ಗೋಣಿಕೊಪ್ಪಲು: ತಿತಿಮತಿ ಸಮೀಪದ ಹೆಬ್ಬಾಲೆ ಪಟ್ಟಣದಲ್ಲಿ ಬುಧವಾರ ಕಾಫಿ ತೋಟದ ಕೆಲಸಕ್ಕೆ ಕಾರ್ಮಿರನ್ನು ಕರೆದೊಯ್ಯುತ್ತಿದ್ದ ಆಮ್ನಿ ಕಾರಿನ ಮೇಲೆ ಕಾಡಾನೆ ದಾಳಿ ನಡೆಸಿದೆ.
ನಾಗರಹೊಳೆ ವನ್ಯಜೀವಿ ವಿಭಾಗಕ್ಕೆ ಸೇರಿದ ಅರಣ್ಯದೊಳಗಿನ ಪ್ರದೇಶದಲ್ಲಿ ಉಮೇಶ್ ಎಂಬವರು ಕಾರ್ಮಿಕರನ್ನು ಕಾರಿನಲ್ಲಿ ಕರೆದುಕೊಂಡು ಬರುತ್ತಿದ್ದರು ಎನ್ನಲಾಗಿದೆ. ಈ ವೇಳೆ ಕಾಡಾನೆಯೊಂದು ಎದುರಾಗಿದೆ. ಇದರಿಂದ ಆನೆಯ ಒಂದು ಬದಿ ಕಾರಿಗೆ ತಗುಳಿ ಕಾರಿನ ಮುಂಭಾಗದ ಗಾಜು ಜಖಂಗೊಂಡಿದೆ. ಕಾರಿನ ಒಳಗಿದ್ದವರು ಜೋರಾಗಿ ಕಿರುಚಿದ್ದರಿಂದ ಆನೆ ಓಡಿ ಹೋಗಿದೆ.
ಈ ವೇಳೆ ತಿತಿಮತಿ ಶಾಲೆಗೆ ಬರುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಘಟನೆಯಿಂದ ಗಾಬರಿಗೊಂಡು ಸ್ವಲ್ಪ ಹೊತ್ತು ಅಸ್ವಸ್ಥಗೊಂಡಿದ್ದಳು. ಆಕೆಗೆ ತಿತಿಮತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.
ಸ್ಥಳಕ್ಕೆ ಮತ್ತಿಗೋಡು ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ದಿಲೀಪ್, ಸಿಬ್ಬಂದಿ ವರ್ಗದವರು ಭೇಟಿ ನೀಡಿ ಪರಿಶೀಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.