೆ ಹಾಕಬೇಕು ಎಂದು ಶಾಸಕ ಡಾ.ಮಂತರ್ಗೌಡ ತಿಳಿಸಿದರು.</p>.<p>ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಭಾನುವಾರ ಇಲ್ಲಿನ ಗಾಂಧಿ ಭವನದಲ್ಲಿ ನಡೆದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಮಡಿವಾಳ ಮಾಚಿದೇವರ ತತ್ವ ಮತ್ತು ಆದರ್ಶಗಳು ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿ ಬೇಕಿದೆ. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಭಾಗಿಯಾಗಿರುವುದರಿಂದ ಇದೊಂದು ಅರ್ಥಪೂರ್ಣ ಕಾರ್ಯಕ್ರಮ ಎನಿಸಿದೆ ಎಂದರು.</p>.<p>ಸಮಾನತೆಯನ್ನು ಮಡಿವಾಳ ಮಾಚಿದೇವರು ಅಂದೇ ಬೋಧಿಸಿದರು. ಆದರೆ, ಇಂದಿಗೂ ಸಮಾನತೆ ಎನ್ನುವುದು ಬಂದಿಲ್ಲ. ಮಕ್ಕಳನ್ನು ವಿಭಜಿಸುತ್ತಿದ್ದೇವೆ. ಇದು ಸರಿಯಲ್ಲ ಎಂದು ಹೇಳಿದರು.</p>.<p>‘ನಾನೊಬ್ಬ ವೈದ್ಯ. ಬಂದ ರೋಗಿಗಳ ಕುಲ, ಜಾತಿ ಕೇಳದೇ ಚಿಕಿತ್ಸೆ ನೀಡುವಂತೆ ರಾಜಕಾರಣಿಯಾಗಿಯೂ ನಾನು ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಸೇವೆಗೈಯ್ಯುತ್ತಿರುವೆ’ ಎಂದರು.</p>.<p>ಮಡಿವಾಳ ಮಾಚಿದೇವ ಅವರು ಸಾಮಾಜಿಕ ಸುಧಾರಣೆಯನ್ನು ಮಾತ್ರ ಮಾಡಲಿಲ್ಲ. ಅವರು ಅಧ್ಯಾತ್ಮಿಕ ಬದುಕನ್ನು ನಡೆಸಿದರು. ಆದರೆ, ಇಂದು ಸಾಮಾಜಿಕ ಕಾಳಜಿ ಯಾರಿಗೂ ಇಲ್ಲ. ಬಹುತೇಕರ ಮಂದಿ ಸಮಾಜ ಸೇವೆಗೆ ಕೊನೆಯ ಆದ್ಯತೆ ನೀಡಿದ್ದಾರೆ ಎಂದು ಹೇಳಿದರು.</p>.<p>‘ನಮಗಿರುವುದಷ್ಟೇ ಸಾಕು, ಇನ್ನೊಬ್ಬರಿಗೆ ಸಹಾಯ ಮಾಡಬೇಕು ಎನ್ನುವುದು ಎಲ್ಲರಲ್ಲೂ ಬರಬೇಕು. ಓದುವುದು ಮಾತ್ರವಲ್ಲ ಸಮಾಜ ಸೇವೆ ಹೇಗೆ ಮಾಡಬೇಕು ಎಂಬುದನ್ನು ಸಹ ಮಕ್ಕಳು ಕಲಿಯಬೇಕು ಎಂದರು.</p>.<p>ಮುಂದಿನ ವರ್ಷದ ಕಾರ್ಯಕ್ರಮದಲ್ಲಿ ಸಮಾಜದ ಭವನದಲ್ಲಿ ಮಾಡಬೇಕು. ಇಂತಹ ಕಾರ್ಯಕ್ರಮಗಳಿಗೆ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿಗಳು ಬರಬೇಕು. ಸಮಾಜದ ಜನರ ಸಮಸ್ಯೆಗಳನ್ನು ಆಲಿಸಬೇಕು ಎಂದರು.</p>.<p>ಇಂತಹ ಕಾರ್ಯಕ್ರಮಗಳಿಗೆ ಮಕ್ಕಳನ್ನು ಒತ್ತಾಯವಾಗಿ ಕರೆಸಬಾರದು ಎಂದೂ ಹೇಳಿದರು.</p>.<p>ತಹಶೀಲ್ದಾರ್ ಶ್ರೀಧರ್, ನಿವೃತ್ತ ಉಪನ್ಯಾಸಕ ಶಂಕರಯ್ಯ, ಮಡಿವಾಳರ ಅಭಿವೃದ್ಧಿ ಸಂಘದ ಅಧ್ಯಕ್ಷ ಪಿ.ಜಿ.ಸುಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ, ಮುಖಂಡರಾದ ಮಂಜುನಾಥ್, ದೀಪಿಕಾ, ಪ್ರಸನ್ನಭಟ್ಟ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>