<p><strong>ವಿರಾಜಪೇಟೆ:</strong> ಗುರುವಾರ ನಿರ್ಬಂಧ ಸಡಿಲಿಸಿದ ಅವಧಿಯನ್ನು ಹೊರತುಪಡಿಸಿದಂತೆ ಉಳಿದ ಅವಧಿಯಲ್ಲಿ ಪಟ್ಟಣ ಸಂಪೂರ್ಣ ಲಾಕ್ಡೌನ್ ಆಗಿತ್ತು.</p>.<p>ಜಿಲ್ಲಾಧಿಕಾರಿಗಳ ಆದೇಶದಂತೆ ಬೆಳಿಗ್ಗೆ 6 ರಿಂದ ಅಪರಾಹ್ನ 12ರವರೆಗೆ ನಿರ್ಬಂಧ ಸಡಿಲಿಸಿದ್ದರಿಂದ ಬಹುತೇಕ ವ್ಯಾಪಾರಿಗಳು ಬೆಳಿಗ್ಗೆ 6ಕ್ಕೆ ಅಂಗಡಿಗಳನ್ನು ತೆರೆದಿದ್ದರು. ಇದರಿಂದಾಗಿ ಬೆಳಿಗ್ಗೆ 6 ರಿಂದಲೇ ನಗರ ಹಾಗೂ ಸುತ್ತಮುತ್ತಲಿನ ಗ್ರಾಮದವರು ಅಗತ್ಯ ವಸ್ತುಗಳ ಖರೀದಿಗಾಗಿ ಪಟ್ಟಣಕ್ಕೆ ಆಗಮಿಸಿದ್ದು ಕಂಡು ಬಂತು.</p>.<p>ಬೆಳಿಗ್ಗೆ ಸುಮಾರು 8ರ ಸಮಯಕ್ಕೆ ಸಾಕಷ್ಟು ಅಂಗಡಿಗಳಲ್ಲಿ ಗ್ರಾಹಕರ ದಟ್ಟಣೆ ಸಾಕಷ್ಟು ಹೆಚ್ಚಾಗಿತ್ತು. ಕೆಲಕಾಲ ವಾಹನ ದಟ್ಟಣೆ ಹೆಚ್ಚಾದ್ದರಿಂದ ಟ್ರಾಫಿಕ್ ಜಾಂ ಕೂಡ ಉಂಟಾಗಿ ಪೊಲೀಸರು ಪರದಾಡುವಂತಾಯಿತು.</p>.<p>ಪಟ್ಟಣದ ಕೆಲವು ಔಷಧ ಅಂಗಡಿಗಳು ಸೇರಿದಂತೆ ಇತರ ಅಂಗಡಿಗಳ ಮುಂಭಾಗದಲ್ಲಿ ಸಾಮಾಜಿಕ ಅಂತರವನನು ಕಾಯ್ದುಕೊಳ್ಳುವ ಉದ್ದೇಶದಿಂದ ಗೆರೆಗಳನ್ನು ಎಳೆಯಲಾಗಿತ್ತು. ಇದನ್ನು ಅನುಸರಿಸಿ ಗ್ರಾಹಕರು ಖರೀದಿಯನ್ನು ನಡೆಸುತ್ತಿದ್ದರು.</p>.<p>ತರಕಾರಿಯ ಬೆಲೆ ಗಗನಕ್ಕೇರಿರಿದ್ದು, ರಕ್ಷಣಾ ವೇದಿಕೆಯ ಕಾರ್ಯಕರ್ತರು ಗುರುವಾರ ಪಟ್ಟಣದಲ್ಲಿ ತರಕಾರಿ ಮಾರಾಟವನ್ನು ಮಾಡಿದರು, ಈ ನಡೆಗೆ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದರು.</p>.<p>ಮಧ್ಯಾಹ್ನ 12ಕ್ಕೆ ಸಾರ್ವಜನಿಕರಿಗೆ ಮನೆಗೆ ಹಿಂದಿರುಗಲು ಪಟ್ಟಣ ಪಂಚಾಯಿತಿಯ ಸೈರನ್ ಮೊಳಗಿಸಲಾಯಿತು. ಪೊಲೀಸರು ಎಲ್ಲರನ್ನು ಒತ್ತಾಯದಿಂದ ಚದುರಿಸಿ ಮನೆಗೆ ಹೋಗುವಂತೆ ಕಳುಹಿಸುತ್ತಿರುವುದು ಕಂಡು ಬಂತು.</p>.