<p><strong>ಗೋಣಿಕೊಪ್ಪಲು</strong>: ಪೊನ್ನಂಪೇಟೆ ತಾಲ್ಲೂಕಿನಾದ್ಯಂತ ಬಿರುಗಾಳಿ ಸಮೇತ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಹಲವೆಡೆ ರಸ್ತೆಗಳು ಜಲಾವೃತಗೊಂಡಿದ್ದರೆ ಮತ್ತೆ ಕೆಲವು ಕಡೆ ಮನೆಗಳ ಗೋಡೆ ಕುಸಿದು ತೀವ್ರ ಹಾನಿಯಾಗಿದೆ.</p>.<p>ಶ್ರೀಮಂಗಲ, ಬೀರುಗ, ಬಿರುನಾಣಿ, ಹುದಿಕೇರಿ, ನಾಲ್ಕೇರಿ, ಪೊನ್ನಂಪೇಟೆ ಭಾಗದಲ್ಲಿ ಮೂರು ದಿನಗಳಿಂದ ಮಳೆ ಎಡೆಬಿಡದೆ ಸುರಿಯುತ್ತಿದೆ. ಶ್ರೀಮಂಗಲ ಬಳಿಯ ಕುರ್ಚಿ ಗ್ರಾಮದ ಅಜ್ಜಮಾಡ ನಂದ ಅವರ ಮನೆ ಗೋಡೆ ಕುಸಿದು ಬಿದ್ದಿದೆ. ಈ ವೇಳೆಯಲ್ಲಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ನಂದ ಹಾಗೂ ಒಬ್ಬರು ಕಾರ್ಮಿಕ ಪಾರಾಗಿದ್ದಾರೆ. ಮನೆಯ ಒಂದುಭಾಗದ ಗೋಡೆ ಕುಸಿದಿರುವುದರಿಂದ ಚಾವಣಿಯೂ ಕುಸಿದು ಬಿದ್ದಿದೆ.</p>.<p>ಬೀರುಗ ಗ್ರಾಮದ ಮುಕ್ಕಾಟೀರ ಕಾಶಿ ಅವರ ಕಾರ್ಯಪ್ಪ ಅವರ ಮನೆ ಗೋಡೆ ಬಿದ್ದು ಚಾವಣಿಯೂ ಕುಸಿದಿದೆ. ಈ ಎರಡು ಕುಟುಂಬದವರಿಗೆ ಕಾಳಜಿ ಕೇಂದ್ರವೇ ಗತಿಯಾಗಿದೆ. ಭಾನುವಾರ ಮಳೆ ಮತ್ತಷ್ಟು ತೀವ್ರಗೊಂಡಿದ್ದು, ಈ ಭಾಗದ ಜನತೆಗೆ ಹೆಚ್ಚಿನ ಆತಂಕ ಎದುರಾಗಿದೆ. ಒಂದು ಕಡೆ ಭೀಕರ ಗಾಳಿಯಿಂದ ಎಲ್ಲೆಂದರಲ್ಲಿ ಮರಗಳು ಧರೆಗುರುಳುತ್ತಿವೆ. ಮತ್ತೊಂದು ಕಡೆ ತೀವ್ರ ಮಳೆಯಿಂದ ಮನೆಗಳ ಗೋಡೆಗಳು ಕುಸಿಯುತ್ತಿವೆ.</p>.<p>ಅಲ್ಲಲ್ಲಿ ವಿದ್ಯುತ್ ಕಂಬಗಳು ಮುರಿದು ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಪೊನ್ನಂಪೇಟೆ, ಗೋಣಿಕೊಪ್ಪಲು ಪಟ್ಟಣಗಳನ್ನು ಬಿಟ್ಟರೆ ಬಹುಪಾಲು ಗ್ರಾಮೀಣ ಭಾಗಗಳು ಕತ್ತಲಲ್ಲಿ ಮುಳುಗಿವೆ. ಇದರಿಂದ ಕುಡಿಯುವ ನೀರು, ಮೊಬೈಲ್ ಚಾರ್ಜ್ ಮೊದಲಾದವುಗಳಿಗೆಲ್ಲ ಸಮಸ್ಯೆ ಎದುರಾಗಿದೆ.</p>.<p>ಇರ್ಪು ಜಲಪಾತ ಮತ್ತು ಲಕ್ಷ್ಮಣತೀರ್ಥ ನದಿ ಪಾತ್ರದಲ್ಲಿ ಬೀಳುತ್ತಿರುವ ಧಾರಾಕಾರ ಮಳೆಗೆ ಶ್ರೀಮಂಗಲ, ಹರಿಹರ, ಬಲ್ಯಮಂಡೂರು, ಕಾನೂರು, ಬಾಳೆಲೆ, ನಿಟ್ಟೂರು ಭಾಗದಲ್ಲಿ ಲಕ್ಷ್ಮಣತೀರ್ಥ ನದಿ ಪ್ರವಾಹ ತೀವ್ರಗೊಂಡಿದೆ. ನದಿ ಬಯಲಿನ ಬಲ್ಯಮಂಡೂರು, ಹರಿಹರ ನಡುವಿನ ರಸ್ತೆ ನೀರಿನಲ್ಲಿ ಮುಳುಗಿದ್ದು ಈ ಭಾಗದ ರಸ್ತೆ ಸಂಪರ್ಕ ಕಡಿತಗೊಂಡಿದೆ.</p>.<p>ಕಾನೂರು ಭಾಗದ ಗದ್ದೆಗಳು ನದಿ ಪ್ರವಾಹದಲ್ಲಿ ಮುಳುಗಿವೆ. ಬಾಳೆಲೆ, ಕೊಟ್ಟಗೇರಿ ನಡುವಿನ ಸಂಪರ್ಕ ಸೇತುವೆ ಜಲಾವೃತಗೊಂಡಿದೆ. ಈ ಭಾಗದಲ್ಲಿ ಸುಮಾರು ಒಂದು ಕಿಲೋ ಮೀಟರ್ ಉದ್ದದ ರಸ್ತೆ ನೀರಿನಲ್ಲಿ ಮುಳುಗಿದ್ದು, ಈ ಭಾಗದ ರಸ್ತೆ ಸಂಪರ್ಕವೂ ಕಡಿತವಾಗಿದೆ. ಬಾಳೆಲೆ, ನಿಟ್ಟೂರು ನಡುವಿನ ಗದ್ದೆ ಬಯಲು ಪ್ರವಾಹದಿಂದ ಸಾಗರದಂತೆ ಕಂಡು ಬರುತ್ತಿದೆ.</p>.<p>ಬಿರುನಾಣಿ ಪರಕಟಗೇರಿ ನಡುವಿನ ಮುಖ್ಯ ರಸ್ತೆಯು ಕೂಡ ಅಪಾಯಕ್ಕೆ ಸಿಲುಕಿದೆ. ಇಲ್ಲಿ ಹರಿಯುತ್ತಿರುವ ನದಿ ನೀರಿನ ಪ್ರವಾಹ ಹೆಚ್ಚಿದ್ದರೆ ಸೇತುವೆ ಮಧ್ಯಭಾಗದಲ್ಲಿನ ರಸ್ತೆ ಹೊಂಡ ಬಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಜತೆಗೆ ಸೇತುವೆ ದಡ ಕೂಡ ಕುಸಿಯುವ ಭೀತಿ ಎದುರಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೋಣಿಕೊಪ್ಪಲು</strong>: ಪೊನ್ನಂಪೇಟೆ ತಾಲ್ಲೂಕಿನಾದ್ಯಂತ ಬಿರುಗಾಳಿ ಸಮೇತ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಹಲವೆಡೆ ರಸ್ತೆಗಳು ಜಲಾವೃತಗೊಂಡಿದ್ದರೆ ಮತ್ತೆ ಕೆಲವು ಕಡೆ ಮನೆಗಳ ಗೋಡೆ ಕುಸಿದು ತೀವ್ರ ಹಾನಿಯಾಗಿದೆ.</p>.<p>ಶ್ರೀಮಂಗಲ, ಬೀರುಗ, ಬಿರುನಾಣಿ, ಹುದಿಕೇರಿ, ನಾಲ್ಕೇರಿ, ಪೊನ್ನಂಪೇಟೆ ಭಾಗದಲ್ಲಿ ಮೂರು ದಿನಗಳಿಂದ ಮಳೆ ಎಡೆಬಿಡದೆ ಸುರಿಯುತ್ತಿದೆ. ಶ್ರೀಮಂಗಲ ಬಳಿಯ ಕುರ್ಚಿ ಗ್ರಾಮದ ಅಜ್ಜಮಾಡ ನಂದ ಅವರ ಮನೆ ಗೋಡೆ ಕುಸಿದು ಬಿದ್ದಿದೆ. ಈ ವೇಳೆಯಲ್ಲಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ನಂದ ಹಾಗೂ ಒಬ್ಬರು ಕಾರ್ಮಿಕ ಪಾರಾಗಿದ್ದಾರೆ. ಮನೆಯ ಒಂದುಭಾಗದ ಗೋಡೆ ಕುಸಿದಿರುವುದರಿಂದ ಚಾವಣಿಯೂ ಕುಸಿದು ಬಿದ್ದಿದೆ.</p>.