* ಬೆಳಿಗ್ಗೆ 5ರಿಂದ ಬೆಳಿಗ್ಗೆ 7ರ ತನಕ ದಿನಪತ್ರಿಕೆ ಸೆಗ್ರಿಗೇಷನ್ (ವಿಭಜನೆ) ಮಾಡಲು ವಿತರಣೆದಾರರಿಗೆ ಹಾಗೂ ದಿನಪತ್ರಿಕೆಯನ್ನು ಮನೆ ಮನೆಗೆ ವಿತರಣೆ ಮಾಡುವ ಪೇಪರ್ ಬಾಯ್ಸ್ಗಳಿಗೆ ಪೇಪರ್ ವಿತರಿಸಲು ಬೆಳಿಗ್ಗೆ 8.30ರ ವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
* ಬೆಳಿಗ್ಗೆ 6ರಿಂದ ಬೆಳಿಗ್ಗೆ 8ರ ತನಕ ಸಾರ್ವಜನಿಕರಿಗೆ ಹಾಲು ಮತ್ತು ದಿನಪತ್ರಿಕೆ ಖರೀದಿಗೆ ಮತ್ತು ಹಾಲು ವಿತರಕರಿಗೆ ಹಾಲು ವಿತರಿಸಲು ಅವಕಾಶ ಕಲ್ಪಿಸಲಾಗಿದೆ.
* ಜಿಲ್ಲೆಯ ಕಾಫಿ ತೋಟಗಳಿಗೆ ಕಾರ್ಮಿಕರು ಗುಂಪಾಗಿ ತೆರಳುವುದು ಮತ್ತು ಗುಂಪಾಗಿ ಕೆಲಸ ಮಾಡುವುದು ಕಂಡು ಬಂದಿದ್ದು, ಈ ರೀತಿ ಗುಂಪಾಗಿ ತೆರಳಿ ಕೆಲಸ ಮಾಡುವುದನ್ನು ನಿಷೇಧಿಸಲಾಗಿದೆ.
* ಸರ್ಕಾರಿ ನ್ಯಾಯಬೆಲೆ ಅಂಗಡಿಗಳಿಗೆ ವಿನಾಯಿತಿ ನೀಡಲಾಗಿದೆ.