<p><strong>ಮಡಿಕೇರಿ/ ಸೋಮವಾರಪೇಟೆ:</strong> ಮಡಿಕೇರಿ ತಾಲ್ಲೂಕಿನ ತಲಕಾವೇರಿಯಲ್ಲಿ ಗುಡುಗು ಸಿಡಿಲಿನಿಂದ ಕೂಡಿದ ಅಬ್ಬರದ ಮಳೆ ಬುಧವಾರ ಸಂಜೆ ಸುರಿಯಿತು.</p>.<p>ತಲಕಾವೇರಿಯ ಮೆಟ್ಟಿಲುಗಳಿಂದ ಜಲಪಾತದಂತೆ ನೀರು ಹರಿಯಿತು. ಗುಡುಗು, ಸಿಡಿಲಿನ ಅಬ್ಬರಕ್ಕೆ ಬಂದಿದ್ದ ಪ್ರವಾಸಿಗರ ಕ್ಷಣಕಾಲ ನಡುಗಿದರು. ಇತ್ತ ಕುಶಾಲನಗರ ಸಮೀಪದ ನಿಸರ್ಗಧಾಮದ ಆಸುಪಾಸಿನಲ್ಲೂ ಬಿರುಸಿನ ಮಳೆಯಾಯಿತು.</p>.<p>ಮಡಿಕೇರಿಯಲ್ಲಿ ಗುಡುಗು, ಸಿಡಿಲುಗಳ ಅಬ್ಬರ ಜೋರಾಗಿತ್ತಾದರೂ ಮಳೆ ಬಿರುಸಾಗಿ ಸುರಿಯಲಿಲ್ಲ.</p>.<p>ಸೋಮವಾರಪೇಟೆ ಭಾಗದಲ್ಲಿ ಕಳೆದ 3 ದಿನಗಳಿಂದಲೂ ಹೆಚ್ಚಿನ ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಕಾಫಿ, ಕಾಳು ಮೆಣಸು ಭತ್ತ ಸೇರಿದಂತೆ ಹಲವು ಬೆಳೆಗಾರರು ಸಂತಸ ವ್ಯಕ್ತಪಡಿಸಿದ್ದಾರೆ.</p>.<p>ಕಂಬಿಬಾಣೆ 5 ಸೆಂ.ಮೀ, ಗಣಂಗೂರು 3.5, ಬಲ್ಲಮಾವಟಿ, ನಾಲ್ಕೂರು ಶಿರಂಗಾಲ, ಕುಶಾಲನಗರದ ಬೇಲೂರು 3, ಬೆಸೂರು, ಪೆರಾಜೆ, ಕಾಕೋಟುಪರಂಬು 2.5, ನಾಪೋಕ್ಲು, ಸೋಮವಾರಪೇಟೆ ಪಟ್ಟಣ, ಚೌಡ್ಲು, 2, ವಾಲ್ನೂರು ತ್ಯಾಗತ್ತೂರು 1.5 ಸೆಂ.ಮೀ ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿಯ ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ/ ಸೋಮವಾರಪೇಟೆ:</strong> ಮಡಿಕೇರಿ ತಾಲ್ಲೂಕಿನ ತಲಕಾವೇರಿಯಲ್ಲಿ ಗುಡುಗು ಸಿಡಿಲಿನಿಂದ ಕೂಡಿದ ಅಬ್ಬರದ ಮಳೆ ಬುಧವಾರ ಸಂಜೆ ಸುರಿಯಿತು.</p>.<p>ತಲಕಾವೇರಿಯ ಮೆಟ್ಟಿಲುಗಳಿಂದ ಜಲಪಾತದಂತೆ ನೀರು ಹರಿಯಿತು. ಗುಡುಗು, ಸಿಡಿಲಿನ ಅಬ್ಬರಕ್ಕೆ ಬಂದಿದ್ದ ಪ್ರವಾಸಿಗರ ಕ್ಷಣಕಾಲ ನಡುಗಿದರು. ಇತ್ತ ಕುಶಾಲನಗರ ಸಮೀಪದ ನಿಸರ್ಗಧಾಮದ ಆಸುಪಾಸಿನಲ್ಲೂ ಬಿರುಸಿನ ಮಳೆಯಾಯಿತು.</p>.<p>ಮಡಿಕೇರಿಯಲ್ಲಿ ಗುಡುಗು, ಸಿಡಿಲುಗಳ ಅಬ್ಬರ ಜೋರಾಗಿತ್ತಾದರೂ ಮಳೆ ಬಿರುಸಾಗಿ ಸುರಿಯಲಿಲ್ಲ.</p>.<p>ಸೋಮವಾರಪೇಟೆ ಭಾಗದಲ್ಲಿ ಕಳೆದ 3 ದಿನಗಳಿಂದಲೂ ಹೆಚ್ಚಿನ ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಕಾಫಿ, ಕಾಳು ಮೆಣಸು ಭತ್ತ ಸೇರಿದಂತೆ ಹಲವು ಬೆಳೆಗಾರರು ಸಂತಸ ವ್ಯಕ್ತಪಡಿಸಿದ್ದಾರೆ.</p>.<p>ಕಂಬಿಬಾಣೆ 5 ಸೆಂ.ಮೀ, ಗಣಂಗೂರು 3.5, ಬಲ್ಲಮಾವಟಿ, ನಾಲ್ಕೂರು ಶಿರಂಗಾಲ, ಕುಶಾಲನಗರದ ಬೇಲೂರು 3, ಬೆಸೂರು, ಪೆರಾಜೆ, ಕಾಕೋಟುಪರಂಬು 2.5, ನಾಪೋಕ್ಲು, ಸೋಮವಾರಪೇಟೆ ಪಟ್ಟಣ, ಚೌಡ್ಲು, 2, ವಾಲ್ನೂರು ತ್ಯಾಗತ್ತೂರು 1.5 ಸೆಂ.ಮೀ ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿಯ ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>