<p><strong>ಕೋಲಾರ</strong>: ತಾಲ್ಲೂಕಿನ ತೇರಹಳ್ಳಿ ಬೆಟ್ಟದ ಶಿವಗಂಗೆಯ ಆದಿಮ ಸಾಂಸ್ಕೃತಿಕ ಕಲಾ ಕೇಂದ್ರದಲ್ಲಿ ಭಾನುವಾರ ರಾತ್ರಿ ಹಮ್ಮಿಕೊಂಡಿದ್ದ 221ನೇ ಹುಣ್ಣಿಮೆ ಹಾಡು ಕಾರ್ಯಕ್ರಮದಲ್ಲಿ ‘ಊರುಭಂಗ’ ನಾಟಕ ಪ್ರೇಕ್ಷಕರನ್ನು ಮೋಡಿ ಮಾಡಿತು.</p>.<p>ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಸಿ.ಮಂಜುನಾಥ್ ಅವರನ್ನು ಗೌರವಿಸಲಾಯಿತು. ನಾಟಕದ ಜೊತೆಗೆ ಅತಿಥಿಗಳ ಮಾತಿನ ಹೂರಣವೂ ಇತ್ತು.</p>.<p>ಕೋಲಾರ ನಗರಸಭೆ ಆಯುಕ್ತ ಜಿ.ನವೀನ್ ಚಂದ್ರ ಮಾತನಾಡಿ, ‘ಆದಿಮದ ಸಮಾಜಮುಖಿ ಕಾರ್ಯ ಚಟುವಟಿಕೆ ಕೇಳಿ ಖುಷಿಯಾಯಿತು. ಬೆಟ್ಟದಲ್ಲಿ ಇಂತಹ ಕೇಂದ್ರ ಆರಂಭಿಸಿ, ಇಷ್ಟು ಬೆಳೆಯಲು ಕಾರಣರಾದ ಪ್ರತಿಯೊಬ್ಬರಿಗೂ ಅಭಿನಂದನೆಗಳು’ ಎಂದರು.</p>.<p>ಶ್ರೀನಿವಾಸಪುರ ಶ್ರೀಭೈರವೇಶ್ವರ ವಿದ್ಯಾಸಂಸ್ಥೆ ನಿರ್ದೇಶಕ ಎ.ವೆಂಕಟರೆಡ್ಡಿ ಮಾತನಾಡಿ, ‘ನೆಲಸಂಸ್ಕೃತಿಯ ನಡೆಯಾಗಿ ಆದಿಮ ಆರಂಭದಿಂದಲೂ ಉತ್ತಮ ಕೆಲಸ ಮಾಡಿಕೊಂಡು ಬಂದಿದೆ. ಅನೇಕರ ಹೆಜ್ಜೆ ಹೆಗಲುಗಳು, ನಡೆ ನುಡಿಗಳು, ಕವಲುಗಳ ನಡುವೆ ಈ ಮಟ್ಟಕ್ಕೆ ಬೆಳೆದು ನಿಂತಿದೆ. ಹಲವರ ಜನರ ಬೆವರು ಹನಿಗಳು ಬಿದ್ದಿವೆ’ ಎಂದು ಹೇಳಿದರು.</p>.<p>ಕಲಾವಿದರಿಗೆ ಹಲವು ಪ್ರಕಾರಗಳನ್ನು ಅಭಿವ್ಯಕ್ತಗೊಳಿಸುವ ಹಂಬಲ ಇರುತ್ತದೆ. ಸರ್ಟಿಫಿಕೇಟ್ ಪಡೆಯುವುದಷ್ಟೇ ಅಲ್ಲ; ನಂತರ ಏನಾಗಬೇಕೆನ್ನುವುದು ಮುಖ್ಯ. ರೋಗಗ್ರಸ್ಥ ಸಮಾಜಕ್ಕೆ ವಿವಿಧ ಕಲಾಪ್ರಕಾರಗಳ ಮೂಲಕ ಉತ್ತಮ ಸಂದೇಶ ನೀಡಿ ಮಾದರಿ ಆಗಬೇಕಿದೆ ಎಂದು ಅವರು ರಂಗಶಿಕ್ಷಣ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.</p>.