ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕೋಲಾರ | ಹೊರಗಿನವರಿಗೆ ಉಸ್ತುವಾರಿ; ಪರಂಪರೆ ಮುಂದುವರಿಕೆ!

ಸಚಿವ ಬೈರತಿ ಸುರೇಶ್‌ಗೆ ಅಸ್ತು–ಮುನಿಯಪ್ಪ, ಕೃಷ್ಣ‌ಬೈರೇಗೌಡಗೆ ತಪ್ಪಿದ ಅವಕಾಶ
Published : 9 ಜೂನ್ 2023, 19:30 IST
Last Updated : 9 ಜೂನ್ 2023, 19:30 IST
ಫಾಲೋ ಮಾಡಿ
Comments
ಕೆ.ಎಚ್‌.ಮುನಿಯಪ್ಪ
ಕೆ.ಎಚ್‌.ಮುನಿಯಪ್ಪ
ಕೃಷ್ಣ ಬೈರೇಗೌಡ
ಕೃಷ್ಣ ಬೈರೇಗೌಡ
ಮುನಿಯಪ್ಪ, ಕೃಷ್ಣ‌ ಬೈರೇಗೌಡಗೆ ಮುಳುವಾದ ಜಿಲ್ಲೆಯ ಮುಖಂಡರೊಂದಿಗಿನ ಹೊಂದಾಣಿಕೆ ಕೊರತೆ ಕೋಲಾರ ಜಿಲ್ಲೆಯ ಹೆಚ್ಚಿನ ಉಸ್ತುವಾರಿಗಳು ಹೊರ ಜಿಲ್ಲೆಯವರು ಭಾನುವಾರ ಜಿಲ್ಲೆಗೆ ಉಸ್ತುವಾರಿ ಸಚಿವರ ಮೊದಲ ಭೇಟಿ.
ಸಿದ್ದರಾಮಯ್ಯ ಆಪ್ತರೇ ಆಗಿರುವುದರಿಂದ ಅವರಿಂದ ಹೆಚ್ಚಿನ ಅಭಿವೃದ್ಧಿ ಕೆಲಸ ನಡೆಯಲಿವೆ ಎಂಬ ನಂಬಿಕೆ ಇದೆ. ನಾವು ಕೆಲಸ ಮಾಡಿಸಿಕೊಳ್ಳುತ್ತೇವೆ. ಬಿಜೆಪಿ ಅವಧಿಯಲ್ಲಿ ಇದ್ದಂತೆ ನಡೆಯಲ್ಲ.
ಸಿ.ಲಕ್ಷ್ಮಿನಾರಾಯಣ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ
ಸಿದ್ದರಾಮಯ್ಯ ಕನಸು ಸಾಕಾರಕ್ಕೆ ನಿಯೋಜನೆ!
ಸಿದ್ದರಾಮಯ್ಯ ಅವರು ಕೋಲಾರ‌ದಲ್ಲಿ ಸ್ಪರ್ಧಿಸಲು ಮುಂದಾಗಿದ್ದಾಗ ಕ್ಷೇತ್ರದ ಅಭಿವೃದ್ಧಿ ಸಂಬಂಧ ಹಲವು ಯೋಜನೆ ರೂಪಿಸಿದ್ದರು. ಹೀಗಾಗಿ ಆ ಯೋಜನೆ ಸಾಕಾರಗೊಳಿಸಲು ಬೈರತಿ ಸುರೇಶ್‌ ಅವರನ್ನು ನಿಯೋಜಿಸಿದ್ದಾರೆ ಎನ್ನಲಾಗುತ್ತಿದೆ. ಜಿಲ್ಲೆಯ ಕಾಂಗ್ರೆಸ್‌ ಶಾಸಕರು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರು ಕೂಡ ಇದೇ ಮಾತು ಹೇಳಿದ್ದಾರೆ. ಸುರೇಶ್‌ ನಗರಾಭಿವೃದ್ಧಿ ಸಚಿವರೂ ಆಗಿರುವುದರಿಂದ ಕೋಲಾರ ನಗರ ಅಭಿವೃದ್ಧಿಗೆ ನೆರವಾಗಬಹುದು ಎಂಬ ನಿರೀಕ್ಷೆ ಇಲ್ಲಿಯ ಜನರಲ್ಲಿ ಹೆಚ್ಚಿದೆ. ‘ನಾನು ಸದ್ಯ ನವದೆಹಲಿಯಲ್ಲಿದ್ದೇನೆ. ಒಂದೆರಡು ದಿನಗಳಲ್ಲಿ ಕೋಲಾರಕ್ಕೆ ಬಂದು ಮಾತನಾಡುತ್ತೇನೆ’ ಎಂದು ಬೈರತಿ ಸುರೇಶ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ಜೂನ್‌ 11ಕ್ಕೆ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ‘ಶಕ್ತಿ’ ಯೋಜನೆ ಸಂಬಂಧ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣಕ್ಕೆ ಜಿಲ್ಲೆಯಲ್ಲಿ ಆಯೋಜಿಸಿರುವ ಕಾರ್ಯಕ್ರಮಕ್ಕೆ ಅವರು ಕೋಲಾರದಲ್ಲಿ ಚಾಲನೆ ನೀಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT