<p>ಮಡಿಕೇರಿ: ಅವಸಾನದತ್ತ ಮುಖ ಮಾಡಿರುವ ಮಳೆ ಕಾಡುಗಳನ್ನು ರಕ್ಷಿಸದೇ ಹೋದರೆ ಉಳಿಗಾಲ ಇಲ್ಲ. ಮಳೆ ಕಾಡು ಮಾತ್ರವಲ್ಲ, ಎಲ್ಲ ಬಗೆಯ ಕಾಡುಗಳನ್ನು ಸಂರಕ್ಷಿಸಲೇಬೇಕು ಎಂಬ ಒಕ್ಕೊರಲ ಕೂಗು ಕೊಡಗಿನ ಗಡಿಭಾಗ ಮಾಕುಟ್ಟದ ದಟ್ಟವಾದ ಮಳೆಕಾಡಿನೊಳಗಿಂದ ವ್ಯಕ್ತವಾಯಿತು.</p>.<p>ದಟ್ಟ ಕಾನನದ ಮಧ್ಯೆ ವಿರಾಜಪೇಟೆ ಪ್ರಾದೇಶಿಕ ವಿಭಾಗದ ಮಾಕುಟ್ಟದ ವಲಯದ ಅರಣ್ಯಾಧಿಕಾರಿಗಳ ಕಚೇರಿ ಆವರಣದಲ್ಲಿ ಶನಿವಾರ ನಡೆದ ‘ವಿಶ್ವ ಮಳೆ ಕಾಡು’ ದಿನಾಚರಣೆಯಲ್ಲಿ ಮಳೆಕಾಡಿನ ಅಳಿವು ಉಳಿವುಗಳ ಕುರಿತೇ ಚರ್ಚೆಗಳು ನಡೆದವು. ಇಡೀ ದಿನ ನಡೆದ ಈ ಅಪರೂಪದ ಕಾರ್ಯಕ್ರಮದಲ್ಲಿ ವಿಷಯ ತಜ್ಞರು ಹಲವು ವಿಷಯಗಳನ್ನು ಕುರಿತು ಮಾತನಾಡಿದರು. ನೂರಾರು ಮಂದಿ ಇವುಗಳಿಗೆ ಕಿವಿಯಾದರು.</p>.<p>ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ಡೀನ್ ಜಿ.ಎಂ. ದೇವಗಿರಿ ಅವರು ಮಾತನಾಡಿ, ‘ಪ್ರಪಂಚದಲ್ಲಿ ಬೆರಳೆಣಿಕೆಯಷ್ಟು ಇರುವ ಮಳೆಕಾಡುಗಳು ವರ್ಷಗಳು ಉರುಳಿದಂತೆ ಕ್ಷೀಣಿಸುತ್ತಿವೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮುಂದಿನ 10 ವರ್ಷಗಳಲ್ಲಿ ಭೂಮಿಯ ತಾಪಮಾನ 6 ಡಿಗ್ರಿಯಷ್ಟು ಹೆಚ್ಚಾಗುವ ಸಂಭವ ಇದೆ’ ಎಂದು ಎಚ್ಚರಿಕೆ ನೀಡಿದರು.</p>.<p>ನಂತರ, ಅವರು ಪ್ರಪಂಚದಲ್ಲಿ ಮಳೆಕಾಡುಗಳ ಹಂಚಿಕೆ, ಸಮಭಾಜಕ ವೃತ್ತದಲ್ಲೇ ಅತಿ ಹೆಚ್ಚು ಕಾಡುಗಳು ಏಕಿವೆ ಎಂಬ ಕುರಿತು, ಜಾಗತಿಕ ತಾಪಮಾನ ಕುರಿತು, ಪಶ್ಚಿಮ ಘಟ್ಟಗಳ ಮಹತ್ವದ ಕುರಿತು ಮಾತನಾಡಿದರು.</p>.<p>ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ನಿವೃತ್ತ ಡೀನ್ ಸಿ.ಜಿ.ಕುಶಾಲಪ್ಪ ಅವರು ಮಳೆಕಾಡುಗಳ ಪ್ರಯೋಜನ ಮತ್ತು ಸಂರಕ್ಷಣೆಯ ಬಗ್ಗೆ ಉಪನ್ಯಾಸ ನೀಡಿದರು.</p>.