<p>ಪ್ರತ್ಯೇಕ ಘಟಕ ಆರಂಭ: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರ ಜ್ವರದ ರೋಗಿಗಳಿಗಾಗಿ ತಪಾಸಣೆಯ ಪ್ರತ್ಯೇಕ ಘಟಕವನ್ನು ಆರಂಭಿಸಲಾಗಿದೆ. ಬೆಳಗಿನಿಂದ ಅಪರಾಹ್ನ 1ರವರೆಗೆ ತನಕ ಒಟ್ಟು 148 ಮಂದಿ ಈ ಘಟಕದಲ್ಲಿ ಜ್ವರ ತಪಾಸಣೆ ಮಾಡಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಸ್ವಯಂ ಘೋಷಣೆ ಮಾಡಿಕೊಂಡಿರುವ ವಿದೇಶಿಯರ ಸಂಖ್ಯೆ 39ಕ್ಕೆ ಏರಿದೆ. ಎಲ್ಲರೂ 15 ದಿನಗಳ ತನಕ ನಿಗಾ ಘಟಕದಲ್ಲಿರುವಂತೆ ಸೂಚನೆ ನೀಡಿರುವುದಾಗಿ ತಿಳಿಸಿದ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ವಿಶ್ವನಾಥ್ ಸಿಂಪಿ ತಿಳಿಸಿದ್ದಾರೆ.</p>.<p>39 ಮಂದಿ ಪೈಕಿ ಯಾರಿಗೂ ಕೊರೊನಾ ಸೋಂಕು ತಗಲಿರುವಂತೆ ಕಂಡು ಬಂದಿಲ್ಲ ಎಂದರು. ಮುಂಜಾಗ್ರತ ಕ್ರಮವಾಗಿ ಆಸ್ಪತ್ರೆಯ ಎಲ್ಲ ವೈದ್ಯರು ಹಾಗೂ ಸಿಬ್ಬಂದಿ ಸೇವೆ ಸಲ್ಲಿಸುತ್ತಿರುವುದಾಗಿ ಅವರು ತಿಳಿಸಿದರು.</p>.<p>ಸರ್ಕಾರದ ಲಾಕ್ ಡೌನ್ ಆದೇಶದಂತೆ ವಿರಾಜಪೇಟೆಯಲ್ಲಿ ಜನ ಸಂಚಾರವನ್ನು ನಿಯಂತ್ರಿಸಿ ಮನೆಯಲ್ಲಿಯೇ ಇರುವಂತೆ ಪೊಲೀಸ್ ಸಿಬ್ಬಂದಿ ಸೂಚನೆ ನೀಡಿ ಕಳಿಸುತ್ತಿದ್ದಾರೆ.</p>.<p>ಈ ಕುರಿತು ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ ಊಟ, ಉಪಹಾರಕ್ಕಾಗಿ ಪಟ್ಟಣದ ಸಮುಚ್ಚಯ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಕ್ಯಾಂಟೀನ್ನ್ನು ಆರಂಭಿಸಲಾಗಿದೆ.</p>.<p>ಪ್ರತಿದಿನ 50ರಿಂದ 60 ಮಂದಿ ಪೊಲೀಸ್ ಸಿಬ್ಬಂದಿಗೆ ಕ್ಯಾಂಟೀನ್ನಿಂದ ಆಹಾರ ಸರಬರಾಜು ಮಾಡಲಾಗುತ್ತಿದೆ. ಶುಚಿತ್ವಕ್ಕೆ ಆದ್ಯತೆ ನೀಡಿ ಪೊಲೀಸ್ ಸಿಬ್ಬಂದಿಗಳೇ ಆಹಾರ ತಯಾರಿಸುತ್ತಿದ್ದಾರೆ ಎಂದು ಡಿವೈಎಸ್ಪಿ ಸಿ.ಟಿ.