<p><strong>ವಿರಾಜಪೇಟೆ:</strong> ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡಬೇಕಿದೆ. ಎಲ್ಲೆಂದರಲ್ಲಿ ಕಸ ಬಿಸಾಡುವವರ ವಿರುದ್ಧ ಕ್ರಮ ತೆಗೆದುಕೊಂಡು, ಅವರಿಗೆ ದಂಡ ವಿಧಿಸಬೇಕು. ಆಯಕಟ್ಟಿನ ಸ್ಥಳಗಳಲ್ಲಿ ಸಿ.ಸಿ ಟಿವಿ ಕ್ಯಾಮೆರಾ ಅಳವಡಿಸಬೇಕು ಎಂದು ಅಧಿಕಾರಿಗಳಿಗೆ ವಿಧಾನ ಪರಿಷತ್ ಸದಸ್ಯ ಎಂ.ಸುಜಾ ಕುಶಾಲಪ್ಪ ತಾಕೀತು ಮಾಡಿದರು.</p>.<p>ಪುರಸಭೆಯ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ತೋಡುಗಳ ಹೂಳೆತ್ತುವ ವಿಚಾರ, ಕಸ ವಿಲೇವಾರಿ, ರಸ್ತೆಗಳಿಗೆ ಹೆಸರಿಡುವ ವಿಚಾರವಾಗಿ ಪರ–ವಿರೋಧ ಚರ್ಚೆಗಳು ನಡೆದವು.</p>.<p>ಸದಸ್ಯ ಪೃಥ್ವಿನಾಥ್ ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿರುವ ಮುಖ್ಯತೋಡುಗಳ ಹೂಳೆತ್ತುವ ಕಾಮಗಾರಿಗೆ ಸುಮಾರು ₹10 ಲಕ್ಷ ಮೀಸಲಿಟ್ಟಿರುವುದು ಸರಿಯಲ್ಲ. ₹ 10 ಲಕ್ಷ ಕಾಮಗಾರಿಗೆ ಜೆಸಿಬಿ ಬಾಡಿಗೆಗೆ ಪಡೆದರೆ ಜನರ ತೆರಿಗೆ ಹಣ ಪೋಲಾಗುತ್ತದೆ. ಬಾಡಿಗೆ ನೀಡುವ ಹಣದಲ್ಲಿ ಪುರಸಭೆಗೆ ಜೆಸಿಬಿಯನ್ನೇ ಕೊಂಡುಕೊಳ್ಳಬಹುದು ಎಂದರು.</p>.<p>ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ದೇಚಮ್ಮ ಕಾಳಪ್ಪ ಅವರು ಮಾತನಾಡಿ, ಹೂಳೆತ್ತುವ ಸಲುವಾಗಿ ಹಣ ಮೀಸಲಿರಿಸಲಾಗಿದೆಯಷ್ಟೆ ಎಂದು ಸಮಜಾಯಿಷಿ ನೀಡಿದರು.</p>.<p>ಸದಸ್ಯ ಶಭರೀಶ್ ಶೆಟ್ಟಿ ಮಾತನಾಡಿ, ಕಸ ವಿಲೇವಾರಿ ಮಾಡುವ ಪುರಸಭೆಯ ವಾಹನಗಳು ಸುಸ್ಥಿಯಲ್ಲಿಲ್ಲ. 7 ಗಂಟೆಗೆ ಬರಬೇಕಾದ ವಾಹನಗಳು ಕೆಲವೊಮ್ಮೆ ಬೆಳಿಗ್ಗೆ 11 ಗಂಟೆಯಾದರೂ ಬರುವುದಿಲ್ಲ. ವಾಹನಗಳನ್ನು ಮೊದಲು ಸುಸ್ಥಿಯಲ್ಲಿಡುವ ಕೆಲಸವಾಗಬೇಕು ಎಂದರು. <br /> ಇದಕ್ಕೆ ದ್ವನಿಗೂಡಿಸಿದ ಸದಸ್ಯ ಡಿ.