‘ಪ್ರಜಾವಾಣಿ’ ಜತೆಗೆ ಮಾತನಾಡಿದ ಅವರು, ‘ಶಿಬಿರಗಳ ಅಧ್ಯಯನಕ್ಕೆ ಉನ್ನತಮಟ್ಟದ ಸಮಿತಿ ರಚಿಸಲಾಗಿತ್ತು. ಒತ್ತಡ ನಿವಾರಣೆಗೆ ಹೊಸ ಶಿಬಿರ ತೆರೆಯಲು ಸಮಿತಿ ಶಿಫಾರಸು ಮಾಡಿದೆ. ಹೊಸ ಶಿಬಿರ ಆರಂಭಿಸಿ ಅಲ್ಲಿಗೆ ಮೂಲಸೌಕರ್ಯ ಕಲ್ಪಿಸಬೇಕು. ಅದಕ್ಕೆ ಸಾಕಷ್ಟು ಸಮಯಾವಕಾಶ ಅಗತ್ಯವಿದೆ. ಸದ್ಯಕ್ಕೆ ಯಾವುದೇ ಹೊಸ ಕ್ಯಾಪ್ ಆರಂಭಿಸಿಲ್ಲ. ಸಾಕಾನೆಗಳೂ ಸ್ಥಳಾಂತರಗೊಂಡಿಲ್ಲ. ಹದಿನೈದು ಆನೆಗಳ ಸ್ಥಳಾಂತರವಾಗಿದೆ ಎಂಬುದು ತಪ್ಪು ಮಾಹಿತಿ’ ಎಂದು ಅನನ್ಯಕುಮಾರ್ ವಿವರಣೆ ನೀಡಿದರು.