<p>ಕಲಾವಿದರು ಸಂತೃಪ್ತ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಸಮಾಜ ಅವರನ್ನು ಗಮನಿಸುವ, ಗೌರವದಿಂದ ಕಾಣುವ ಮಟ್ಟಕ್ಕೆ ಇನ್ನೂ ಬಂದಿಲ್ಲ. ನಟ, ರಂಗಕರ್ಮಿ ಮಂಡ್ಯ ರಮೇಶ್ ಅವರನ್ನು ಭೇಟಿಯಾದಾಗ ಸವಾಲುಗಳನ್ನು ಹೇಳಿದ್ದನ್ನು ಸ್ಮರಿಸಿಕೊಂಡರು.</p>.<p>ಕಲಾವಿದರು ಧೃತಿಗೆಡದೆ ತಲೆಮಾರುಗಳಿಂದ ತಮ್ಮ ಕೆಲಸ ಮಾಡಿಕೊಂಡು ಬಂದಿದ್ದಾರೆ. ಕಾಲ ಎಷ್ಟೇ ಆಧುನಿಕವಾದರೂ ನೆಲಸಂಸ್ಕೃತಿ ಹಾಗೂ ಮುಂದಿನ ಪೀಳಿಗೆಗೆ ಕೊಡಬೇಕಾದ ಜವಾಬ್ದಾರಿ ತಮ್ಮ ಮೇಲೆ ಇದೆ. ಕಲಾವಿದರಿಗೆ ಒಂದು ಸಶಕ್ತ ಸಮಾಜ ಕಟ್ಟುವ ಸಾಮರ್ಥ್ಯವಿದೆ ಎಂದು ಹೇಳಿದರು.</p>.<p>ಗೌರವ ಸ್ವೀಕರಿಸಿದ ಶಿಕ್ಷಕ ಸಿ.ಮಂಜುನಾಥ್, ಆದಿಮ ನನಗೆ ಒಂದು ವಿಶ್ವವಿದ್ಯಾಲಯ. ಆದ್ದರಿಂದ ಅನೇಕ ವಿಷಯ, ವಿಚಾರಗಳನ್ನು ಕಲಿಯಲು, ಮಕ್ಕಳಿಗೆ ಕಲಿಸಲು ಸಾಧ್ಯವಾಗಿದೆ ಎಂದರು.</p>.<p>ಇದೇ ಸಂದರ್ಭದಲ್ಲಿ ಆದಿಮ ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳಿಗೆ ಬೆಳಕು ವಿನ್ಯಾಸ ತರಬೇತಿ ನೀಡಿದ ರಾಜೇಶ್ ನೃತ್ಯ ಅವರನ್ನು ಗೌರವಿಸಲಾಯಿತು. ಆದಿಮ ಆಶಯ ಗೀತೆ ಡಿ.ಆರ್.ರಾಜಪ್ಪ ಹಾಡಿದರು.</p>.<p>ಭಾಸ ರಚನೆಯ ಊರುಭಂಗ ನಾಟಕವನ್ನು ಎಲ್. ಗುಂಡಪ್ಪ ಕನ್ನಡಕ್ಕೆ ಅನುವಾದಿಸಿದ್ದಾರೆ. ಬೆಳಕು; ಮೈಕೊ ಶಿವಶಂಕರ್, ಸಂಗೀತ; ಲೀಲಾ ಕೃಷ್ಣ, ವಿನ್ಯಾಸ,ನಿರ್ದೇಶನ; ರಾಮಕೃಷ್ಣ ಬೆಳ್ತೂರು ನೆರವಿನೊಂದಿಗೆ ಆಹಾರ್ಯ ಕಲ್ಚರಲ್ ಟ್ರಸ್ಟ್ ಕಲಾವಿದರು ಪ್ರದರ್ಶನ ನೀಡಿದರು.</p>.<p>ಆದಿಮ ಆಡಳಿತಾಧಿಕಾರಿ ರಮೇಶ್, ರಾಜಪ್ಪ, ಮಣಿ, ತುರಂಡಹಳ್ಳಿ ಶ್ರೀನಿವಾಸ್, ಕಾಳಿದಾಸ್, ನಾಯಕ್, ನಾರಾಯಣಸ್ವಾಮಿ, ಚನ್ನಕೇಶವ, ಮೌನಿಕಾ, ಪ್ರಾಂಶುಪಾಲರು, ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲಾರ</strong>: