ಏಕಕಾಲಕ್ಕೆ 10 ಮಂದಿ ನಿಲ್ಲಬಹುದಾದ ಉಕ್ಕಿನ ಸೇತುವೆ 24 ಮೀಟರ್ ಉದ್ದ ಹಾಗೂ 0.75 ಮೀಟರ್ ಅಗಲ 5 ವರ್ಷ ಬಾಳಿಕೆ ಬರುವ ಸೇತುವೆ
ಇಂದು ಹಸ್ತಾಂತರ
‘ಪ್ರಣವ ಸೇತು’ ಕಾಲು ಸೇತುವೆಯನ್ನು ಗ್ರಾಮಸ್ಥರಿಗೆ ಹಸ್ತಾಂತರ ಮಾಡುವ ಕಾರ್ಯಕ್ರಮ ಆ. 25ರಂದು ಬೆಳಿಗ್ಗೆ 11.30ಕ್ಕೆ ಅತ್ಯಾಡಿ ಗ್ರಾಮದಲ್ಲಿ ನಡೆಯಲಿದೆ ಎಂದು ಫೌಂಡೇಷನ್ನ ಮಾಧ್ಯಮ ಸಂಚಾಲಕ ಕಾರ್ತಿಕ್ ಭಟ್ ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸೇತುವೆ ನಿರ್ಮಾಣಕ್ಕೂ ಮುನ್ನ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಹಿರಿಯ ಪತ್ರಿಕೋದ್ಯಮಿ ಎಚ್.ಆರ್.ರಂಗನಾಥ್ ಹಾಗೂ ಅತ್ಯಾಡಿ ಗ್ರಾಮಸ್ಥರು ಸಂಪೂರ್ಣ ಬೆಂಬಲ ನೀಡಿದ್ದಾರೆ. ಅವರೆಲ್ಲರಿಗೂ ಪ್ರಣವ್ ಫೌಂಡೇಶನ್ ಧನ್ಯವಾದ ಸಲ್ಲಿಸುತ್ತದೆ ಎಂದು ಅವರು ಹೇಳಿದರು. ಕೊಡಗು ಜಿಲ್ಲೆಯ ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಶನ್ ಟೀಮ್ 12 ಆಫ್ ರೋಡರ್ಸ್ ಮತ್ತು ಮಲ್ನಾಡ್ ಯೂತ್ ಅಸೋಸಿಯೇಶನ್ನವರೂ ಸಹ ಕಾಲು ಸೇತುವೆ ನಿರ್ಮಾಣಕ್ಕೆ ಸಹಕಾರ ನೀಡಿದ್ದಾರೆ ಎಂದು ಅವರು ಶ್ಲಾಘಿಸಿದರು. ಪೌಂಡೇಷನ್ನ ಮಹೇಶ್ಕುಮಾರ್ ದೇವಿಪ್ರಸಾದ್ ಕಿರಣ್ ಅಟ್ಲೂರು ನೇತ್ರಾ ಮಂಜುನಾಥ್ ಭಾಗವಹಿಸಿದ್ದರು.