ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಮಡಿಕೇರಿ: ಅತ್ಯಾಡಿ ಗ್ರಾಮಕ್ಕೆ ದಕ್ಕಿತು ‘ಪ್ರಣವ ಸೇತು’

ಇನ್ನು ಮಳೆಗಾಲದಲ್ಲಿ ಸಂಚಾರ ಸಾಧ್ಯ, ದ್ವೀಪವಾಗುವ ಸ್ಥಿತಿ ಇನ್ನಿಲ್ಲ
Published : 25 ಆಗಸ್ಟ್ 2024, 5:08 IST
Last Updated : 25 ಆಗಸ್ಟ್ 2024, 5:08 IST
ಫಾಲೋ ಮಾಡಿ
Comments
ಹೊಸದಾಗಿ ನಿರ್ಮಾಣವಾಗಿರುವ ಉಕ್ಕಿನ ಕಾಲು ಸೇತುವೆ
ಹೊಸದಾಗಿ ನಿರ್ಮಾಣವಾಗಿರುವ ಉಕ್ಕಿನ ಕಾಲು ಸೇತುವೆ
ನಿರ್ಮಾಣವಾಗಿರುವ ಉಕ್ಕಿನ ಸೇತುವೆ
ನಿರ್ಮಾಣವಾಗಿರುವ ಉಕ್ಕಿನ ಸೇತುವೆ
ಏಕಕಾಲಕ್ಕೆ 10 ಮಂದಿ ನಿಲ್ಲಬಹುದಾದ ಉಕ್ಕಿನ ಸೇತುವೆ 24 ಮೀಟರ್‌ ಉದ್ದ ಹಾಗೂ 0.75 ಮೀಟರ್‌ ಅಗಲ 5 ವರ್ಷ ಬಾಳಿಕೆ ಬರುವ ಸೇತುವೆ
ಇಂದು ಹಸ್ತಾಂತರ‌
‘ಪ್ರಣವ ಸೇತು’ ಕಾಲು ಸೇತುವೆಯನ್ನು ಗ್ರಾಮಸ್ಥರಿಗೆ ಹಸ್ತಾಂತರ ಮಾಡುವ ಕಾರ್ಯಕ್ರಮ ಆ. 25ರಂದು ಬೆಳಿಗ್ಗೆ 11.30ಕ್ಕೆ ಅತ್ಯಾಡಿ ಗ್ರಾಮದಲ್ಲಿ ನಡೆಯಲಿದೆ ಎಂದು ಫೌಂಡೇಷನ್‌ನ ಮಾಧ್ಯಮ ಸಂಚಾಲಕ ಕಾರ್ತಿಕ್ ಭಟ್ ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸೇತುವೆ ನಿರ್ಮಾಣಕ್ಕೂ ಮುನ್ನ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್‌. ಪೊನ್ನಣ್ಣ ಹಿರಿಯ ಪತ್ರಿಕೋದ್ಯಮಿ ಎಚ್‌.ಆರ್‌.ರಂಗನಾಥ್‌ ಹಾಗೂ ಅತ್ಯಾಡಿ ಗ್ರಾಮಸ್ಥರು ಸಂಪೂರ್ಣ ಬೆಂಬಲ ನೀಡಿದ್ದಾರೆ. ಅವರೆಲ್ಲರಿಗೂ ಪ್ರಣವ್‌ ಫೌಂಡೇಶನ್‌ ಧನ್ಯವಾದ ಸಲ್ಲಿಸುತ್ತದೆ ಎಂದು ಅವರು ಹೇಳಿದರು. ಕೊಡಗು ಜಿಲ್ಲೆಯ ಯಂಗ್‌ ಇಂಡಿಯನ್‌ ಫಾರ್ಮರ್ಸ್‌ ಅಸೋಸಿಯೇಶನ್‌ ಟೀಮ್‌ 12 ಆಫ್‌ ರೋಡರ್ಸ್‌ ಮತ್ತು ಮಲ್ನಾಡ್‌ ಯೂತ್‌ ಅಸೋಸಿಯೇಶನ್‌ನವರೂ ಸಹ ಕಾಲು ಸೇತುವೆ ನಿರ್ಮಾಣಕ್ಕೆ ಸಹಕಾರ ನೀಡಿದ್ದಾರೆ ಎಂದು ಅವರು ಶ್ಲಾಘಿಸಿದರು. ಪೌಂಡೇಷನ್‌ನ ಮಹೇಶ್‌ಕುಮಾರ್ ದೇವಿಪ್ರಸಾದ್ ಕಿರಣ್ ಅಟ್ಲೂರು ನೇತ್ರಾ ಮಂಜುನಾಥ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT