<p><strong>ನಾಪೋಕ್ಲು</strong>: ಚೆರಿಯ ಪರಂಬು ಮಖಾಂ ಉರುಸ್ ಅಂಗವಾಗಿ ಶುಕ್ರವಾರ ಜಮಾಅತ್ ಅಧ್ಯಕ್ಷ ಹಂಸ ಹಾಜಿ ಧಾರ್ಮಿಕ ಧ್ವಜಾರೋಹಣ ನೆರವೇರಿಸಿದರು.</p>.<p>ನಮಾಜ್ ಬಳಿಕ ಉರುಸ್ ಉದ್ಘಾಟಿಸಲಾಯಿತು. ರಾತ್ರಿ ಅಯ್ಯಂಗೇರಿಯ ರಾಫಿ ಹಿಮಾಮಿ ಕಾಮಿಲ್ ಸಖಾಫಿ ಮುಖ್ಯ ಭಾಷಣ , ಪ್ರಮುಖರಾದ ರಹೂಫ್ ಸಕಾಫಿ, ಜಾಫರ್ ಮಿಸ್ಟಾಯಿ, ಅಹಮದ್ ಪಾಪರಾಟ್, ಪಿ.ಎ.ಹಾರಿಸ್, ಪಿ.ಎಂ.ಮೊಯಿದು, ಎಂ.ಐ ಇಬ್ರಾಹಿಂ ಉಪಸ್ಥಿತರಿದ್ದರು.</p>.<p>ಶನಿವಾರ ರಾತ್ರಿ 8 ಗಂಟೆಗೆ ಜುಬೇರ್ ಮಾಸ್ಟರ್ ತೋಟಕಲ್ ಮತ್ತು ಸಂಗಡಿಗರು ಕಥಾಪ್ರಸಂಗ ನಡೆಸುವರು. ಭಾನುವಾರ ರಾತ್ರಿ 8 ಗಂಟೆಗೆ ಎಮ್ಮೆ ಮಾಡಿನ ಅಶ್ರಫ್ ಚೌಹರಿ ಭಾಷಣ ಮಾಡುವರು. ಸೋಮವಾರ ಮಧ್ಯಾಹ್ನ 2 ಗಂಟೆಗೆ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಜಮಾಅತ್ ಅಧ್ಯಕ್ಷ ಪಿ.ಎ. ಹಂಸ ಹಾಜಿ ಅಧ್ಯಕ್ಷತೆ ವಹಿಸುವರು. ಅಂದು ಕೊಳಕೇರಿಯ ಸುಹೇಬ್ ಫೈಜಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಫೆಬ್ರುವರಿ 17ರಂದು ಸೋಮವಾರ ಸಂಜೆ 4 ಗಂಟೆಗೆ ಪಾರಾಯಣ ಹಾಗೂ ಭಕ್ತರಿಗೆ ಅನ್ನದಾನ ನೆರವೇರಲಿದೆ. ರಾತ್ರಿ ತಿರುವನಂತಪುರದ ಹಾಫಿಳ್ ಮಾಹಿನ್ ಮನ್ನಾನಿ ಮುಖ್ಯ ಭಾಷಣ ಮಾಡುವರು.</p>.<p>ಫೆಬ್ರುವರಿ 18ರ ಮಂಗಳವಾರ ರಾತ್ರಿ ಸಮಾರೋಪ ಸಮಾರಂಭ ನಡೆಯಲಿದ್ದು, ಚೆರಿಯ ಪರಂಬು ಜಮಾಯತ್ ಉಪಾಧ್ಯಕ್ಷ ಪಿ.ಎಂ ಸಾಧಲಿ ಅಧ್ಯಕ್ಷತೆ ವಹಿಸುವರು. ಅಂದು ಎಡಪಾಲದ ಶೈಕುನಾ ಅಬ್ದುಲ್ ಫೈಜಿ ಮುಖ್ಯ ಭಾಷಣ ನೆರವೇರಿಸುವರು ಎಂದು ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಪೋಕ್ಲು</strong>: ಚೆರಿಯ ಪರಂಬು ಮಖಾಂ ಉರುಸ್ ಅಂಗವಾಗಿ ಶುಕ್ರವಾರ ಜಮಾಅತ್ ಅಧ್ಯಕ್ಷ ಹಂಸ ಹಾಜಿ ಧಾರ್ಮಿಕ ಧ್ವಜಾರೋಹಣ ನೆರವೇರಿಸಿದರು.