ಕೋಲಾರ: ಸಾರಿಗೆ ನೌಕರರ ಮುಷ್ಕರ ಸಂಬಂಧ ಹೇಳಿಕೆ ನೀಡಿದ್ದ ತಿಪಟೂರು ಶಾಸಕ ಬಿ.ಸಿ.ನಾಗೇಶ್ ಅವರನ್ನು ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ನಾಗರಾಜು ಎಂಬುವರು ಅವಾಚ್ಯವಾಗಿ ನಿಂದಿಸಿದ್ದು, ಇದರ ಆಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಗುರುವಾರ ವೈರಲ್ ಆಗಿದೆ.
ಪ್ರಯಾಣಿಕರೊಬ್ಬರ ಕರೆಗೆ ಪ್ರತಿಕ್ರಿಯಿಸಿದ್ದ ನಾಗೇಶ್ ಅವರು, ‘ಸಾರಿಗೆ ನೌಕರರಿಗೆ ಸಂಬಳ ಸಾಕಾಗದಿದ್ದರೆ ಕೆಲಸ ಬಿಡಲಿ. ಯಾರದ್ದೋ ಮಾತು ಕೇಳಿ ಪ್ರತಿಭಟನೆ ಮಾಡುತ್ತಿರುವ ಕಂಡಕ್ಟರ್ಗಳನ್ನು ಹಿಡಿದು ಹೊಡೆಯಿರಿ’ ಎಂದು ಹೇಳಿದ್ದ ಆಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಬುಧವಾರ ಹರಿದಾಡಿತ್ತು.
ಶಾಸಕರ ಹೇಳಿಕೆಯಿಂದ ಆಕ್ರೋಶಗೊಂಡ ನಾಗರಾಜು, ‘ನಾಗೇಶ್ ಅವರಿಗೆ ತಾಕತ್ ಇದ್ದರೆ ಸಾರಿಗೆ ನೌಕರರನ್ನು ಮುಟ್ಟಲಿ. ಎ.ಸಿ ಕೊಠಡಿಯಲ್ಲಿ ಕುಳಿತು ಲಂಚ ತಿಂದು ಇಷ್ಟೆಲ್ಲಾ ಮಾತಾಡುತ್ತೀರಾ’ ಎಂದು ಮನಸೋಇಚ್ಛೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.