ಗೋಣಿಕೊಪ್ಪಲು: ಕಿರುಗೂರು ಬಳಿಯ ರುದ್ರಬೀಡುವಿನಲ್ಲಿ ಕಾಡುಹಂದಿಯೊಂದು ಬಾಲಕಿಯ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ.
ಲಕ್ಷ್ಮಿ (6) ಗಾಯಗೊಂಡಿರುವ ಬಾಲಕಿ. ಬಾಲಕಿ ತಂದೆ ಸುರೇಶ್ ಜೊತೆಯಲ್ಲಿ ಕಾಫಿ ತೋಟದಲ್ಲಿ ಅಡ್ಡಾಡುತ್ತಿದ್ದಾಗ ಕಾಡು ಹಂದಿಯೊಂದು ದಿಢೀರನೆ ಎದುರಾಯಿತು ಎನ್ನಲಾಗಿದೆ. ಓಡುವ ಭರದಲ್ಲಿ ಎದುರುಗಿದ್ದ ಲಕ್ಷ್ಮಿಯ ಮೇಲೆ ಕಾಡು ಹಂದಿ ದಾಳಿ ನಡೆಸಿತು. ಇದರಿಂದ ಮಗುವಿನ ಎಡಗಾಲಿನ ಭಾಗಕ್ಕೆ ಗಾಯವಾಗಿದೆ.
ಗೋಣಿಕೊಪ್ಪಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಮಗು ಪ್ರಾಣಾಪಾಯದಿಂದ ಪಾರಾಗಿದೆ ಎಂದು ತಿತಿಮತಿ ಆರ್ಎಫ್ಒ ಅಶೋಕ್ ಹುನಗುಂದ ತಿಳಿಸಿದ್ದಾರೆ.