ಪಿ.ರಾಜೇಶ್, ಕಸ ವಿಲೇವಾರಿ ವಾಹನಗಳ ಕೆಲ ಚಾಲಕರು ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದು, ಈ ಕುರಿತು ಅಧಿಕಾರಿಗಳು ಗಮನಹರಿಸಬೇಕು ಎಂದರು.</p>.<p>ಸದಸ್ಯ ಮಹಮ್ಮದ್ ರಾಫಿ ಮಾತನಾಡಿ, ಶಾಸಕರ ಪ್ರಯತ್ನದಿಂದ ಬೆಂಗಳೂರು ಕೊಡವ ಸಮಾಜಕ್ಕೆ ಸುಮಾರು 7 ಎಕರೆ ಜಾಗ ಮಂಜೂರಾಗಿದ್ದು, ಇದಕ್ಕೆ ಅಭಿನಂದನೆಗಳನ್ನು ಸಲ್ಲಿಸಲಾಗುವುದು ಎಂದರು.</p>.<p>ಇದಕ್ಕೆ ಧ್ವನಿಗೂಡಿಸಿದ ವಿಧಾನ ಪರಿಷತ್ತಿನ ಸದಸ್ಯ ಸುಜಾ ಕುಶಾಲಪ್ಪ, ಇದರಿಂದ ಕೊಡವ ಮತ್ತು ಕೊಡವ ಭಾಷಿಕ ಜನಾಂಗಕ್ಕೆ ಒಳಿತಾಗಲಿದೆ. ಶಾಸಕರ ಕಾರ್ಯ ಶ್ಲಾಘನೀಯ ಎಂದರು.</p>.<p>ಪುರಸಭೆಯ ಸ್ಥಾಯಿ ಸಮಿತಿ ರಚನೆಯಾದ ಬಳಿಕ ಸ್ಥಾಯಿ ಸಮಿತಿ ಸದಸ್ಯರಿಗೆ ಸರಿಯಾದ ಮಾಹಿತಿ ನೀಡದೆ ಸಭೆ ನಡೆಸಲಾಗಿದೆ. ನಮ್ಮ ಅವಶ್ಯಕತೆ ಸಮಿತಿಗೆ ಇಲ್ಲವಾದಲ್ಲಿ ಸಮಿತಿ ವಿಸರ್ಜಿಸಿ ಎಂದು ಸಮಿತಿ ಸದಸ್ಯರಾದ ಡಿ.ಪಿ.ರಾಜೇಶ್, ಮಹಮ್ಮದ್ ರಾಫಿ, ಮತೀನ್ ಅಸಮಾಧಾನ ವ್ಯಕ್ತಪಡಿಸಿದರು.</p>.<p>ಸದಸ್ಯ ವಿನಾಂಕ್ ಕುಟ್ಟಪ್ಪ ಮಾತನಾಡಿ, ಮೀನುಪೇಟೆ ರಸ್ತೆಗೆ ‘ಕಂಚಿ ಕಾಮಾಕ್ಷಿ ರಸ್ತೆ’ ಎಂದು ನಾಮಕರಣ ಮಾಡಿರುವುದು ಸಂತೋಷದ ವಿಚಾರ. ಆದರೆ, ಇದೇ ರಸ್ತೆಯಲ್ಲಿ ಮುತ್ತಪ್ಪ ದೇವಸ್ಥಾನವಿದೆ. ಆದ್ದರಿಂದ ದೇವಾಲಯದ ಸಮಿತಿಯವರು ಹಾಗೂ ಸ್ಥಳೀಯರು ಈ ರಸ್ತೆಗೆ ಮರುನಾಮಕರಣ ಮಾಡುವಂತೆ ಕೋರಿದ್ದಾರೆ ಎಂದರು.</p>.<p>ಇದಕ್ಕೆ ಸದಸ್ಯ ಜಿ.ಜಿ. ಮೋಹನ್ ಪ್ರತಿಕ್ರಿಯಿಸಿ, ವಿರಾಜಪೇಟೆಯ ಏಕೈಕ ಕಂಚಿ ಕಾಮಾಕ್ಷಿ ದೇವಾಲಯ ಆ ಭಾಗದಲ್ಲಿದೆ. ಆದ್ದರಿಂದ ರಸ್ತೆಗೆ ಕಂಚಿ ಕಾಮಾಕ್ಷಿ ರಸ್ತೆ ಎಂದು ನಾಮಕರಣ ಮಾಡಲು ಪುರಸಭೆಗೆ ಮನವಿ ಮಾಡಲಾಗಿದ್ದು, ಆ ಸಂದರ್ಭ ಎಲ್ಲ ಸದಸ್ಯರು ಒಪ್ಪಿಗೆ ಸೂಚಿಸಿದ್ದರು ಎಂದರು.