ಜಯಕುಮಾರ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿರಾಜಪೇಟೆ:</strong> ಗುರುವಾರ ನಿರ್ಬಂಧ ಸಡಿಲಿಸಿದ ಅವಧಿಯನ್ನು ಹೊರತುಪಡಿಸಿದಂತೆ ಉಳಿದ ಅವಧಿಯಲ್ಲಿ ಪಟ್ಟಣ ಸಂಪೂರ್ಣ ಲಾಕ್ಡೌನ್ ಆಗಿತ್ತು.</p>.<p>ಜಿಲ್ಲಾಧಿಕಾರಿಗಳ ಆದೇಶದಂತೆ ಬೆಳಿಗ್ಗೆ 6 ರಿಂದ ಅಪರಾಹ್ನ 12ರವರೆಗೆ ನಿರ್ಬಂಧ ಸಡಿಲಿಸಿದ್ದರಿಂದ ಬಹುತೇಕ ವ್ಯಾಪಾರಿಗಳು ಬೆಳಿಗ್ಗೆ 6ಕ್ಕೆ ಅಂಗಡಿಗಳನ್ನು ತೆರೆದಿದ್ದರು. ಇದರಿಂದಾಗಿ ಬೆಳಿಗ್ಗೆ 6 ರಿಂದಲೇ ನಗರ ಹಾಗೂ ಸುತ್ತಮುತ್ತಲಿನ ಗ್ರಾಮದವರು ಅಗತ್ಯ ವಸ್ತುಗಳ ಖರೀದಿಗಾಗಿ ಪಟ್ಟಣಕ್ಕೆ ಆಗಮಿಸಿದ್ದು ಕಂಡು ಬಂತು.</p>.<p>ಬೆಳಿಗ್ಗೆ ಸುಮಾರು 8ರ ಸಮಯಕ್ಕೆ ಸಾಕಷ್ಟು ಅಂಗಡಿಗಳಲ್ಲಿ ಗ್ರಾಹಕರ ದಟ್ಟಣೆ ಸಾಕಷ್ಟು ಹೆಚ್ಚಾಗಿತ್ತು. ಕೆಲಕಾಲ ವಾಹನ ದಟ್ಟಣೆ ಹೆಚ್ಚಾದ್ದರಿಂದ ಟ್ರಾಫಿಕ್ ಜಾಂ ಕೂಡ ಉಂಟಾಗಿ ಪೊಲೀಸರು ಪರದಾಡುವಂತಾಯಿತು.</p>.<p>ಪಟ್ಟಣದ ಕೆಲವು ಔಷಧ ಅಂಗಡಿಗಳು ಸೇರಿದಂತೆ ಇತರ ಅಂಗಡಿಗಳ ಮುಂಭಾಗದಲ್ಲಿ ಸಾಮಾಜಿಕ ಅಂತರವನನು ಕಾಯ್ದುಕೊಳ್ಳುವ ಉದ್ದೇಶದಿಂದ ಗೆರೆಗಳನ್ನು ಎಳೆಯಲಾಗಿತ್ತು. ಇದನ್ನು ಅನುಸರಿಸಿ ಗ್ರಾಹಕರು ಖರೀದಿಯನ್ನು ನಡೆಸುತ್ತಿದ್ದರು.</p>.<p>ತರಕಾರಿಯ ಬೆಲೆ ಗಗನಕ್ಕೇರಿರಿದ್ದು, ರಕ್ಷಣಾ ವೇದಿಕೆಯ ಕಾರ್ಯಕರ್ತರು ಗುರುವಾರ ಪಟ್ಟಣದಲ್ಲಿ ತರಕಾರಿ ಮಾರಾಟವನ್ನು ಮಾಡಿದರು, ಈ ನಡೆಗೆ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದರು.</p>.<p>ಮಧ್ಯಾಹ್ನ 12ಕ್ಕೆ ಸಾರ್ವಜನಿಕರಿಗೆ ಮನೆಗೆ ಹಿಂದಿರುಗಲು ಪಟ್ಟಣ ಪಂಚಾಯಿತಿಯ ಸೈರನ್ ಮೊಳಗಿಸಲಾಯಿತು. ಪೊಲೀಸರು ಎಲ್ಲರನ್ನು ಒತ್ತಾಯದಿಂದ ಚದುರಿಸಿ ಮನೆಗೆ ಹೋಗುವಂತೆ ಕಳುಹಿಸುತ್ತಿರುವುದು ಕಂಡು ಬಂತು.</p>.