</p>.<p>ನಮಾಜ್ ಬಳಿಕ ಉರುಸ್ ಉದ್ಘಾಟಿಸಲಾಯಿತು. ರಾತ್ರಿ ಅಯ್ಯಂಗೇರಿಯ ರಾಫಿ ಹಿಮಾಮಿ ಕಾಮಿಲ್ ಸಖಾಫಿ ಮುಖ್ಯ ಭಾಷಣ , ಪ್ರಮುಖರಾದ ರಹೂಫ್ ಸಕಾಫಿ, ಜಾಫರ್ ಮಿಸ್ಟಾಯಿ, ಅಹಮದ್ ಪಾಪರಾಟ್, ಪಿ.ಎ.ಹಾರಿಸ್, ಪಿ.ಎಂ.ಮೊಯಿದು, ಎಂ.ಐ ಇಬ್ರಾಹಿಂ ಉಪಸ್ಥಿತರಿದ್ದರು.</p>.<p>ಶನಿವಾರ ರಾತ್ರಿ 8 ಗಂಟೆಗೆ ಜುಬೇರ್ ಮಾಸ್ಟರ್ ತೋಟಕಲ್ ಮತ್ತು ಸಂಗಡಿಗರು ಕಥಾಪ್ರಸಂಗ ನಡೆಸುವರು. ಭಾನುವಾರ ರಾತ್ರಿ 8 ಗಂಟೆಗೆ ಎಮ್ಮೆ ಮಾಡಿನ ಅಶ್ರಫ್ ಚೌಹರಿ ಭಾಷಣ ಮಾಡುವರು. ಸೋಮವಾರ ಮಧ್ಯಾಹ್ನ 2 ಗಂಟೆಗೆ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಜಮಾಅತ್ ಅಧ್ಯಕ್ಷ ಪಿ.ಎ. ಹಂಸ ಹಾಜಿ ಅಧ್ಯಕ್ಷತೆ ವಹಿಸುವರು. ಅಂದು ಕೊಳಕೇರಿಯ ಸುಹೇಬ್ ಫೈಜಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಫೆಬ್ರುವರಿ 17ರಂದು ಸೋಮವಾರ ಸಂಜೆ 4 ಗಂಟೆಗೆ ಪಾರಾಯಣ ಹಾಗೂ ಭಕ್ತರಿಗೆ ಅನ್ನದಾನ ನೆರವೇರಲಿದೆ. ರಾತ್ರಿ ತಿರುವನಂತಪುರದ ಹಾಫಿಳ್ ಮಾಹಿನ್ ಮನ್ನಾನಿ ಮುಖ್ಯ ಭಾಷಣ ಮಾಡುವರು.</p>.<p>ಫೆಬ್ರುವರಿ 18ರ ಮಂಗಳವಾರ ರಾತ್ರಿ ಸಮಾರೋಪ ಸಮಾರಂಭ ನಡೆಯಲಿದ್ದು, ಚೆರಿಯ ಪರಂಬು ಜಮಾಯತ್ ಉಪಾಧ್ಯಕ್ಷ ಪಿ.ಎಂ ಸಾಧಲಿ ಅಧ್ಯಕ್ಷತೆ ವಹಿಸುವರು. ಅಂದು ಎಡಪಾಲದ ಶೈಕುನಾ ಅಬ್ದುಲ್ ಫೈಜಿ ಮುಖ್ಯ ಭಾಷಣ ನೆರವೇರಿಸುವರು ಎಂದು ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>