<p>ವಲಯ ಅರಣ್ಯಾಧಿಕಾರಿ ಸುಹನಾ ಹರೀಶ್ ಅತ್ತಾವರ್ ಮಾತನಾಡಿ, ‘ಮಾಕುಟ್ಟ ವಲಯದಲ್ಲಿ ಕಳೆದ 20 ವರ್ಷದಲ್ಲಿ ಸರಾಸರಿ 5,500 ಮಿ.ಮೀನಷ್ಟು ಮಳೆಯಾಗಿದೆ. ಇಲ್ಲಿರುವ ಮಳೆಕಾಡಿನಲ್ಲಿ ಅಪಾರವಾದ ಜೀವವೈವಿಧ್ಯ ಇದೆ’ ಎಂದು ಹೇಳಿದರು.</p>.<p>ಈ ಮಳೆಕಾಡುಗಳು ವಿಶ್ವದಲ್ಲಿರುವ ಶೇ 20ರಷ್ಟು ಜೀವವೈವಿಧ್ಯವನ್ನು ಹೊಂದಿವೆ. ಮಳೆ ಕಾಡುಗಳನ್ನು ಕಾಪಾಡಿಕೊಂಡರೆ ಈ ಜೀವವೈವಿಧ್ಯಗಳೂ ಉಳಿಯುತ್ತವೆ ಎಂದರು.</p>.<p>ನಂತರ, ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲದಯ ಉಪನ್ಯಾಸಕರು, ವಿದ್ಯಾರ್ಥಿಗಳು, ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು, ಶಿವಮೊಗ್ಗ ಇರುವಕ್ಕಿ ಅರಣ್ಯ ಮಹಾವಿದ್ಯಾಲಯ ವಿದ್ಯಾರ್ಥಿಗಳು, ಮಾಕುಟ್ಟ ಕಿರಿಯ ಪ್ರಾಥಮಿಕ ಮಲಯಾಳಂ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು, ಹೆಗ್ಗಳದ ಗ್ರಾಮಸ್ಥರು ಸುಮಾರು 2 ಕಿ.ಮೀವರೆಗೆ ಮಳೆಕಾಡು ನಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಂತರ, ಕಿರುರಸಪ್ರಶ್ನೆ ಕಾರ್ಯಕ್ರಮವೂ ನಡೆಯಿತು.</p>.<p>ಶೃಂಗೇರಿಯವರ ಜೆಸಿಬಿಎಂ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಕುಮಾರಸ್ವಾಮಿ ಉಡುಪ ಹಾಗೂ ಪ್ರೊ.ಸತೀಶ್ ಅವರು ನಡಿಗೆ ವೇಳೆ ಜೀವವೈವಿಧ್ಯದ ಪರಿಚಯ ಮಾಡಿಸಿದರು.</p>.<p>ಡಿಸಿಎಫ್ ಜಗನ್ನಾಥ್ ಅಧ್ಯಕ್ಷತೆ ವಹಿಸಿದ್ದರು. ಎಸಿಎಫ್ ಕೆ.ಎ. ನೆಹರು ಸ್ವಾಗತಿಸಿದರು. ಡಿಎಆರ್ಎಫ್ಒ ಕಿರಣ್ ಗಣೇಶ್ ಆಚಾರಿ ನಿರೂಪಣೆ ಮಾಡಿದರು. ವಿಭಾಗದ ಎಲ್ಲ ವಲಯ ಅರಣ್ಯಾಧಿಕಾರಿಗಳು, ಉಪ ವಲಯ ಅರಣ್ಯಾಧಿಕಾರಿಗಳು ಸೇರಿದಂತೆ ಎಲ್ಲ ಮುಂಚೂಣಿ ಸಿಬ್ಬಂದಿಗಳು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಡಿಕೇರಿ: