ಸಿದ್ದಾಪುರದ ಬಾಡಗ ಬಾಣಂಗಾಲ ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದ ಕಾಡಾನೆ ಹಿಂಡಿನಲ್ಲಿ ಒಂದು ಹೆಣ್ಣಾನೆ ಹಾಗೂ ಅರಣ್ಯದಂಚಿನಲ್ಲಿದ್ದ ಮತ್ತೊಂದು ಹೆಣ್ಣಾನೆಗೆ ಸಾಕಾನೆಗಳಾದ ಅಭಿಮನ್ಯು, ಕೃಷ್ಣ ಮತ್ತು ಭೀಮಾ ಸಹಾಯದಿಂದ ರೇಡಿಯೊ ಕಾಲರ್ ಅಳವಡಿಸಲಾಯಿತ್ತು. ಈ ಹಿಂದೆಯೂ ಕೂಡ ಕಾಡಾನೆಗಳಿಗೆ ರೇಡಿಯೊ ಕಾಲರ್ಗಳನ್ನು ಅಳವಡಿಸಲಾಗಿದ್ದು, ಕಾಡಾನೆಗಳು ನಾಡಿಗೆ ಲಗ್ಗೆಯಿಡುವ ಸಂದರ್ಭ ಅರಣ್ಯ ಇಲಾಖೆಯ ವತಿಯಿಂದ ಕಾಫಿ ತೋಟದ ಮಾಲೀಕರಿಗೆ ಮೊಬೈಲ್ಗೆ ಸಂದೇಶದ ಮೂಲಕ ಎಚ್ಚರಿಕೆ ನೀಡಲಾಗುತ್ತಿದೆ.
ಕಾರ್ಯಾಚರಣೆಯಲ್ಲಿ ವಿರಾಜಪೇಟೆ ತಾಲ್ಲೂಕು ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯ ಕ್ರಿಸ್ತರಾಜ್, ಎಸಿಎಫ್ ಶ್ರೀಪತಿ, ಉಪ ವಲಯ ಅರಣ್ಯಾಧಿಕಾರಿ ದೇವಯ್ಯ, ಅರಣ್ಯ ವೈದ್ಯಾಧಿಕಾರಿ ಡಾ.ಮುಜೀಬ್ ಸೇರಿದಂತೆ ಸಿಬ್ಬಂದಿಗಳು ಇದ್ದರು.