ಹಸನಬ್ಬ ಅವರು ಮಧ್ಯಾಹ್ನ ಎಂದಿನಂತೆ ತಮ್ಮ ಮನೆಯ ಮುಂದೆ ಕುರ್ಚಿಯಲ್ಲಿ ಕುಳಿತಿದ್ದರು. ರಸ್ತೆಯಲ್ಲಿ ಮನೆಯತ್ತ ಬರುತ್ತಿದ್ದ ಆನೆ ಕಂಡು ಗಾಬರಿಗೊಂಡ ಅವರು ಓಡುವಾಗ ಬಿದ್ದು ಗಾಯಗೊಂಡರು. ಮಕ್ಕಳು ಮನೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡರು. ಆನೆಯು ಬಾಗಿಲನ್ನು ಮುರಿದು ಹಾಕಿ, ಅಲ್ಲೇ ಇದ್ದ ಕುರ್ಚಿಯನ್ನು ಮುರಿದು, ಚರಂಡಿಗೆ ಎಸೆದು ಶನಿವಾರಸಂತೆಯತ್ತ ಹೊರಟಿತು. ಇದಕ್ಕೂ ಮುನ್ನ ನೀರುಗುಂದ ಗ್ರಾಮದಲ್ಲಿ ರಸ್ತೆಯಲ್ಲಿ ನಿಲ್ಲಿಸಿದ್ದ ಮಂದಣ್ಣ ಎಂಬುವವರ ಬೈಕ್ನ್ನು ಜಖಂಗೊಳಿಸಿತ್ತು. ಸಮೀಪದ ಲಕನಿ ಗ್ರಾಮದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರೂ ಆನೆ ಕಂಡು ಗಾಬರಿಗೊಂಡು ಓಡುವ ಭರದಲ್ಲಿ ಬಿದ್ದು ಗಾಯಗೊಂಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.