ತಾಲ್ಲೂಕಿನ ತೇರಹಳ್ಳಿ ಬೆಟ್ಟದ ಶಿವಗಂಗೆಯ ಆದಿಮ ಸಾಂಸ್ಕೃತಿಕ ಕಲಾ ಕೇಂದ್ರದಲ್ಲಿ ಭಾನುವಾರ ರಾತ್ರಿ ಹಮ್ಮಿಕೊಂಡಿದ್ದ 221ನೇ ಹುಣ್ಣಿಮೆ ಹಾಡು ಕಾರ್ಯಕ್ರಮದಲ್ಲಿ ‘ಊರುಭಂಗ’ ನಾಟಕ ಪ್ರೇಕ್ಷಕರನ್ನು ಮೋಡಿ ಮಾಡಿತು.</p>.<p>ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಸಿ.ಮಂಜುನಾಥ್ ಅವರನ್ನು ಗೌರವಿಸಲಾಯಿತು. ನಾಟಕದ ಜೊತೆಗೆ ಅತಿಥಿಗಳ ಮಾತಿನ ಹೂರಣವೂ ಇತ್ತು.</p>.<p>ಕೋಲಾರ ನಗರಸಭೆ ಆಯುಕ್ತ ಜಿ.ನವೀನ್ ಚಂದ್ರ ಮಾತನಾಡಿ, ‘ಆದಿಮದ ಸಮಾಜಮುಖಿ ಕಾರ್ಯ ಚಟುವಟಿಕೆ ಕೇಳಿ ಖುಷಿಯಾಯಿತು. ಬೆಟ್ಟದಲ್ಲಿ ಇಂತಹ ಕೇಂದ್ರ ಆರಂಭಿಸಿ, ಇಷ್ಟು ಬೆಳೆಯಲು ಕಾರಣರಾದ ಪ್ರತಿಯೊಬ್ಬರಿಗೂ ಅಭಿನಂದನೆಗಳು’ ಎಂದರು.</p>.<p>ಶ್ರೀನಿವಾಸಪುರ ಶ್ರೀಭೈರವೇಶ್ವರ ವಿದ್ಯಾಸಂಸ್ಥೆ ನಿರ್ದೇಶಕ ಎ.ವೆಂಕಟರೆಡ್ಡಿ ಮಾತನಾಡಿ, ‘ನೆಲಸಂಸ್ಕೃತಿಯ ನಡೆಯಾಗಿ ಆದಿಮ ಆರಂಭದಿಂದಲೂ ಉತ್ತಮ ಕೆಲಸ ಮಾಡಿಕೊಂಡು ಬಂದಿದೆ. ಅನೇಕರ ಹೆಜ್ಜೆ ಹೆಗಲುಗಳು, ನಡೆ ನುಡಿಗಳು, ಕವಲುಗಳ ನಡುವೆ ಈ ಮಟ್ಟಕ್ಕೆ ಬೆಳೆದು ನಿಂತಿದೆ. ಹಲವರ ಜನರ ಬೆವರು ಹನಿಗಳು ಬಿದ್ದಿವೆ’ ಎಂದು ಹೇಳಿದರು.</p>.<p>ಕಲಾವಿದರಿಗೆ ಹಲವು ಪ್ರಕಾರಗಳನ್ನು ಅಭಿವ್ಯಕ್ತಗೊಳಿಸುವ ಹಂಬಲ ಇರುತ್ತದೆ. ಸರ್ಟಿಫಿಕೇಟ್ ಪಡೆಯುವುದಷ್ಟೇ ಅಲ್ಲ; ನಂತರ ಏನಾಗಬೇಕೆನ್ನುವುದು ಮುಖ್ಯ. ರೋಗಗ್ರಸ್ಥ ಸಮಾಜಕ್ಕೆ ವಿವಿಧ ಕಲಾಪ್ರಕಾರಗಳ ಮೂಲಕ ಉತ್ತಮ ಸಂದೇಶ ನೀಡಿ ಮಾದರಿ ಆಗಬೇಕಿದೆ ಎಂದು ಅವರು ರಂಗಶಿಕ್ಷಣ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.</p>.