<p><strong>ಸಿದ್ದಾಪುರ:</strong> ಬುದ್ಧಿಮಾಂದ್ಯ ಮಗನಿಗೆ ಪೋಷಕರೇ ಕಾಲಿಗೆ ಸರಪಳಿ ಕಟ್ಟಿ ಆರೈಕೆ ಮಾಡುತ್ತಿದ್ದಾರೆ. ಕಾಡಿನಂಚಿನ ಅವರೆಗುಂದ ಗ್ರಾಮದ ಎಚ್.ಪಿ.ಹರೀಶ, ಲೀಲಾವತಿ ದಂಪತಿ ಮೂವರು ಮಕ್ಕಳಲ್ಲಿ ಕೊನೆಯವನಾದ ಪ್ರವೀಣ (13) ಹೀಗೆ ಬಂದಿಯಾಗಿ ಬಾಲ್ಯ ಕಳೆಯುತ್ತಿರುವ ಬಾಲಕ.</p>.<p>‘ಮುಕ್ತವಾಗಿ ಬಿಟ್ಟರೆ ಕಾಡಿಗೆ ಹೋಗಿ ಸೊಪ್ಪು, ಎಲೆ ತಿನ್ನಲು ಪ್ರಾರಂಭಿಸುತ್ತಾನೆ. ವನ್ಯಮೃಗಗಳಿಗೆ ಸಿಕ್ಕಿಬೀಳುವ ಆತಂಕ ನಮ್ಮದು. ಅನಿವಾರ್ಯವಾಗಿ ಕಟ್ಟಿ ಹಾಕಬೇಕಾದ ಸ್ಥಿತಿ ನಿರ್ಮರ್ಣವಾಗಿದೆ’ ಎನ್ನುತ್ತಾರೆ ಪೋಷಕರು.</p>.<p>‘ಬುದ್ಧಿಮಾಂದ್ಯನಾದ ಈತ ಬಟ್ಟೆ ತೊಡಿಸಿದರೂ ಕಳಚಿ ಬೆತ್ತಲೆ ಇರುತ್ತಾನೆ. ಬಟ್ಟೆ ಕಿತ್ತೊಗೆಯುತ್ತಾನೆ. ಸರಿಯಾಗಿ ಆಹಾರ ಸೇವಿಸುತ್ತಿಲ್ಲ. ಕಟ್ಟಿಹಾಕುವುದು ನಮಗೂ ಹಿಂಸೆಯೇ. ಆದರೂ, ಸಮಸ್ಯೆಯಾಗಬಾರದು ಎಂದು ಕಟ್ಟಿ ಸಾಕಬೇಕಾದ ಸ್ಥಿತಿ ಇದೆ’ ಎಂದು ಪೋಷಕರು ಕಣ್ಣೀರು ಹಾಕುತ್ತಾರೆ.</p>.<p>ಮಗನ ಆರೋಗ್ಯ ಚಿಕಿತ್ಸೆಗೆ ನೆರವಾಗುವಂತೆ ಕೋರಿ ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೂ ಮನವಿ ಮಾಡಿದ್ದೆವು. ಆದರೆ ಸ್ಪಂದಿಸಲಿಲ್ಲ. ಸರ್ಕಾರ ಕೂಡ ತಮ್ಮ ಪಾಲಿಗೆ ಇಲ್ಲ ಎಂದು ಹರೀಶ ನೋವು ತೋಡಿಕೊಳ್ಳುತ್ತಾರೆ.</p>.<p>ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಕೆಲ ವರ್ಷಗಳ ಹಿಂದೆ ಭೇಟಿ ನೀಡಿದ್ದರು. ಆದರೆ, ಇದುವರೆಗೂ ಸಹಾಯ ದೊರಕಲಿಲ್ಲ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿದ್ದಾಪುರ:</strong> ಬುದ್ಧಿಮಾಂದ್ಯ ಮಗನಿಗೆ ಪೋಷಕರೇ ಕಾಲಿಗೆ ಸರಪಳಿ ಕಟ್ಟಿ ಆರೈಕೆ ಮಾಡುತ್ತಿದ್ದಾರೆ. ಕಾಡಿನಂಚಿನ ಅವರೆಗುಂದ ಗ್ರಾಮದ ಎಚ್.ಪಿ.ಹರೀಶ, ಲೀಲಾವತಿ ದಂಪತಿ ಮೂವರು ಮಕ್ಕಳಲ್ಲಿ ಕೊನೆಯವನಾದ ಪ್ರವೀಣ (13) ಹೀಗೆ ಬಂದಿಯಾಗಿ ಬಾಲ್ಯ ಕಳೆಯುತ್ತಿರುವ ಬಾಲಕ.</p>.<p>‘ಮುಕ್ತವಾಗಿ ಬಿಟ್ಟರೆ ಕಾಡಿಗೆ ಹೋಗಿ ಸೊಪ್ಪು, ಎಲೆ ತಿನ್ನಲು ಪ್ರಾರಂಭಿಸುತ್ತಾನೆ. ವನ್ಯಮೃಗಗಳಿಗೆ ಸಿಕ್ಕಿಬೀಳುವ ಆತಂಕ ನಮ್ಮದು. ಅನಿವಾರ್ಯವಾಗಿ ಕಟ್ಟಿ ಹಾಕಬೇಕಾದ ಸ್ಥಿತಿ ನಿರ್ಮರ್ಣವಾಗಿದೆ’ ಎನ್ನುತ್ತಾರೆ ಪೋಷಕರು.</p>.<p>‘ಬುದ್ಧಿಮಾಂದ್ಯನಾದ ಈತ ಬಟ್ಟೆ ತೊಡಿಸಿದರೂ ಕಳಚಿ ಬೆತ್ತಲೆ ಇರುತ್ತಾನೆ. ಬಟ್ಟೆ ಕಿತ್ತೊಗೆಯುತ್ತಾನೆ. ಸರಿಯಾಗಿ ಆಹಾರ ಸೇವಿಸುತ್ತಿಲ್ಲ. ಕಟ್ಟಿಹಾಕುವುದು ನಮಗೂ ಹಿಂಸೆಯೇ. ಆದರೂ, ಸಮಸ್ಯೆಯಾಗಬಾರದು ಎಂದು ಕಟ್ಟಿ ಸಾಕಬೇಕಾದ ಸ್ಥಿತಿ ಇದೆ’ ಎಂದು ಪೋಷಕರು ಕಣ್ಣೀರು ಹಾಕುತ್ತಾರೆ.</p>.<p>ಮಗನ ಆರೋಗ್ಯ ಚಿಕಿತ್ಸೆಗೆ ನೆರವಾಗುವಂತೆ ಕೋರಿ ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೂ ಮನವಿ ಮಾಡಿದ್ದೆವು. ಆದರೆ ಸ್ಪಂದಿಸಲಿಲ್ಲ. ಸರ್ಕಾರ ಕೂಡ ತಮ್ಮ ಪಾಲಿಗೆ ಇಲ್ಲ ಎಂದು ಹರೀಶ ನೋವು ತೋಡಿಕೊಳ್ಳುತ್ತಾರೆ.</p>.<p>ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಕೆಲ ವರ್ಷಗಳ ಹಿಂದೆ ಭೇಟಿ ನೀಡಿದ್ದರು. ಆದರೆ, ಇದುವರೆಗೂ ಸಹಾಯ ದೊರಕಲಿಲ್ಲ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>