<p><strong>ನಾಪೋಕ್ಲು: </strong>ಕೊಡಗು ಜಿಲ್ಲೆಯ ನಾಪೋಕ್ಲು, ಗೋಣಿಕೊಪ್ಪಲು, ವಿರಾಜಪೇಟೆ, ಸೋಮವಾರಪೇಟೆ ಸುತ್ತಮುತ್ತ ಭಾನುವಾರ ಉತ್ತಮ ಮಳೆಯಾಗಿದೆ.</p>.<p>ನಾಪೋಕ್ಲು ಪಟ್ಟಣ ಸೇರಿದಂತೆ ಸಮೀಪದ ಬಲಮುರಿ, ಬೇತು, ಹೊದ್ದೂರು, ಮೂರ್ನಾಡು ಹಾಗೂ ಕಿಗ್ಗಾಲು ಗ್ರಾಮಗಳಲ್ಲಿ ಭಾನುವಾರ ಮಳೆಯಾಗಿದೆ.</p>.<p>ಗುಡುಗು-ಸಿಡಿಲು ಅಬ್ಬರದೊಂದಿಗೆ ಮಧ್ಯಾಹ್ನ ಮಳೆ ಸುರಿಯಿತು. ಈ ವ್ಯಾಪ್ತಿಯ ಗ್ರಾಮೀಣ ಭಾಗಗಳಲ್ಲಿ ಮಳೆಯಾಗಿದ್ದು, ಸುಮಾರು 15 ಮಿ.ಮೀ ದಾಖಲಾಗಿದೆ.</p>.<p>ಮಧ್ಯಾಹ್ನ 3 ಗಂಟೆಯಿಂದ ಮುಕ್ಕಾಲು ಗಂಟೆ ಕಾಲ ಮಳೆ ಸುರಿಯಿತು. ನಾಪೋಕ್ಲು ವ್ಯಾಪ್ತಿಯಲ್ಲಿ ಎರಡು-ಮೂರು ದಿನಗಳಿಂದ ನಿತ್ಯವೂ ಮಳೆಯಾಗುತ್ತಿದೆ. ಮಳೆಯಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳು ಬಿರುಸುಗೊಂಡಿದ್ದು, ಹಲವು ಬೆಳೆಗಾರರು ತೋಟಗಳಿಗೆ ರಾಸಾಯನಿಕ ಗೊಬ್ಬರ ಹಾಕಲು ಅಣಿಯಾಗಿದ್ದಾರೆ.</p>.<p>ನಿತ್ಯ ಮಳೆ ಆಗುತ್ತಿರುವುದರಿಂದ ತೋಟಗಳಿಗೆ ರಾಸಾಯನಿಕ ಗೊಬ್ಬರ ಹಾಕಲು ಇದು ಸಕಾಲ ಎಂದು ಬಲಮುರಿ ಗ್ರಾಮದ ಕಾಫಿ ಬೆಳೆಗಾರ ಸುರೇಶ್ ಹೇಳಿದರು.</p>.<p>ಕೆಲವು ದಿನಗಳಿಂದ ಮಳೆ ಆಗುತ್ತಿರುವುದರಿಂದ ಬಲಮುರಿಯಲ್ಲಿ ಕಾವೇರಿ ನದಿ ನೀರಿನ ಹರಿವಿನಲ್ಲಿ ಹೆಚ್ಚಳ ಕಂಡುಬಂತು.</p>.<p><strong>ಆಲಿಕಲ್ಲು ಮಳೆ<br />ಸುಂಟಿಕೊಪ್ಪ: </strong>ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಾನುವಾರ ಸಾಧಾರಣ ಮಳೆ ಆಯಿತು.</p>.<p>ಭಾನುವಾರ ಬೆಳಿಗ್ಗೆಯಿಂದ ಬಿಸಿಲಿನಿಂದ ಕೂಡಿದ್ದ ವಾತಾವರಣ ಸಂಜೆ ವೇಳೆಗೆ ಬದಲಾಯಿತು. ದಿಢೀರನೆ ಮೋಡ ಕವಿದು ಸಿಡಿಲಿನ ಆರ್ಭಟದೊಂದಿಗೆ ರಭಸದ ಮಳೆಯಾಯಿತು. ಕೆಲವೆಡೆ ಆಲಿಕಲ್ಲು ಬಿದ್ದವು.</p>.<p>ಗಾಳಿ ಮಳೆಗೆ ಹೋಬಳಿ ವ್ಯಾಪ್ತಿಯ ಹಲವೆಡೆ ಮರಗಳು ಬಿದ್ದು, ವಿದ್ಯುತ್ ವ್ಯತ್ಯಯ ಉಂಟಾಯಿತು.</p>.