<p><span style="font-size: 26px;"><strong>ಕುಶಾಲನಗರ: </strong>ಕಳೆದ 4 ದಿನಗಳಿಂದ ಎಡಬಿಡದೆ ಸುರಿಯುತ್ತಿದ್ದ ಸೋನೆ ಮಳೆ ಸುಂಟಿಕೊಪ್ಪದಲ್ಲಿ ಮುಂದುವರಿದಿದ್ದು ಬುಧವಾರವೂ ಸುರಿಯಿತು. ಉಳಿದೆಡೆಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದ್ದ ದೃಶ್ಯ ಕಂಡು ಬಂತು.</span><br /> <br /> ಕೆಲ ಸಮಯ ತುಂತುರು ಮಳೆ ಸುರಿದರೆ ಮತ್ತೆ ಕೆಲ ಸಮಯ ರಭಸವಾಗಿ ಸುರಿಯಿತು. ಹೀಗಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಮಳೆಯಲ್ಲಿ ಕೊಡೆಹಿಡಿದು ಶಾಲೆಗೆ ತೆರಳಿದರು.<br /> <br /> ಇನ್ನು ಬೀದಿ ಬದಿ ವ್ಯಾಪಾರಸ್ಥರು ಕೂಡ ಮಳೆಯಲ್ಲಿಯೇ ಕೊಡೆ ಹಿಡಿದು ವ್ಯಾಪಾರ ಮಾಡುತ್ತಿದ್ದ ದೃಶ್ಯ ಕೂಡ ಕಂಡು ಬಂತು. ಆದರೆ ಕಳೆದ 2 ದಿನಗಳಿಂದ ಕುಶಾಲನಗರ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿತ್ತಾದರೂ ಬುಧವಾರ ಮಳೆ ಪ್ರಮಾಣ ಕ್ಷೀಣಿಸಿದೆ. ಕುಶಾಲನಗರ, ಹಾರಂಗಿ, ಹೆಬ್ಬಾಲೆ, ಕೂಡಿಗೆ, ಏಳನೆ ಹೊಸಕೋಟೆ ಪ್ರದೇಶಗಳಲ್ಲಿ ಬುಧವಾರ ತುಂತುರು ಮಳೆಯಾಯಿತು.<br /> <br /> <strong>ಸಾಧಾರಣ ಮಳೆ</strong><br /> ಶನಿವಾರಸಂತೆ: ಶನಿವಾರಸಂತೆ ಹೋಬಳಿಯಲ್ಲಿ ಮಂಗಳವಾರ ಸಾಧಾರಣ ಮಳೆಯಾಗಿದೆ. ಪಟ್ಟಣವೂ ಸೇರಿದಂತೆ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಯಳ್ಳಿ, ಗಂಗನಹಳ್ಳಿ ಇತರ ಗ್ರಾಮಗಳಲ್ಲಿ ಅರ್ಧ ಇಂಚು ಮಳೆಯಾಗಿದೆ.<br /> <br /> ಶನಿವಾರಸಂತೆ ಹೋಬಳಿಯಲ್ಲಿ ವರ್ಷ ಆರಂಭದಿಂದ ಜೂನ್ 12ರವರೆಗೆ 8 ಇಂಚು ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಗೆ 18 ಇಂಚು ಮಳೆಯಾಗಿತ್ತು. ಕೊಡ್ಲಿಪೇಟೆ ಹೋಬಳಿಗೆ ಈ ವರ್ಷ ಉತ್ತಮವಾಗಿ ಮಳೆಯಾಗುತ್ತಿದೆ.<br /> <br /> `ಈ ವರ್ಷ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೃಷಿ ಕೆಲಸ ಮಂದಗತಿಯಲ್ಲಿ ಸಾಗುತ್ತಿದೆ. ಬಿಡದೇ ಗಟ್ಟಿಮಳೆಯಾಗಿ ತೋಡಿನಲ್ಲಿ ನೀರು ಸಂಗ್ರಹವಾದರೆ ಮಾತ್ರ ಬತ್ತದ ವ್ಯವಸಾಯ ಆರಂಭಿಸಬಹುದು. ಗದ್ದೆಗಳಲ್ಲಿ ನೀರಾಗದ ಕಾರಣ ನೀರು ಅಗೆ ಹಾಕಲಾಗಿಲ್ಲ. ಸಸಿಮಡಿ ಕೂಡ ಸಿದ್ಧವಾಗಿಲ್ಲ. ಈ ಮಳೆ ನೀರು ಸಾಕಾಗುವುದಿಲ್ಲ ಎನ್ನುತ್ತಾರೆ' ತೋಯಳ್ಳಿ ಗ್ರಾಮದ ಕೃಷಿಕ ಟಿ.ಆರ್.ಸುರೇಶ್.