ಆರೋಪಿಯು ಕೊಡಗರಹಳ್ಳಿ ನಿವಾಸಿ ಬಿ.ಸಿ.ತಿಮ್ಮಯ್ಯ ಅವರ ಕೂರ್ಗ್ಹಳ್ಳಿ ಎಸ್ಟೇಟ್ನಲ್ಲಿ ಜ. 7ರಂದು ಬೀಗ ಮುರಿದು ಬೀರುವಿನಲ್ಲಿದ್ದ ಬೆಳ್ಳಿ ಚೆಂಬು, ಮೊಬೈಲ್ ಹಾಗೂ ವಾಚ್ನ್ನು ಕಳವು ಮಾಡಿದ್ದ. ಇದೇ ರೀತಿ ಪ್ರಕರಣಗಳು ಜಿಲ್ಲೆಯ ಹಲವೆಡೆ ದಾಖಲಾಗಿದ್ದುದ್ದನ್ನು ಗಮನಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಆರೋಪಿಯ ಪತ್ತೆಗೆ ವಿಶೇಷ ತಂಡವನ್ನು ರಚಿಸಿದ್ದರು.