<p><strong>ರಸ್ತೆಗೆ ಬಿದ್ದ ಮರ<br />ಸಿದ್ದಾಪುರ: </strong>ಸಿದ್ದಾಪುರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾನುವಾರ ಗುಡುಗು ಸಿಡಿಲು ಸಹಿತ ಧಾರಾಕಾರ ಮಳೆ ಸುರಿಯಿತು.</p>.<p>ಗುಹ್ಯ, ಕರಡಿಗೋಡು, ಸಿದ್ದಾಪುರ ಭಾಗದಲ್ಲಿ ಕೆಲ ಕಾಲ ಆಲಿಕಲ್ಲು ಮಳೆ ಸುರಿದಿದೆ.</p>.<p>ಗಾಳಿ ಮಳೆಗೆ ನೆಲ್ಯಹುದಿಕೇರಿ ಜ್ಯೋತಿನಗರ ರಸ್ತೆಗೆ ಅಡ್ಡಲಾಗಿ ಬೃಹತ್ ಗಾತ್ರದ ಮರವೊಂದು ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿತ್ತು.</p>.<p><strong>ಉತ್ತಮ ಮಳೆ<br />ಗೋಣಿಕೊಪ್ಪಲು:</strong> ಮಧ್ಯಾಹ್ನ 3 ಗಂಟೆ ವೇಳೆಗೆ ಗುಡುಗು, ಸಿಡಿಲು ಸಹಿತ ಮಳೆಯಾಯಿತು. ಬೆಳಗ್ಗಿನಿಂದ ಚುರುಕಾದ ಬಿಸಿಲಿತ್ತು, ಬಳಿಕ ದಟ್ಟ ಮೋಡ ಕವಿದು ಮಧ್ಯಾಹ್ನ ಅರ್ಧ ಗಂಟೆ ಮಳೆ ಸುರಿಯಿತು. ಹಾತೂರು, ಪಾಲಿಬೆಟ್ಟ, ಅತ್ತೂರು, ಮಾಯಮುಡಿ, ತಿತಿಮತಿ ಮೊದಲಾದ ಭಾಗಗಳಲ್ಲಿ ಮಳೆ ಆಗಿದೆ.</p>.<p>ಗೋಣಿಕೊಪ್ಪಲು ಸುತ್ತಮುತ್ತ ಒಂದು ವಾರದಿಂದ ನಿತ್ಯವೂ ಮಳೆ ಬೀಳುತ್ತಿದ್ದು, ವಾತಾವರಣ ತಂಪಾಗಿದೆ. ಭೂಮಿಯ ಒಡಲು ಹಸಿರಾಗಿದೆ.</p>.<p><strong>ರೈತರಲ್ಲಿ ಹರ್ಷ<br />ಸೋಮವಾರಪೇಟೆ:</strong> ಪಟ್ಟಣ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಾನುವಾರ ಮಧ್ಯಾಹ್ನ ಗುಡುಗು ಸಿಡಿಲಿನೊಂದಿಗೆ ಮಳೆ ಸುರಿದಿದ್ದು, ರೈತರು ಹರ್ಷಗೊಂಡಿದ್ದಾರೆ.</p>.<p>ಕಳೆದ ಕೆಲವು ದಿನಗಳಿಂದ ಸೂಚನೆ ನೀಡುತ್ತಿತ್ತು, ಭಾನುವಾರ ಮಧ್ಯಾಹ್ನ ಉತ್ತಮ ಮಳೆಯಾಯಿತು. ಹಸಿಮೆಣಸು ಮತ್ತು ಶುಂಠಿ ಬೆಳೆಗಾರರು ಮಳೆಯ ನಿರೀಕ್ಷೆಯಲ್ಲಿದ್ದರು.</p>.<p>ಕಾಫಿ ಬೆಳೆಗಾರರಿಗೆ ಮಳೆಯ ಅವಶ್ಯಕತೆ ಇದ್ದು, ಈಗ ಸುರಿದ ಸಾಧಾರಣ ಮಳೆ ನೆಮ್ಮದಿ ತಂದಿದ್ದು, ಕಾಳು ಮೆಣಸಿಗೂ ಅನುಕೂಲವಾಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಪೋಕ್ಲು: </strong>ಕೊಡಗು ಜಿಲ್ಲೆಯ ನಾಪೋಕ್ಲು, ಗೋಣಿಕೊಪ್ಪಲು, ವಿರಾಜಪೇಟೆ, ಸೋಮವಾರಪೇಟೆ ಸುತ್ತಮುತ್ತ ಭಾನುವಾರ ಉತ್ತಮ ಮಳೆಯಾಗಿದೆ.