ಆದರೆ, ಬಂಗಾರಪೇಟೆಯ ಶಹಬಾಜ್ ಅಹಮ್ಮದ್ ಷರೀಫ್ (25) ಎಂಬುವರು ಶತಾಬ್ಧಿ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ. ಜತೆಗೆ ಮಹಿಳಾ ಪ್ರಯಾಣಿಕರೊಬ್ಬರು ಗಾಯಗೊಂಡಿದ್ದಾರೆ. ಶತಾಬ್ಧಿ ಎಕ್ಸ್ಪ್ರೆಸ್ ರೈಲು ಬರುವ ಬಗ್ಗೆ ನಿಲ್ದಾಣದ ಸಿಬ್ಬಂದಿ ಧ್ವನಿವರ್ಧಕದ ಮೂಲಕ ಯಾವುದೇ ಮುನ್ಸೂಚನೆ ನೀಡದ್ದಿದ್ದುದೇ ಘಟನೆಗೆ ಕಾರಣ ಎಂದು ಪ್ರಯಾಣಿಕರು ಆರೋಪಿಸಿದರು. ಶಹಬಾಜ್, ಬೆಂಗಳೂರಿನ ಕೆ.ಆರ್.ಪುರಂ ಕಾಲ್ಸೆಂಟರ್ನಲ್ಲಿ ಉದ್ಯೋಗಿಯಾಗಿದ್ದರು.