<p><strong>ಸೋಮವಾರಪೇಟೆ</strong>: ತಾಲ್ಲೂಕಿನ ಕುಸುಬೂರು-ಕೆಂಚಮ್ಮನಬಾಣೆ ಭಾರತ್ ಮಾತಾ ಸೇವಾ ಸಂಘದಿಂದ ಕೆಂಚಮ್ಮನಬಾಣೆ ಭಾರತ್ ಮೈದಾನದಲ್ಲಿ ಶನಿವಾರ ಸಂಜೆ ನಡೆದ ಮುಕ್ತ ಪುರಷರ ವಾಲಿಬಾಲ್ ಪ್ರಶಸ್ತಿಯನ್ನು ಮೈಸೂರಿನ ಟೀಮ್ ಬ್ರದರ್ ತಂಡ ಪಡೆದರೆ, ಮಂಗಳೂರಿನ ಜಿಯಾ ಪ್ರತಾಪ್ ತಂಡ ರನ್ನರ್ ಅಪ್ ಪಡೆದಿದೆ.</p>.<p>ಕಬಡ್ಡಿ ಪಂದ್ಯದಲ್ಲಿ ಕೆಂಚಮ್ಮನಬಾಣೆ ಟೀಮ್ ಬ್ರದರ್ ಎ ತಂಡ ಪ್ರಥಮ ಮತ್ತು ಬಿ ತಂಡ ದ್ವಿತೀಯ ಸ್ಥಾನ ಪಡೆಯಿತು. ಮಹಿಳೆಯರ ಥ್ರೋ ಬಾಲ್ನಲ್ಲಿ ಬಲಮುರಿ ಗಣಪತಿ ದೇವಾಲಯ ತಂಡ ಪ್ರಥಮ, ಕೆಂಚಮ್ಮನಬಾಣೆ 7 ಸ್ಟಾರ್ ತಂಡ ದ್ವೀತಿಯ ಸ್ಥಾನ ಗಳಿಸಿತು.</p>.<p>ಮಹಿಳೆಯರಿಗೆ ನಡೆದ ಹಗ್ಗ ಜಗ್ಗಾಟದಲ್ಲಿ ಟೀಮ್ ಬಲಮುರಿ ತಂಡ ಪ್ರಥಮ ಹಾಗೂ ಕೆಂಚಮ್ಮನಬಾಣೆ ಕೆಂಚಮ್ಮ ದೇವಿ ತಂಡ ದ್ವಿತೀಯ ಸ್ಥಾನ ಪಡೆಯಿತು.</p>.<p>ವೇದಿಕೆಯಲ್ಲಿದ್ದ ಸೇವಾ ಸಂಘದ ಅಧ್ಯಕ್ಷ ಕೆ.ಜೆ.ಸುನಿಲ್, ಮುಖಂಡರಾದ ಬಿ.ಎನ್.ಚಂದ್ರಶೇಖರ್, ಟಿ.ಪಿ.ಮೂರ್ತಿ, ಬೇಳೂರು ಗ್ರಾಮ ಪಂಚಾಯಿತಿ ಸದಸ್ಯರಾದ ಸುದರ್ಶನ್, ಭಾಸ್ಕರ್, ದಾನಿಗಳಾದ ಮುಂಜುನ ಆಶೋಕ್, ಆರ್.ಪುಟ್ಟಣ್ಣ ಪ್ರಮುಖರಾದ ಚಂದ್ರಿಕಾ ಕುಮಾರ್, ಜಯಲಲಿತ ಅವರು ಬಹುಮಾನ ವಿತರಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸೋಮವಾರಪೇಟೆ</strong>: ತಾಲ್ಲೂಕಿನ ಕುಸುಬೂರು-ಕೆಂಚಮ್ಮನಬಾಣೆ ಭಾರತ್ ಮಾತಾ ಸೇವಾ ಸಂಘದಿಂದ ಕೆಂಚಮ್ಮನಬಾಣೆ ಭಾರತ್ ಮೈದಾನದಲ್ಲಿ ಶನಿವಾರ ಸಂಜೆ ನಡೆದ ಮುಕ್ತ ಪುರಷರ ವಾಲಿಬಾಲ್ ಪ್ರಶಸ್ತಿಯನ್ನು ಮೈಸೂರಿನ ಟೀಮ್ ಬ್ರದರ್ ತಂಡ ಪಡೆದರೆ, ಮಂಗಳೂರಿನ ಜಿಯಾ ಪ್ರತಾಪ್ ತಂಡ ರನ್ನರ್ ಅಪ್ ಪಡೆದಿದೆ.</p>.<p>ಕಬಡ್ಡಿ ಪಂದ್ಯದಲ್ಲಿ ಕೆಂಚಮ್ಮನಬಾಣೆ ಟೀಮ್ ಬ್ರದರ್ ಎ ತಂಡ ಪ್ರಥಮ ಮತ್ತು ಬಿ ತಂಡ ದ್ವಿತೀಯ ಸ್ಥಾನ ಪಡೆಯಿತು. ಮಹಿಳೆಯರ ಥ್ರೋ ಬಾಲ್ನಲ್ಲಿ ಬಲಮುರಿ ಗಣಪತಿ ದೇವಾಲಯ ತಂಡ ಪ್ರಥಮ, ಕೆಂಚಮ್ಮನಬಾಣೆ 7 ಸ್ಟಾರ್ ತಂಡ ದ್ವೀತಿಯ ಸ್ಥಾನ ಗಳಿಸಿತು.</p>.<p>ಮಹಿಳೆಯರಿಗೆ ನಡೆದ ಹಗ್ಗ ಜಗ್ಗಾಟದಲ್ಲಿ ಟೀಮ್ ಬಲಮುರಿ ತಂಡ ಪ್ರಥಮ ಹಾಗೂ ಕೆಂಚಮ್ಮನಬಾಣೆ ಕೆಂಚಮ್ಮ ದೇವಿ ತಂಡ ದ್ವಿತೀಯ ಸ್ಥಾನ ಪಡೆಯಿತು.</p>.<p>ವೇದಿಕೆಯಲ್ಲಿದ್ದ ಸೇವಾ ಸಂಘದ ಅಧ್ಯಕ್ಷ ಕೆ.ಜೆ.ಸುನಿಲ್, ಮುಖಂಡರಾದ ಬಿ.ಎನ್.ಚಂದ್ರಶೇಖರ್, ಟಿ.ಪಿ.ಮೂರ್ತಿ, ಬೇಳೂರು ಗ್ರಾಮ ಪಂಚಾಯಿತಿ ಸದಸ್ಯರಾದ ಸುದರ್ಶನ್, ಭಾಸ್ಕರ್, ದಾನಿಗಳಾದ ಮುಂಜುನ ಆಶೋಕ್, ಆರ್.ಪುಟ್ಟಣ್ಣ ಪ್ರಮುಖರಾದ ಚಂದ್ರಿಕಾ ಕುಮಾರ್, ಜಯಲಲಿತ ಅವರು ಬಹುಮಾನ ವಿತರಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>