</p>.<p>ನಾಪೋಕ್ಲು ಪಟ್ಟಣ ಸೇರಿದಂತೆ ಸಮೀಪದ ಬಲಮುರಿ, ಬೇತು, ಹೊದ್ದೂರು, ಮೂರ್ನಾಡು ಹಾಗೂ ಕಿಗ್ಗಾಲು ಗ್ರಾಮಗಳಲ್ಲಿ ಭಾನುವಾರ ಮಳೆಯಾಗಿದೆ.</p>.<p>ಗುಡುಗು-ಸಿಡಿಲು ಅಬ್ಬರದೊಂದಿಗೆ ಮಧ್ಯಾಹ್ನ ಮಳೆ ಸುರಿಯಿತು. ಈ ವ್ಯಾಪ್ತಿಯ ಗ್ರಾಮೀಣ ಭಾಗಗಳಲ್ಲಿ ಮಳೆಯಾಗಿದ್ದು, ಸುಮಾರು 15 ಮಿ.ಮೀ ದಾಖಲಾಗಿದೆ.</p>.<p>ಮಧ್ಯಾಹ್ನ 3 ಗಂಟೆಯಿಂದ ಮುಕ್ಕಾಲು ಗಂಟೆ ಕಾಲ ಮಳೆ ಸುರಿಯಿತು. ನಾಪೋಕ್ಲು ವ್ಯಾಪ್ತಿಯಲ್ಲಿ ಎರಡು-ಮೂರು ದಿನಗಳಿಂದ ನಿತ್ಯವೂ ಮಳೆಯಾಗುತ್ತಿದೆ. ಮಳೆಯಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳು ಬಿರುಸುಗೊಂಡಿದ್ದು, ಹಲವು ಬೆಳೆಗಾರರು ತೋಟಗಳಿಗೆ ರಾಸಾಯನಿಕ ಗೊಬ್ಬರ ಹಾಕಲು ಅಣಿಯಾಗಿದ್ದಾರೆ.</p>.<p>ನಿತ್ಯ ಮಳೆ ಆಗುತ್ತಿರುವುದರಿಂದ ತೋಟಗಳಿಗೆ ರಾಸಾಯನಿಕ ಗೊಬ್ಬರ ಹಾಕಲು ಇದು ಸಕಾಲ ಎಂದು ಬಲಮುರಿ ಗ್ರಾಮದ ಕಾಫಿ ಬೆಳೆಗಾರ ಸುರೇಶ್ ಹೇಳಿದರು.</p>.<p>ಕೆಲವು ದಿನಗಳಿಂದ ಮಳೆ ಆಗುತ್ತಿರುವುದರಿಂದ ಬಲಮುರಿಯಲ್ಲಿ ಕಾವೇರಿ ನದಿ ನೀರಿನ ಹರಿವಿನಲ್ಲಿ ಹೆಚ್ಚಳ ಕಂಡುಬಂತು.</p>.<p><strong>ಆಲಿಕಲ್ಲು ಮಳೆ<br />ಸುಂಟಿಕೊಪ್ಪ: </strong>ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಾನುವಾರ ಸಾಧಾರಣ ಮಳೆ ಆಯಿತು.</p>.<p>ಭಾನುವಾರ ಬೆಳಿಗ್ಗೆಯಿಂದ ಬಿಸಿಲಿನಿಂದ ಕೂಡಿದ್ದ ವಾತಾವರಣ ಸಂಜೆ ವೇಳೆಗೆ ಬದಲಾಯಿತು. ದಿಢೀರನೆ ಮೋಡ ಕವಿದು ಸಿಡಿಲಿನ ಆರ್ಭಟದೊಂದಿಗೆ ರಭಸದ ಮಳೆಯಾಯಿತು. ಕೆಲವೆಡೆ ಆಲಿಕಲ್ಲು ಬಿದ್ದವು.</p>.<p>ಗಾಳಿ ಮಳೆಗೆ ಹೋಬಳಿ ವ್ಯಾಪ್ತಿಯ ಹಲವೆಡೆ ಮರಗಳು ಬಿದ್ದು, ವಿದ್ಯುತ್ ವ್ಯತ್ಯಯ ಉಂಟಾಯಿತು.</p>.