<br /> <br /> ಕೆಲವೆಡೆ ಕಾಫಿ ತೋಟಗಳಲ್ಲಿ ಗೊಬ್ಬರ ಹಾಕಲು ಮಳೆ ಸಾಕಾಗುವುದಿಲ್ಲ. ಗೊಬ್ಬರ ಹಾಕಿದ ನಂತರ ಸ್ಪ್ರೇ ಮಾಡಬೇಕಾಗುತ್ತದೆ. ಹಾಗಾಗಿ, ಕಾಫಿ ಬೆಳೆಗಾರರು ಹೆಚ್ಚು ಮಳೆಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size: 26px;"><strong>ಕುಶಾಲನಗರ: </strong>ಕಳೆದ 4 ದಿನಗಳಿಂದ ಎಡಬಿಡದೆ ಸುರಿಯುತ್ತಿದ್ದ ಸೋನೆ ಮಳೆ ಸುಂಟಿಕೊಪ್ಪದಲ್ಲಿ ಮುಂದುವರಿದಿದ್ದು ಬುಧವಾರವೂ ಸುರಿಯಿತು. ಉಳಿದೆಡೆಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದ್ದ ದೃಶ್ಯ ಕಂಡು ಬಂತು.</span><br /> <br /> ಕೆಲ ಸಮಯ ತುಂತುರು ಮಳೆ ಸುರಿದರೆ ಮತ್ತೆ ಕೆಲ ಸಮಯ ರಭಸವಾಗಿ ಸುರಿಯಿತು. ಹೀಗಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಮಳೆಯಲ್ಲಿ ಕೊಡೆಹಿಡಿದು ಶಾಲೆಗೆ ತೆರಳಿದರು.<br /> <br /> ಇನ್ನು ಬೀದಿ ಬದಿ ವ್ಯಾಪಾರಸ್ಥರು ಕೂಡ ಮಳೆಯಲ್ಲಿಯೇ ಕೊಡೆ ಹಿಡಿದು ವ್ಯಾಪಾರ ಮಾಡುತ್ತಿದ್ದ ದೃಶ್ಯ ಕೂಡ ಕಂಡು ಬಂತು. ಆದರೆ ಕಳೆದ 2 ದಿನಗಳಿಂದ ಕುಶಾಲನಗರ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿತ್ತಾದರೂ ಬುಧವಾರ ಮಳೆ ಪ್ರಮಾಣ ಕ್ಷೀಣಿಸಿದೆ. ಕುಶಾಲನಗರ, ಹಾರಂಗಿ, ಹೆಬ್ಬಾಲೆ, ಕೂಡಿಗೆ, ಏಳನೆ ಹೊಸಕೋಟೆ ಪ್ರದೇಶಗಳಲ್ಲಿ ಬುಧವಾರ ತುಂತುರು ಮಳೆಯಾಯಿತು.<br /> <br /> <strong>ಸಾಧಾರಣ ಮಳೆ</strong><br /> ಶನಿವಾರಸಂತೆ: ಶನಿವಾರಸಂತೆ ಹೋಬಳಿಯಲ್ಲಿ ಮಂಗಳವಾರ ಸಾಧಾರಣ ಮಳೆಯಾಗಿದೆ. ಪಟ್ಟಣವೂ ಸೇರಿದಂತೆ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಯಳ್ಳಿ, ಗಂಗನಹಳ್ಳಿ ಇತರ ಗ್ರಾಮಗಳಲ್ಲಿ ಅರ್ಧ ಇಂಚು ಮಳೆಯಾಗಿದೆ.<br /> <br /> ಶನಿವಾರಸಂತೆ ಹೋಬಳಿಯಲ್ಲಿ ವರ್ಷ ಆರಂಭದಿಂದ ಜೂನ್ 12ರವರೆಗೆ 8 ಇಂಚು ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಗೆ 18 ಇಂಚು ಮಳೆಯಾಗಿತ್ತು. ಕೊಡ್ಲಿಪೇಟೆ ಹೋಬಳಿಗೆ ಈ ವರ್ಷ ಉತ್ತಮವಾಗಿ ಮಳೆಯಾಗುತ್ತಿದೆ.<br /> <br /> `ಈ ವರ್ಷ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೃಷಿ ಕೆಲಸ ಮಂದಗತಿಯಲ್ಲಿ ಸಾಗುತ್ತಿದೆ. ಬಿಡದೇ ಗಟ್ಟಿಮಳೆಯಾಗಿ ತೋಡಿನಲ್ಲಿ ನೀರು ಸಂಗ್ರಹವಾದರೆ ಮಾತ್ರ ಬತ್ತದ ವ್ಯವಸಾಯ ಆರಂಭಿಸಬಹುದು. ಗದ್ದೆಗಳಲ್ಲಿ ನೀರಾಗದ ಕಾರಣ ನೀರು ಅಗೆ ಹಾಕಲಾಗಿಲ್ಲ. ಸಸಿಮಡಿ ಕೂಡ ಸಿದ್ಧವಾಗಿಲ್ಲ. ಈ ಮಳೆ ನೀರು ಸಾಕಾಗುವುದಿಲ್ಲ ಎನ್ನುತ್ತಾರೆ' ತೋಯಳ್ಳಿ ಗ್ರಾಮದ ಕೃಷಿಕ ಟಿ.ಆರ್.ಸುರೇಶ್.<br /> <br /> ಕೆಲವೆಡೆ ಕಾಫಿ ತೋಟಗಳಲ್ಲಿ ಗೊಬ್ಬರ ಹಾಕಲು ಮಳೆ ಸಾಕಾಗುವುದಿಲ್ಲ. ಗೊಬ್ಬರ ಹಾಕಿದ ನಂತರ ಸ್ಪ್ರೇ ಮಾಡಬೇಕಾಗುತ್ತದೆ. ಹಾಗಾಗಿ, ಕಾಫಿ ಬೆಳೆಗಾರರು ಹೆಚ್ಚು ಮಳೆಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>