ಮತ್ತೊಂದು ಪ್ರಕರಣದಲ್ಲಿ ಕೋರಮಂಡಲ್ನ ಡಾ.ಅಂಬೇಡ್ಕರ್ ಶಾಲೆಯ ಬಳಿ ಅಪಘಾತಕ್ಕೆ ಒಳಗಾದ ಗಂಡು ಜಿಂಕೆ ಶಾಲೆಯ ಹೊರವಲಯದಲ್ಲಿ ನರಳುತ್ತಾ ಬಿದ್ದಿತ್ತು. ಅದನ್ನು ಗಮನಿಸಿದ ನಿವಾಸಿಗಳು ಬೆಮಲ್ ನಗರದ ಸ್ನೇಕ್ ರಾಜ ಅವರನ್ನು ಕರೆಸಿಕೊಂಡರು. ನಂತರ ಗಾಯಗೊಂಡ ಜಿಂಕೆಗೆ ರಾಬರ್ಟಸನ್ಪೇಟೆಯ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಅರಣ್ಯ ಇಲಾಖೆಯ ಸಿಬ್ಬಂದಿ ಜಿಂಕೆಯನ್ನು ಕರೆದೊಯ್ದರು.