ಕುಟುಂಬಸ್ಥರು ಸಂಗಮದಲ್ಲಿ ಪುಣ್ಯಸ್ನಾನ ಮಾಡುತ್ತಿದ್ದರು. ನೀರಿನ ಹರಿವು ಜೋರಾಗಿದ್ದು ಮಣಿಕಂಠ ಎಂಬುವವರು ನೀರಿನಲ್ಲಿ ಮುಳುಗುತ್ತಿದ್ದರು. ಅವರನ್ನು ರಕ್ಷಣೆ ಮಾಡಿದ ಸುಬ್ರಮಣಿಗೆ ಮೇಲೆ ಬರಲು ಸಾಧ್ಯವಾಗದೇ ಸಾವನ್ನಪ್ಪಿದ್ದಾರೆ. ಇನ್ನು ಯಶೋದ ಹಾಗೂ ಪ್ರಮೀಳಾ ಅವರನ್ನ ಸ್ಥಳೀಯರು ರಕ್ಷಿಸಿದ್ದು ಅವರ ಸ್ಥಿತಿಯೂ ಗಂಭೀರವಾಗಿದೆ. ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.