‘ಶೇ 40 ಕಮಿಷನ್ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಹಾದಿಬೀದಿಯಲ್ಲಿ ಚರ್ಚೆ ಆಗುತ್ತಿದೆ. ನಾನು ರೈತರ ₹ 25 ಸಾವಿರ ಕೋಟಿ ಸಾಲ ಮನ್ನಾ ಮಾಡಿದೆ. ಆ ₹ 25 ಸಾವಿರ ಕೋಟಿಗೆ ಪರ್ಸೆಂಟೇಜ್ ತೆಗೆದುಕೊಂಡಿದ್ದರೆ ₹ 10 ಸಾವಿರ ಕೋಟಿ ಗಳಿಸಬಹುದಿತ್ತು. ಗುತ್ತಿಗೆದಾರರಿಗೆ ಹೇಳಿ ವೋಟಿಗೆ ಐನೂರು ಸಾವಿರ ಕೊಟ್ಟು ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ಅಂತ ಹೇಳಬಹುದಿತ್ತು. ಆದರೆ, ನಾನು ಅಂತಹ ದ್ರೋಹದ ಕೆಲಸ ಮಾಡಿಲ್ಲ’ ಎಂದರು.