<p><strong>ರಸ್ತೆಗೆ ಬಿದ್ದ ಮರ<br />ಸಿದ್ದಾಪುರ: </strong>ಸಿದ್ದಾಪುರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾನುವಾರ ಗುಡುಗು ಸಿಡಿಲು ಸಹಿತ ಧಾರಾಕಾರ ಮಳೆ ಸುರಿಯಿತು.</p>.<p>ಗುಹ್ಯ, ಕರಡಿಗೋಡು, ಸಿದ್ದಾಪುರ ಭಾಗದಲ್ಲಿ ಕೆಲ ಕಾಲ ಆಲಿಕಲ್ಲು ಮಳೆ ಸುರಿದಿದೆ.</p>.<p>ಗಾಳಿ ಮಳೆಗೆ ನೆಲ್ಯಹುದಿಕೇರಿ ಜ್ಯೋತಿನಗರ ರಸ್ತೆಗೆ ಅಡ್ಡಲಾಗಿ ಬೃಹತ್ ಗಾತ್ರದ ಮರವೊಂದು ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿತ್ತು.</p>.<p><strong>ಉತ್ತಮ ಮಳೆ<br />ಗೋಣಿಕೊಪ್ಪಲು:</strong> ಮಧ್ಯಾಹ್ನ 3 ಗಂಟೆ ವೇಳೆಗೆ ಗುಡುಗು, ಸಿಡಿಲು ಸಹಿತ ಮಳೆಯಾಯಿತು. ಬೆಳಗ್ಗಿನಿಂದ ಚುರುಕಾದ ಬಿಸಿಲಿತ್ತು, ಬಳಿಕ ದಟ್ಟ ಮೋಡ ಕವಿದು ಮಧ್ಯಾಹ್ನ ಅರ್ಧ ಗಂಟೆ ಮಳೆ ಸುರಿಯಿತು. ಹಾತೂರು, ಪಾಲಿಬೆಟ್ಟ, ಅತ್ತೂರು, ಮಾಯಮುಡಿ, ತಿತಿಮತಿ ಮೊದಲಾದ ಭಾಗಗಳಲ್ಲಿ ಮಳೆ ಆಗಿದೆ.</p>.<p>ಗೋಣಿಕೊಪ್ಪಲು ಸುತ್ತಮುತ್ತ ಒಂದು ವಾರದಿಂದ ನಿತ್ಯವೂ ಮಳೆ ಬೀಳುತ್ತಿದ್ದು, ವಾತಾವರಣ ತಂಪಾಗಿದೆ. ಭೂಮಿಯ ಒಡಲು ಹಸಿರಾಗಿದೆ.</p>.<p><strong>ರೈತರಲ್ಲಿ ಹರ್ಷ<br />ಸೋಮವಾರಪೇಟೆ:</strong> ಪಟ್ಟಣ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಾನುವಾರ ಮಧ್ಯಾಹ್ನ ಗುಡುಗು ಸಿಡಿಲಿನೊಂದಿಗೆ ಮಳೆ ಸುರಿದಿದ್ದು, ರೈತರು ಹರ್ಷಗೊಂಡಿದ್ದಾರೆ.</p>.<p>ಕಳೆದ ಕೆಲವು ದಿನಗಳಿಂದ ಸೂಚನೆ ನೀಡುತ್ತಿತ್ತು, ಭಾನುವಾರ ಮಧ್ಯಾಹ್ನ ಉತ್ತಮ ಮಳೆಯಾಯಿತು. ಹಸಿಮೆಣಸು ಮತ್ತು ಶುಂಠಿ ಬೆಳೆಗಾರರು ಮಳೆಯ ನಿರೀಕ್ಷೆಯಲ್ಲಿದ್ದರು.</p>.<p>ಕಾಫಿ ಬೆಳೆಗಾರರಿಗೆ ಮಳೆಯ ಅವಶ್ಯಕತೆ ಇದ್ದು, ಈಗ ಸುರಿದ ಸಾಧಾರಣ ಮಳೆ ನೆಮ್ಮದಿ ತಂದಿದ್ದು, ಕಾಳು ಮೆಣಸಿಗೂ ಅನುಕೂಲವಾಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>