<p>ಬಂಗಾರಪೇಟೆ: ದೇಶದ ಪ್ರಧಾನಿಗೆ ಭದ್ರತೆ ಒದಗಿಸುವಲ್ಲಿ ಪಂಜಾಬ್ ಸರ್ಕಾರ ವಿಫಲವಾಗಿರುವುದನ್ನು ಖಂಡಿಸಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ತಾಲ್ಲೂಕು ಕಚೇರಿ ಮುಂದೆ ಮೌನ ಪ್ರತಿಭಟನೆ<br />ನಡೆಸಿದರು.</p>.<p>ಪ್ರಧಾನಿ ಅಥವಾ ರಾಜ್ಯದ ಮುಖ್ಯಮಂತ್ರಿ ಯಾವುದೇ ಜಿಲ್ಲೆಯೊಂದಕ್ಕೆ ತೆರಳುವ ಮುನ್ನ ಅಲ್ಲಿನ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಭದ್ರತೆಗೆ ಸಂಬಂಧಿಸಿದ ಟ್ರಯಲ್ ರೂಟ್ ಪರಿಶೀಲಿಸುತ್ತದೆ. ಅದೇ ರೀತಿ ಪ್ರಧಾನಿ ಬರುವ ಮುನ್ನಾ ಮಾರ್ಗ ಪರಿಶೀಲಿಸಿದ್ದು, ಯಾವುದೇ ಅಡಚಣೆ ಇರಲಿಲ್ಲ. ಆದರೆ, ಮೋದಿ ಬರುವ ಸಂದರ್ಭದಲ್ಲಿಯೇ ಕಾಂಗ್ರೆಸ್ನ ದಲ್ಲಾಳಿಗಳು ರೈತರಿಂದ ಧರಣಿ ಮಾಡಿಸಿರುವುದು ಖಂಡನೀಯ ಎಂದು ಮುಖಂಡ ಕೆ. ಚಂದ್ರಾರೆಡ್ಡಿ<br />ದೂರಿದರು.</p>.<p>ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಬಿ.ವಿ. ಮಹೇಶ್, ಕರ್ನಾಟಕ ದ್ರಾಕ್ಷಾರಸ ಮಂಡಳಿ ನಿರ್ದೇಶಕ ಅಭಿಲಾಷ್ ಕಾರ್ತಿಕ್, ನಾರಾಯಣಗೌಡ, ಹನುಮಪ್ಪ, ಡಿ.ಕೆ. ಹಳ್ಳಿ ಪಂಚಾಯಿತಿ ಅಧ್ಯಕ್ಷೆ ಕಲಾವತಿ, ಚೌಡಪ್ಪ, ಬಿಜೆಪಿ ತಾಲ್ಲೂಕು ಅಧ್ಯಕ್ಷ ನಾಗೇಶ್, ಪುರಸಭಾ ಸದಸ್ಯ ಕಪಾಲಿ ಶಂಕರ್, ಹೊಸರಾಯಪ್ಪ, ಹುಲಿಬೆಲೆ ಗ್ರಾ.ಪಂ. ಸದಸ್ಯ ಪ್ರಸನ್ನ, ಪ್ರಭಾಕರ್ ರಾವ್, ಬಿಂದು ಮಾಧವ್ ಪ್ರತಿಭಟನೆಯಲ್ಲಿ<br />ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಂಗಾರಪೇಟೆ: ದೇಶದ ಪ್ರಧಾನಿಗೆ ಭದ್ರತೆ ಒದಗಿಸುವಲ್ಲಿ ಪಂಜಾಬ್ ಸರ್ಕಾರ ವಿಫಲವಾಗಿರುವುದನ್ನು ಖಂಡಿಸಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ತಾಲ್ಲೂಕು ಕಚೇರಿ ಮುಂದೆ ಮೌನ ಪ್ರತಿಭಟನೆ<br />ನಡೆಸಿದರು.</p>.<p>ಪ್ರಧಾನಿ ಅಥವಾ ರಾಜ್ಯದ ಮುಖ್ಯಮಂತ್ರಿ ಯಾವುದೇ ಜಿಲ್ಲೆಯೊಂದಕ್ಕೆ ತೆರಳುವ ಮುನ್ನ ಅಲ್ಲಿನ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಭದ್ರತೆಗೆ ಸಂಬಂಧಿಸಿದ ಟ್ರಯಲ್ ರೂಟ್ ಪರಿಶೀಲಿಸುತ್ತದೆ. ಅದೇ ರೀತಿ ಪ್ರಧಾನಿ ಬರುವ ಮುನ್ನಾ ಮಾರ್ಗ ಪರಿಶೀಲಿಸಿದ್ದು, ಯಾವುದೇ ಅಡಚಣೆ ಇರಲಿಲ್ಲ. ಆದರೆ, ಮೋದಿ ಬರುವ ಸಂದರ್ಭದಲ್ಲಿಯೇ ಕಾಂಗ್ರೆಸ್ನ ದಲ್ಲಾಳಿಗಳು ರೈತರಿಂದ ಧರಣಿ ಮಾಡಿಸಿರುವುದು ಖಂಡನೀಯ ಎಂದು ಮುಖಂಡ ಕೆ. ಚಂದ್ರಾರೆಡ್ಡಿ<br />ದೂರಿದರು.</p>.<p>ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಬಿ.ವಿ. ಮಹೇಶ್, ಕರ್ನಾಟಕ ದ್ರಾಕ್ಷಾರಸ ಮಂಡಳಿ ನಿರ್ದೇಶಕ ಅಭಿಲಾಷ್ ಕಾರ್ತಿಕ್, ನಾರಾಯಣಗೌಡ, ಹನುಮಪ್ಪ, ಡಿ.ಕೆ. ಹಳ್ಳಿ ಪಂಚಾಯಿತಿ ಅಧ್ಯಕ್ಷೆ ಕಲಾವತಿ, ಚೌಡಪ್ಪ, ಬಿಜೆಪಿ ತಾಲ್ಲೂಕು ಅಧ್ಯಕ್ಷ ನಾಗೇಶ್, ಪುರಸಭಾ ಸದಸ್ಯ ಕಪಾಲಿ ಶಂಕರ್, ಹೊಸರಾಯಪ್ಪ, ಹುಲಿಬೆಲೆ ಗ್ರಾ.ಪಂ. ಸದಸ್ಯ ಪ್ರಸನ್ನ, ಪ್ರಭಾಕರ್ ರಾವ್, ಬಿಂದು ಮಾಧವ್ ಪ್ರತಿಭಟನೆಯಲ್ಲಿ<br />ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>