ಅವಸಾನದತ್ತ ಮುಖ ಮಾಡಿರುವ ಮಳೆ ಕಾಡುಗಳನ್ನು ರಕ್ಷಿಸದೇ ಹೋದರೆ ಉಳಿಗಾಲ ಇಲ್ಲ. ಮಳೆ ಕಾಡು ಮಾತ್ರವಲ್ಲ, ಎಲ್ಲ ಬಗೆಯ ಕಾಡುಗಳನ್ನು ಸಂರಕ್ಷಿಸಲೇಬೇಕು ಎಂಬ ಒಕ್ಕೊರಲ ಕೂಗು ಕೊಡಗಿನ ಗಡಿಭಾಗ ಮಾಕುಟ್ಟದ ದಟ್ಟವಾದ ಮಳೆಕಾಡಿನೊಳಗಿಂದ ವ್ಯಕ್ತವಾಯಿತು.</p>.<p>ದಟ್ಟ ಕಾನನದ ಮಧ್ಯೆ ವಿರಾಜಪೇಟೆ ಪ್ರಾದೇಶಿಕ ವಿಭಾಗದ ಮಾಕುಟ್ಟದ ವಲಯದ ಅರಣ್ಯಾಧಿಕಾರಿಗಳ ಕಚೇರಿ ಆವರಣದಲ್ಲಿ ಶನಿವಾರ ನಡೆದ ‘ವಿಶ್ವ ಮಳೆ ಕಾಡು’ ದಿನಾಚರಣೆಯಲ್ಲಿ ಮಳೆಕಾಡಿನ ಅಳಿವು ಉಳಿವುಗಳ ಕುರಿತೇ ಚರ್ಚೆಗಳು ನಡೆದವು. ಇಡೀ ದಿನ ನಡೆದ ಈ ಅಪರೂಪದ ಕಾರ್ಯಕ್ರಮದಲ್ಲಿ ವಿಷಯ ತಜ್ಞರು ಹಲವು ವಿಷಯಗಳನ್ನು ಕುರಿತು ಮಾತನಾಡಿದರು. ನೂರಾರು ಮಂದಿ ಇವುಗಳಿಗೆ ಕಿವಿಯಾದರು.</p>.<p>ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ಡೀನ್ ಜಿ.ಎಂ. ದೇವಗಿರಿ ಅವರು ಮಾತನಾಡಿ, ‘ಪ್ರಪಂಚದಲ್ಲಿ ಬೆರಳೆಣಿಕೆಯಷ್ಟು ಇರುವ ಮಳೆಕಾಡುಗಳು ವರ್ಷಗಳು ಉರುಳಿದಂತೆ ಕ್ಷೀಣಿಸುತ್ತಿವೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮುಂದಿನ 10 ವರ್ಷಗಳಲ್ಲಿ ಭೂಮಿಯ ತಾಪಮಾನ 6 ಡಿಗ್ರಿಯಷ್ಟು ಹೆಚ್ಚಾಗುವ ಸಂಭವ ಇದೆ’ ಎಂದು ಎಚ್ಚರಿಕೆ ನೀಡಿದರು.</p>.<p>ನಂತರ, ಅವರು ಪ್ರಪಂಚದಲ್ಲಿ ಮಳೆಕಾಡುಗಳ ಹಂಚಿಕೆ, ಸಮಭಾಜಕ ವೃತ್ತದಲ್ಲೇ ಅತಿ ಹೆಚ್ಚು ಕಾಡುಗಳು ಏಕಿವೆ ಎಂಬ ಕುರಿತು, ಜಾಗತಿಕ ತಾಪಮಾನ ಕುರಿತು, ಪಶ್ಚಿಮ ಘಟ್ಟಗಳ ಮಹತ್ವದ ಕುರಿತು ಮಾತನಾಡಿದರು.</p>.<p>ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ನಿವೃತ್ತ ಡೀನ್ ಸಿ.ಜಿ.ಕುಶಾಲಪ್ಪ ಅವರು ಮಳೆಕಾಡುಗಳ ಪ್ರಯೋಜನ ಮತ್ತು ಸಂರಕ್ಷಣೆಯ ಬಗ್ಗೆ ಉಪನ್ಯಾಸ ನೀಡಿದರು.</p>.