</p>.<p>‘ಈಗಾಗಲೇ ನಾಮಕರಣ ಮಾಡಿಯಾಗಿದೆ. ಆದರೆ ಸ್ಥಳಿಯರು ಹಾಗೂ ದೇವಾಲಯ ಆಡಳಿತ ಮಂಡಳಿಯ ಕೋರಿಕೆಯಂತೆ ಮುತ್ತಪ್ಪ ಅವರ ಹೆಸರನ್ನು ಸೇರ್ಪಡೆಗೊಳಿಸಿ ಮರು ನಾಮಕರಣ ಮಾಡಬೇಕು’ ಎಂದು ಸುಜಾ ಕುಶಾಲಪ್ಪ ಸೂಚಿಸಿದರು.</p>.<p>ಸಭೆಯಲ್ಲಿ ಸದಸ್ಯರಾದ ಆಶಾ ಸುಬ್ಬಯ್ಯ, ಸುನಿತಾ ಜೂನಾ, ಅನಿತಾ, ರಜನಿಕಾಂತ್, ರಂಜಿ ಪೂಣಚ್ಚ, ಅಗಸ್ಟಿನ್ ಅವರು ತಮ್ಮ ವಾರ್ಡ್ಗಳ ವ್ಯಾಪ್ತಿಯ ಚರಂಡಿ, ವಿದ್ಯುತ್, ಬೀದಿ ದೀಪ, ಸ್ವಚ್ಛತೆ, ಹೀಗೆ ಹಲವು ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದರು.</p>.<p>ಮುಖ್ಯಾಧಿಕಾರಿ ನಾಚಪ್ಪ, ಎಂಜಿನಿಯರ್ ಹೇಮ್ ಕುಮಾರ್, ಅಧಿಕಾರಿಗಳಾದ ರೀತು ಸಿಂಗ್, ಸ್ಥಾಯಿ ಸಮಿತಿ ಅಧ್ಯಕ್ಷ ಜಲೀಲ್, ಪುರಸಭೆ ಸದಸ್ಯರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿರಾಜಪೇಟೆ:</strong> ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡಬೇಕಿದೆ. ಎಲ್ಲೆಂದರಲ್ಲಿ ಕಸ ಬಿಸಾಡುವವರ ವಿರುದ್ಧ ಕ್ರಮ ತೆಗೆದುಕೊಂಡು, ಅವರಿಗೆ ದಂಡ ವಿಧಿಸಬೇಕು. ಆಯಕಟ್ಟಿನ ಸ್ಥಳಗಳಲ್ಲಿ ಸಿ.ಸಿ ಟಿವಿ ಕ್ಯಾಮೆರಾ ಅಳವಡಿಸಬೇಕು ಎಂದು ಅಧಿಕಾರಿಗಳಿಗೆ ವಿಧಾನ ಪರಿಷತ್ ಸದಸ್ಯ ಎಂ.ಸುಜಾ ಕುಶಾಲಪ್ಪ ತಾಕೀತು ಮಾಡಿದರು.</p>.<p>ಪುರಸಭೆಯ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ತೋಡುಗಳ ಹೂಳೆತ್ತುವ ವಿಚಾರ, ಕಸ ವಿಲೇವಾರಿ, ರಸ್ತೆಗಳಿಗೆ ಹೆಸರಿಡುವ ವಿಚಾರವಾಗಿ ಪರ–ವಿರೋಧ ಚರ್ಚೆಗಳು ನಡೆದವು.</p>.