ಹಾರೋಹಳ್ಳಿ: ರಾಮನಗರ ಬಿಜೆಪಿ ಅಭ್ಯರ್ಥಿ ಗೌತಮ್ ಗೌಡ ಭಾನುವಾರ ಕೆಆರ್ಐಡಿಎಲ್ ಅಧ್ಯಕ್ಷ ಎಂ. ರುದ್ರೇಶ್ ನಿವಾಸಕ್ಕೆ ತೆರಳಿ ಬಂಡಾಯ ಶಮನಕ್ಕೆ ಮುಂದಾದರು.
ಬಿಜೆಪಿಯಲ್ಲಿ ಗುಂಪುಗಾರಿಕೆ ಇದ್ದು ಅಭ್ಯರ್ಥಿ ಗೌತಮ್ ಗೌಡ ಏಕಮುಖ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಮುನಿಸಿಕೊಂಡು ರುದ್ರೇಶ್ ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ತೊಡಗಿಸಿಕೊಂಡು ರಾಮನಗರ ಕ್ಷೇತ್ರದಿಂದ ದೂರ ಉಳಿದಿದ್ದರು. ಹಾಗಾಗಿ ಗೌತಮ್ ಗೌಡ, ರುದ್ರೇಶ್ ಅವರನ್ನು ಭೇಟಿ ಮಾಡಿ ಬೆಂಬಲ ಕೋರಿದರು.
ಈ ವೇಳೆ ಮಾಜಿ ಪ್ರಾಧಿಕಾರ ಅಧ್ಯಕ್ಷ ಎಚ್.ಎಸ್.ಮುರಳಿಧರ್, ಎಸ್.ಆರ್.ನಾಗರಾಜ್, ಒಬಿಸಿ ನಾಗರಾಜ್, ಪ್ರಶಾಂತ್, ಕಿರಣ್ ಪಕ್ಷದ ಚುನಾವಣೆ ಪ್ರಭಾರ ಮಂಜುನಾಥ, ರಾಜ್ಯ ಎಸ್. ಸಿ ಮೋರ್ಚ ಕಾರ್ಯಕಾರಣಿ ಸದಸ್ಯ ಕೃಷ್ಣ ಇದ್ದರು.