<p>ಕಲಾವಿದರು ಸಂತೃಪ್ತ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಸಮಾಜ ಅವರನ್ನು ಗಮನಿಸುವ, ಗೌರವದಿಂದ ಕಾಣುವ ಮಟ್ಟಕ್ಕೆ ಇನ್ನೂ ಬಂದಿಲ್ಲ. ನಟ, ರಂಗಕರ್ಮಿ ಮಂಡ್ಯ ರಮೇಶ್ ಅವರನ್ನು ಭೇಟಿಯಾದಾಗ ಸವಾಲುಗಳನ್ನು ಹೇಳಿದ್ದನ್ನು ಸ್ಮರಿಸಿಕೊಂಡರು.</p>.<p>ಕಲಾವಿದರು ಧೃತಿಗೆಡದೆ ತಲೆಮಾರುಗಳಿಂದ ತಮ್ಮ ಕೆಲಸ ಮಾಡಿಕೊಂಡು ಬಂದಿದ್ದಾರೆ. ಕಾಲ ಎಷ್ಟೇ ಆಧುನಿಕವಾದರೂ ನೆಲಸಂಸ್ಕೃತಿ ಹಾಗೂ ಮುಂದಿನ ಪೀಳಿಗೆಗೆ ಕೊಡಬೇಕಾದ ಜವಾಬ್ದಾರಿ ತಮ್ಮ ಮೇಲೆ ಇದೆ. ಕಲಾವಿದರಿಗೆ ಒಂದು ಸಶಕ್ತ ಸಮಾಜ ಕಟ್ಟುವ ಸಾಮರ್ಥ್ಯವಿದೆ ಎಂದು ಹೇಳಿದರು.</p>.<p>ಗೌರವ ಸ್ವೀಕರಿಸಿದ ಶಿಕ್ಷಕ ಸಿ.ಮಂಜುನಾಥ್, ಆದಿಮ ನನಗೆ ಒಂದು ವಿಶ್ವವಿದ್ಯಾಲಯ. ಆದ್ದರಿಂದ ಅನೇಕ ವಿಷಯ, ವಿಚಾರಗಳನ್ನು ಕಲಿಯಲು, ಮಕ್ಕಳಿಗೆ ಕಲಿಸಲು ಸಾಧ್ಯವಾಗಿದೆ ಎಂದರು.</p>.<p>ಇದೇ ಸಂದರ್ಭದಲ್ಲಿ ಆದಿಮ ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳಿಗೆ ಬೆಳಕು ವಿನ್ಯಾಸ ತರಬೇತಿ ನೀಡಿದ ರಾಜೇಶ್ ನೃತ್ಯ ಅವರನ್ನು ಗೌರವಿಸಲಾಯಿತು. ಆದಿಮ ಆಶಯ ಗೀತೆ ಡಿ.ಆರ್.ರಾಜಪ್ಪ ಹಾಡಿದರು.</p>.<p>ಭಾಸ ರಚನೆಯ ಊರುಭಂಗ ನಾಟಕವನ್ನು ಎಲ್. ಗುಂಡಪ್ಪ ಕನ್ನಡಕ್ಕೆ ಅನುವಾದಿಸಿದ್ದಾರೆ. ಬೆಳಕು; ಮೈಕೊ ಶಿವಶಂಕರ್, ಸಂಗೀತ; ಲೀಲಾ ಕೃಷ್ಣ, ವಿನ್ಯಾಸ,ನಿರ್ದೇಶನ; ರಾಮಕೃಷ್ಣ ಬೆಳ್ತೂರು ನೆರವಿನೊಂದಿಗೆ ಆಹಾರ್ಯ ಕಲ್ಚರಲ್ ಟ್ರಸ್ಟ್ ಕಲಾವಿದರು ಪ್ರದರ್ಶನ ನೀಡಿದರು.</p>.<p>ಆದಿಮ ಆಡಳಿತಾಧಿಕಾರಿ ರಮೇಶ್, ರಾಜಪ್ಪ, ಮಣಿ, ತುರಂಡಹಳ್ಳಿ ಶ್ರೀನಿವಾಸ್, ಕಾಳಿದಾಸ್, ನಾಯಕ್, ನಾರಾಯಣಸ್ವಾಮಿ, ಚನ್ನಕೇಶವ, ಮೌನಿಕಾ, ಪ್ರಾಂಶುಪಾಲರು, ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>