<p>ಸದಸ್ಯ ಪೃಥ್ವಿನಾಥ್ ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿರುವ ಮುಖ್ಯತೋಡುಗಳ ಹೂಳೆತ್ತುವ ಕಾಮಗಾರಿಗೆ ಸುಮಾರು ₹10 ಲಕ್ಷ ಮೀಸಲಿಟ್ಟಿರುವುದು ಸರಿಯಲ್ಲ. ₹ 10 ಲಕ್ಷ ಕಾಮಗಾರಿಗೆ ಜೆಸಿಬಿ ಬಾಡಿಗೆಗೆ ಪಡೆದರೆ ಜನರ ತೆರಿಗೆ ಹಣ ಪೋಲಾಗುತ್ತದೆ. ಬಾಡಿಗೆ ನೀಡುವ ಹಣದಲ್ಲಿ ಪುರಸಭೆಗೆ ಜೆಸಿಬಿಯನ್ನೇ ಕೊಂಡುಕೊಳ್ಳಬಹುದು ಎಂದರು.</p>.<p>ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ದೇಚಮ್ಮ ಕಾಳಪ್ಪ ಅವರು ಮಾತನಾಡಿ, ಹೂಳೆತ್ತುವ ಸಲುವಾಗಿ ಹಣ ಮೀಸಲಿರಿಸಲಾಗಿದೆಯಷ್ಟೆ ಎಂದು ಸಮಜಾಯಿಷಿ ನೀಡಿದರು.</p>.<p>ಸದಸ್ಯ ಶಭರೀಶ್ ಶೆಟ್ಟಿ ಮಾತನಾಡಿ, ಕಸ ವಿಲೇವಾರಿ ಮಾಡುವ ಪುರಸಭೆಯ ವಾಹನಗಳು ಸುಸ್ಥಿಯಲ್ಲಿಲ್ಲ. 7 ಗಂಟೆಗೆ ಬರಬೇಕಾದ ವಾಹನಗಳು ಕೆಲವೊಮ್ಮೆ ಬೆಳಿಗ್ಗೆ 11 ಗಂಟೆಯಾದರೂ ಬರುವುದಿಲ್ಲ. ವಾಹನಗಳನ್ನು ಮೊದಲು ಸುಸ್ಥಿಯಲ್ಲಿಡುವ ಕೆಲಸವಾಗಬೇಕು ಎಂದರು. <br /> ಇದಕ್ಕೆ ದ್ವನಿಗೂಡಿಸಿದ ಸದಸ್ಯ ಡಿ.ಪಿ.ರಾಜೇಶ್, ಕಸ ವಿಲೇವಾರಿ ವಾಹನಗಳ ಕೆಲ ಚಾಲಕರು ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದು, ಈ ಕುರಿತು ಅಧಿಕಾರಿಗಳು ಗಮನಹರಿಸಬೇಕು ಎಂದರು.</p>.<p>ಸದಸ್ಯ ಮಹಮ್ಮದ್ ರಾಫಿ ಮಾತನಾಡಿ, ಶಾಸಕರ ಪ್ರಯತ್ನದಿಂದ ಬೆಂಗಳೂರು ಕೊಡವ ಸಮಾಜಕ್ಕೆ ಸುಮಾರು 7 ಎಕರೆ ಜಾಗ ಮಂಜೂರಾಗಿದ್ದು, ಇದಕ್ಕೆ ಅಭಿನಂದನೆಗಳನ್ನು ಸಲ್ಲಿಸಲಾಗುವುದು ಎಂದರು.</p>.<p>ಇದಕ್ಕೆ ಧ್ವನಿಗೂಡಿಸಿದ ವಿಧಾನ ಪರಿಷತ್ತಿನ ಸದಸ್ಯ ಸುಜಾ ಕುಶಾಲಪ್ಪ, ಇದರಿಂದ ಕೊಡವ ಮತ್ತು ಕೊಡವ ಭಾಷಿಕ ಜನಾಂಗಕ್ಕೆ ಒಳಿತಾಗಲಿದೆ. ಶಾಸಕರ ಕಾರ್ಯ ಶ್ಲಾಘನೀಯ ಎಂದರು.</p>.<p>ಪುರಸಭೆಯ ಸ್ಥಾಯಿ ಸಮಿತಿ ರಚನೆಯಾದ ಬಳಿಕ ಸ್ಥಾಯಿ ಸಮಿತಿ ಸದಸ್ಯರಿಗೆ ಸರಿಯಾದ ಮಾಹಿತಿ ನೀಡದೆ ಸಭೆ ನಡೆಸಲಾಗಿದೆ. ನಮ್ಮ ಅವಶ್ಯಕತೆ ಸಮಿತಿಗೆ ಇಲ್ಲವಾದಲ್ಲಿ ಸಮಿತಿ ವಿಸರ್ಜಿಸಿ ಎಂದು ಸಮಿತಿ ಸದಸ್ಯರಾದ ಡಿ.