<p>ಬೀರುಗ ಗ್ರಾಮದ ಮುಕ್ಕಾಟೀರ ಕಾಶಿ ಅವರ ಕಾರ್ಯಪ್ಪ ಅವರ ಮನೆ ಗೋಡೆ ಬಿದ್ದು ಚಾವಣಿಯೂ ಕುಸಿದಿದೆ. ಈ ಎರಡು ಕುಟುಂಬದವರಿಗೆ ಕಾಳಜಿ ಕೇಂದ್ರವೇ ಗತಿಯಾಗಿದೆ. ಭಾನುವಾರ ಮಳೆ ಮತ್ತಷ್ಟು ತೀವ್ರಗೊಂಡಿದ್ದು, ಈ ಭಾಗದ ಜನತೆಗೆ ಹೆಚ್ಚಿನ ಆತಂಕ ಎದುರಾಗಿದೆ. ಒಂದು ಕಡೆ ಭೀಕರ ಗಾಳಿಯಿಂದ ಎಲ್ಲೆಂದರಲ್ಲಿ ಮರಗಳು ಧರೆಗುರುಳುತ್ತಿವೆ. ಮತ್ತೊಂದು ಕಡೆ ತೀವ್ರ ಮಳೆಯಿಂದ ಮನೆಗಳ ಗೋಡೆಗಳು ಕುಸಿಯುತ್ತಿವೆ.</p>.<p>ಅಲ್ಲಲ್ಲಿ ವಿದ್ಯುತ್ ಕಂಬಗಳು ಮುರಿದು ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಪೊನ್ನಂಪೇಟೆ, ಗೋಣಿಕೊಪ್ಪಲು ಪಟ್ಟಣಗಳನ್ನು ಬಿಟ್ಟರೆ ಬಹುಪಾಲು ಗ್ರಾಮೀಣ ಭಾಗಗಳು ಕತ್ತಲಲ್ಲಿ ಮುಳುಗಿವೆ. ಇದರಿಂದ ಕುಡಿಯುವ ನೀರು, ಮೊಬೈಲ್ ಚಾರ್ಜ್ ಮೊದಲಾದವುಗಳಿಗೆಲ್ಲ ಸಮಸ್ಯೆ ಎದುರಾಗಿದೆ.</p>.<p>ಇರ್ಪು ಜಲಪಾತ ಮತ್ತು ಲಕ್ಷ್ಮಣತೀರ್ಥ ನದಿ ಪಾತ್ರದಲ್ಲಿ ಬೀಳುತ್ತಿರುವ ಧಾರಾಕಾರ ಮಳೆಗೆ ಶ್ರೀಮಂಗಲ, ಹರಿಹರ, ಬಲ್ಯಮಂಡೂರು, ಕಾನೂರು, ಬಾಳೆಲೆ, ನಿಟ್ಟೂರು ಭಾಗದಲ್ಲಿ ಲಕ್ಷ್ಮಣತೀರ್ಥ ನದಿ ಪ್ರವಾಹ ತೀವ್ರಗೊಂಡಿದೆ. ನದಿ ಬಯಲಿನ ಬಲ್ಯಮಂಡೂರು, ಹರಿಹರ ನಡುವಿನ ರಸ್ತೆ ನೀರಿನಲ್ಲಿ ಮುಳುಗಿದ್ದು ಈ ಭಾಗದ ರಸ್ತೆ ಸಂಪರ್ಕ ಕಡಿತಗೊಂಡಿದೆ.</p>.<p>ಕಾನೂರು ಭಾಗದ ಗದ್ದೆಗಳು ನದಿ ಪ್ರವಾಹದಲ್ಲಿ ಮುಳುಗಿವೆ. ಬಾಳೆಲೆ, ಕೊಟ್ಟಗೇರಿ ನಡುವಿನ ಸಂಪರ್ಕ ಸೇತುವೆ ಜಲಾವೃತಗೊಂಡಿದೆ. ಈ ಭಾಗದಲ್ಲಿ ಸುಮಾರು ಒಂದು ಕಿಲೋ ಮೀಟರ್ ಉದ್ದದ ರಸ್ತೆ ನೀರಿನಲ್ಲಿ ಮುಳುಗಿದ್ದು, ಈ ಭಾಗದ ರಸ್ತೆ ಸಂಪರ್ಕವೂ ಕಡಿತವಾಗಿದೆ. ಬಾಳೆಲೆ, ನಿಟ್ಟೂರು ನಡುವಿನ ಗದ್ದೆ ಬಯಲು ಪ್ರವಾಹದಿಂದ ಸಾಗರದಂತೆ ಕಂಡು ಬರುತ್ತಿದೆ.</p>.<p>ಬಿರುನಾಣಿ ಪರಕಟಗೇರಿ ನಡುವಿನ ಮುಖ್ಯ ರಸ್ತೆಯು ಕೂಡ ಅಪಾಯಕ್ಕೆ ಸಿಲುಕಿದೆ. ಇಲ್ಲಿ ಹರಿಯುತ್ತಿರುವ ನದಿ ನೀರಿನ ಪ್ರವಾಹ ಹೆಚ್ಚಿದ್ದರೆ ಸೇತುವೆ ಮಧ್ಯಭಾಗದಲ್ಲಿನ ರಸ್ತೆ ಹೊಂಡ ಬಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಜತೆಗೆ ಸೇತುವೆ ದಡ ಕೂಡ ಕುಸಿಯುವ ಭೀತಿ ಎದುರಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>