<p>ವಲಯ ಅರಣ್ಯಾಧಿಕಾರಿ ಸುಹನಾ ಹರೀಶ್ ಅತ್ತಾವರ್ ಮಾತನಾಡಿ, ‘ಮಾಕುಟ್ಟ ವಲಯದಲ್ಲಿ ಕಳೆದ 20 ವರ್ಷದಲ್ಲಿ ಸರಾಸರಿ 5,500 ಮಿ.ಮೀನಷ್ಟು ಮಳೆಯಾಗಿದೆ. ಇಲ್ಲಿರುವ ಮಳೆಕಾಡಿನಲ್ಲಿ ಅಪಾರವಾದ ಜೀವವೈವಿಧ್ಯ ಇದೆ’ ಎಂದು ಹೇಳಿದರು.</p>.<p>ಈ ಮಳೆಕಾಡುಗಳು ವಿಶ್ವದಲ್ಲಿರುವ ಶೇ 20ರಷ್ಟು ಜೀವವೈವಿಧ್ಯವನ್ನು ಹೊಂದಿವೆ. ಮಳೆ ಕಾಡುಗಳನ್ನು ಕಾಪಾಡಿಕೊಂಡರೆ ಈ ಜೀವವೈವಿಧ್ಯಗಳೂ ಉಳಿಯುತ್ತವೆ ಎಂದರು.</p>.<p>ನಂತರ, ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲದಯ ಉಪನ್ಯಾಸಕರು, ವಿದ್ಯಾರ್ಥಿಗಳು, ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು, ಶಿವಮೊಗ್ಗ ಇರುವಕ್ಕಿ ಅರಣ್ಯ ಮಹಾವಿದ್ಯಾಲಯ ವಿದ್ಯಾರ್ಥಿಗಳು, ಮಾಕುಟ್ಟ ಕಿರಿಯ ಪ್ರಾಥಮಿಕ ಮಲಯಾಳಂ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು, ಹೆಗ್ಗಳದ ಗ್ರಾಮಸ್ಥರು ಸುಮಾರು 2 ಕಿ.ಮೀವರೆಗೆ ಮಳೆಕಾಡು ನಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಂತರ, ಕಿರುರಸಪ್ರಶ್ನೆ ಕಾರ್ಯಕ್ರಮವೂ ನಡೆಯಿತು.</p>.<p>ಶೃಂಗೇರಿಯವರ ಜೆಸಿಬಿಎಂ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಕುಮಾರಸ್ವಾಮಿ ಉಡುಪ ಹಾಗೂ ಪ್ರೊ.ಸತೀಶ್ ಅವರು ನಡಿಗೆ ವೇಳೆ ಜೀವವೈವಿಧ್ಯದ ಪರಿಚಯ ಮಾಡಿಸಿದರು.</p>.<p>ಡಿಸಿಎಫ್ ಜಗನ್ನಾಥ್ ಅಧ್ಯಕ್ಷತೆ ವಹಿಸಿದ್ದರು. ಎಸಿಎಫ್ ಕೆ.ಎ. ನೆಹರು ಸ್ವಾಗತಿಸಿದರು. ಡಿಎಆರ್ಎಫ್ಒ ಕಿರಣ್ ಗಣೇಶ್ ಆಚಾರಿ ನಿರೂಪಣೆ ಮಾಡಿದರು. ವಿಭಾಗದ ಎಲ್ಲ ವಲಯ ಅರಣ್ಯಾಧಿಕಾರಿಗಳು, ಉಪ ವಲಯ ಅರಣ್ಯಾಧಿಕಾರಿಗಳು ಸೇರಿದಂತೆ ಎಲ್ಲ ಮುಂಚೂಣಿ ಸಿಬ್ಬಂದಿಗಳು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>