<p>ಪ್ರತ್ಯೇಕ ಘಟಕ ಆರಂಭ: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರ ಜ್ವರದ ರೋಗಿಗಳಿಗಾಗಿ ತಪಾಸಣೆಯ ಪ್ರತ್ಯೇಕ ಘಟಕವನ್ನು ಆರಂಭಿಸಲಾಗಿದೆ. ಬೆಳಗಿನಿಂದ ಅಪರಾಹ್ನ 1ರವರೆಗೆ ತನಕ ಒಟ್ಟು 148 ಮಂದಿ ಈ ಘಟಕದಲ್ಲಿ ಜ್ವರ ತಪಾಸಣೆ ಮಾಡಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಸ್ವಯಂ ಘೋಷಣೆ ಮಾಡಿಕೊಂಡಿರುವ ವಿದೇಶಿಯರ ಸಂಖ್ಯೆ 39ಕ್ಕೆ ಏರಿದೆ. ಎಲ್ಲರೂ 15 ದಿನಗಳ ತನಕ ನಿಗಾ ಘಟಕದಲ್ಲಿರುವಂತೆ ಸೂಚನೆ ನೀಡಿರುವುದಾಗಿ ತಿಳಿಸಿದ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ವಿಶ್ವನಾಥ್ ಸಿಂಪಿ ತಿಳಿಸಿದ್ದಾರೆ.</p>.<p>39 ಮಂದಿ ಪೈಕಿ ಯಾರಿಗೂ ಕೊರೊನಾ ಸೋಂಕು ತಗಲಿರುವಂತೆ ಕಂಡು ಬಂದಿಲ್ಲ ಎಂದರು. ಮುಂಜಾಗ್ರತ ಕ್ರಮವಾಗಿ ಆಸ್ಪತ್ರೆಯ ಎಲ್ಲ ವೈದ್ಯರು ಹಾಗೂ ಸಿಬ್ಬಂದಿ ಸೇವೆ ಸಲ್ಲಿಸುತ್ತಿರುವುದಾಗಿ ಅವರು ತಿಳಿಸಿದರು.</p>.<p>ಸರ್ಕಾರದ ಲಾಕ್ ಡೌನ್ ಆದೇಶದಂತೆ ವಿರಾಜಪೇಟೆಯಲ್ಲಿ ಜನ ಸಂಚಾರವನ್ನು ನಿಯಂತ್ರಿಸಿ ಮನೆಯಲ್ಲಿಯೇ ಇರುವಂತೆ ಪೊಲೀಸ್ ಸಿಬ್ಬಂದಿ ಸೂಚನೆ ನೀಡಿ ಕಳಿಸುತ್ತಿದ್ದಾರೆ.</p>.<p>ಈ ಕುರಿತು ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ ಊಟ, ಉಪಹಾರಕ್ಕಾಗಿ ಪಟ್ಟಣದ ಸಮುಚ್ಚಯ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಕ್ಯಾಂಟೀನ್ನ್ನು ಆರಂಭಿಸಲಾಗಿದೆ.</p>.<p>ಪ್ರತಿದಿನ 50ರಿಂದ 60 ಮಂದಿ ಪೊಲೀಸ್ ಸಿಬ್ಬಂದಿಗೆ ಕ್ಯಾಂಟೀನ್ನಿಂದ ಆಹಾರ ಸರಬರಾಜು ಮಾಡಲಾಗುತ್ತಿದೆ. ಶುಚಿತ್ವಕ್ಕೆ ಆದ್ಯತೆ ನೀಡಿ ಪೊಲೀಸ್ ಸಿಬ್ಬಂದಿಗಳೇ ಆಹಾರ ತಯಾರಿಸುತ್ತಿದ್ದಾರೆ ಎಂದು ಡಿವೈಎಸ್ಪಿ ಸಿ.ಟಿ.ಜಯಕುಮಾರ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>