<p>ಪ್ರಜಾವಾಣಿ ವಾರ್ತೆ</p>.<p><strong>ಶನಿವಾರಸಂತೆ (ಕೊಡಗು ಜಿಲ್ಲೆ):</strong> ಇಲ್ಲಿನ ಸಮೀಪದ ಅಪ್ಪಶೆಟ್ಟಳ್ಳಿ ಗ್ರಾಮದ ಅರಣ್ಯಕ್ಕೆ ಭಾನುವಾರ ಬೆಂಕಿ ತಗುಲಿದ್ದು, ಸುಮಾರು ಒಂದು ಎಕರೆಯಷ್ಟು ಕುರುಚಲು ಗಿಡಗಳಿರುವ ಅರಣ್ಯ ಭಸ್ಮಗೊಂಡಿದೆ.</p>.<p>ಬೆಂಕಿ ಉರಿಯುತ್ತಿರುವುದನ್ನು ಕಂಡ ಅರಣ್ಯದಂಚಿನ ಕಾಫಿ ತೋಟದ ಮಾಲೀಕ ಚಂದ್ರಕಾಂತ್ ತಕ್ಷಣವೇ ಶನಿವಾರಸಂತೆ ಅರಣ್ಯ ಇಲಾಖೆ ಮತ್ತು ಸೋಮವಾರಪೇಟೆ ಅಗ್ನಿಶಾಮಕ ದಳ ಮಾಹಿತಿ ತಿಳಿಸಿದರು. ಸ್ಥಳಕ್ಕೆ ಬಂದ ಅಧಿಕಾರಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಈ ವೇಳೆ ಸಾರ್ವಜನಿಕರೂ ಕೈಜೋಡಿಸಿ, ಅಕ್ಕಪಕ್ಕದ ಕಾಫಿತೋಟಗಳಿಗೆ ಬೆಂಕಿ ಹರಡುವುದನ್ನು ತಡೆದರು.</p>.<p>ಸೋಮವಾರಪೇಟೆ ಅಗ್ನಿಶಾಮಕ ದಳದ ಠಾಣಾಧಿಕಾರಿ ಪಿ.ಎಸ್.ಸುರೇಶ್, ಸಿಬ್ಬಂದಿಯಾದ ಪಿ.ಈಶ್ವರ್, ಡಿ.ಎಂ.ಚೇತನ್, ಎಚ್.ಆರ್.ವಿನಯ್, ಪವನ್ ಕುಮಾರ್, ಶನಿವಾರಸಂತೆ ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ಆರ್.ಶ್ರೀನಿವಾಸ್, ಗಸ್ತು ವನಪಾಲಕ ಜಯಕುಮಾರ್, ಸಿಬ್ಬಂದಿಯಾದ ಕಾರ್ತಿಕ್, ನಾಗೇಶ್, ಬೆಂಕಿ ನಂದಿಸುವ ಕಾರ್ಯದಲ್ಲಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪ್ರಜಾವಾಣಿ ವಾರ್ತೆ</p>.<p><strong>ಶನಿವಾರಸಂತೆ (ಕೊಡಗು ಜಿಲ್ಲೆ):</strong> ಇಲ್ಲಿನ ಸಮೀಪದ ಅಪ್ಪಶೆಟ್ಟಳ್ಳಿ ಗ್ರಾಮದ ಅರಣ್ಯಕ್ಕೆ ಭಾನುವಾರ ಬೆಂಕಿ ತಗುಲಿದ್ದು, ಸುಮಾರು ಒಂದು ಎಕರೆಯಷ್ಟು ಕುರುಚಲು ಗಿಡಗಳಿರುವ ಅರಣ್ಯ ಭಸ್ಮಗೊಂಡಿದೆ.</p>.<p>ಬೆಂಕಿ ಉರಿಯುತ್ತಿರುವುದನ್ನು ಕಂಡ ಅರಣ್ಯದಂಚಿನ ಕಾಫಿ ತೋಟದ ಮಾಲೀಕ ಚಂದ್ರಕಾಂತ್ ತಕ್ಷಣವೇ ಶನಿವಾರಸಂತೆ ಅರಣ್ಯ ಇಲಾಖೆ ಮತ್ತು ಸೋಮವಾರಪೇಟೆ ಅಗ್ನಿಶಾಮಕ ದಳ ಮಾಹಿತಿ ತಿಳಿಸಿದರು. ಸ್ಥಳಕ್ಕೆ ಬಂದ ಅಧಿಕಾರಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಈ ವೇಳೆ ಸಾರ್ವಜನಿಕರೂ ಕೈಜೋಡಿಸಿ, ಅಕ್ಕಪಕ್ಕದ ಕಾಫಿತೋಟಗಳಿಗೆ ಬೆಂಕಿ ಹರಡುವುದನ್ನು ತಡೆದರು.</p>.<p>ಸೋಮವಾರಪೇಟೆ ಅಗ್ನಿಶಾಮಕ ದಳದ ಠಾಣಾಧಿಕಾರಿ ಪಿ.ಎಸ್.ಸುರೇಶ್, ಸಿಬ್ಬಂದಿಯಾದ ಪಿ.ಈಶ್ವರ್, ಡಿ.ಎಂ.ಚೇತನ್, ಎಚ್.ಆರ್.ವಿನಯ್, ಪವನ್ ಕುಮಾರ್, ಶನಿವಾರಸಂತೆ ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ಆರ್.ಶ್ರೀನಿವಾಸ್, ಗಸ್ತು ವನಪಾಲಕ ಜಯಕುಮಾರ್, ಸಿಬ್ಬಂದಿಯಾದ ಕಾರ್ತಿಕ್, ನಾಗೇಶ್, ಬೆಂಕಿ ನಂದಿಸುವ ಕಾರ್ಯದಲ್ಲಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>