ಪಿ.ರಾಜೇಶ್, ಮಹಮ್ಮದ್ ರಾಫಿ, ಮತೀನ್ ಅಸಮಾಧಾನ ವ್ಯಕ್ತಪಡಿಸಿದರು.</p>.<p>ಸದಸ್ಯ ವಿನಾಂಕ್ ಕುಟ್ಟಪ್ಪ ಮಾತನಾಡಿ, ಮೀನುಪೇಟೆ ರಸ್ತೆಗೆ ‘ಕಂಚಿ ಕಾಮಾಕ್ಷಿ ರಸ್ತೆ’ ಎಂದು ನಾಮಕರಣ ಮಾಡಿರುವುದು ಸಂತೋಷದ ವಿಚಾರ. ಆದರೆ, ಇದೇ ರಸ್ತೆಯಲ್ಲಿ ಮುತ್ತಪ್ಪ ದೇವಸ್ಥಾನವಿದೆ. ಆದ್ದರಿಂದ ದೇವಾಲಯದ ಸಮಿತಿಯವರು ಹಾಗೂ ಸ್ಥಳೀಯರು ಈ ರಸ್ತೆಗೆ ಮರುನಾಮಕರಣ ಮಾಡುವಂತೆ ಕೋರಿದ್ದಾರೆ ಎಂದರು.</p>.<p>ಇದಕ್ಕೆ ಸದಸ್ಯ ಜಿ.ಜಿ. ಮೋಹನ್ ಪ್ರತಿಕ್ರಿಯಿಸಿ, ವಿರಾಜಪೇಟೆಯ ಏಕೈಕ ಕಂಚಿ ಕಾಮಾಕ್ಷಿ ದೇವಾಲಯ ಆ ಭಾಗದಲ್ಲಿದೆ. ಆದ್ದರಿಂದ ರಸ್ತೆಗೆ ಕಂಚಿ ಕಾಮಾಕ್ಷಿ ರಸ್ತೆ ಎಂದು ನಾಮಕರಣ ಮಾಡಲು ಪುರಸಭೆಗೆ ಮನವಿ ಮಾಡಲಾಗಿದ್ದು, ಆ ಸಂದರ್ಭ ಎಲ್ಲ ಸದಸ್ಯರು ಒಪ್ಪಿಗೆ ಸೂಚಿಸಿದ್ದರು ಎಂದರು.</p>.<p>‘ಈಗಾಗಲೇ ನಾಮಕರಣ ಮಾಡಿಯಾಗಿದೆ. ಆದರೆ ಸ್ಥಳಿಯರು ಹಾಗೂ ದೇವಾಲಯ ಆಡಳಿತ ಮಂಡಳಿಯ ಕೋರಿಕೆಯಂತೆ ಮುತ್ತಪ್ಪ ಅವರ ಹೆಸರನ್ನು ಸೇರ್ಪಡೆಗೊಳಿಸಿ ಮರು ನಾಮಕರಣ ಮಾಡಬೇಕು’ ಎಂದು ಸುಜಾ ಕುಶಾಲಪ್ಪ ಸೂಚಿಸಿದರು.</p>.<p>ಸಭೆಯಲ್ಲಿ ಸದಸ್ಯರಾದ ಆಶಾ ಸುಬ್ಬಯ್ಯ, ಸುನಿತಾ ಜೂನಾ, ಅನಿತಾ, ರಜನಿಕಾಂತ್, ರಂಜಿ ಪೂಣಚ್ಚ, ಅಗಸ್ಟಿನ್ ಅವರು ತಮ್ಮ ವಾರ್ಡ್ಗಳ ವ್ಯಾಪ್ತಿಯ ಚರಂಡಿ, ವಿದ್ಯುತ್, ಬೀದಿ ದೀಪ, ಸ್ವಚ್ಛತೆ, ಹೀಗೆ ಹಲವು ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದರು.</p>.<p>ಮುಖ್ಯಾಧಿಕಾರಿ ನಾಚಪ್ಪ, ಎಂಜಿನಿಯರ್ ಹೇಮ್ ಕುಮಾರ್, ಅಧಿಕಾರಿಗಳಾದ ರೀತು ಸಿಂಗ್, ಸ್ಥಾಯಿ ಸಮಿತಿ ಅಧ್ಯಕ್ಷ ಜಲೀಲ್, ಪುರಸಭೆ ಸದಸ್ಯರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>