<p><strong>ಕೋಲಾರ:</strong> ‘ಮಾಲೂರು ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆ ಹಿನ್ನೆಲೆಯಲ್ಲಿ ನಾನು ಬಿಜೆಪಿ ಸದಸ್ಯರಿಗೆ ಹಣದ ಆಮಿಷವೊಡ್ಡಿಲ್ಲ. ಆದರೆ, ಬಿಜೆಪಿ ಮುಖಂಡರು ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.</p>.<p>ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನಾನು ಬಿಜೆಪಿ ಸದಸ್ಯರಿಗೆ ಕರೆ ಮಾಡಿ ಹಣಕಾಸಿನ ಸಂಬಂಧ ಸಂಭಾಷಣೆ ನಡೆಸಿರುವುದಾಗಿ ಬಿಜೆಪಿ ಮುಖಂಡರು ನಕಲಿ ಸಿ.ಡಿ ಸೃಷ್ಟಿಸಿದ್ದಾರೆ. ಆ ಸಿ.ಡಿಯಲ್ಲಿರುವ ಧ್ವನಿ ಮುದ್ರಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ, ಆ ಧ್ವನಿ ನನ್ನದಲ್ಲ’ ಎಂದರು.</p>.<p>‘ಚುನಾವಣೆ ವಿಚಾರವಾಗಿ ಕೆಲ ಪಕ್ಷೇತರ ಸದಸ್ಯರೊಂದಿಗೆ ನಾನು ಮಾತನಾಡಿರುವುದು ನಿಜ. ಆದರೆ, ಅವರಿಗೆ ಹಣದ ಆಮಿಷವೊಡ್ಡಿಲ್ಲ. ಬಿಜೆಪಿ ಸದಸ್ಯರಿಗೆ ಕರೆ ಸಹ ಮಾಡಿಲ್ಲ. ಸಂಸದರು ಹಾಗೂ ಅವರ ಬೆಂಬಲಿಗ ಪಡೆಯು ಹತಾಶೆಯಿಂದ ಸಿ.ಡಿ ಸೃಷ್ಟಿಯ ಕುತಂತ್ರ ಮಾಡಿದೆ’ ಎಂದು ಟೀಕಿಸಿದರು.</p>.<p>‘ಧ್ವನಿ ಅನುಕರಣೆ (ಮಿಮಿಕ್ರಿ) ಮಾಡುವುದರಲ್ಲಿ ನಿಸ್ಸೀಮರಾದ ಬಿಜೆಪಿ ಮುಖಂಡರೇ ನನ್ನ ಧ್ವನಿ ಅನುಕರಿಸಿ ನಕಲಿ ಸಿ.ಡಿ ಸೃಷ್ಟಿಸಿದ್ದಾರೆ. ಸಿ.ಡಿಯಲ್ಲಿರುವ ಧ್ವನಿ ನನ್ನದೆಂದು ಸಾಬೀತುಪಡಿಸಿದರೆ ಆ ಕ್ಷಣವೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಬಿಜೆಪಿ ನನ್ನ ವಿರುದ್ಧ ಮಾಡಿರುವ ಆಮಿಷದ ಆರೋಪ ಸುಳ್ಳಾದರೆ ಸಂಸದರು ರಾಜೀನಾಮೆ ಕೊಡಲು ಸಿದ್ಧರೆ?’ ಎಂದು ಸವಾಲು ಹಾಕಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲಾರ:</strong> ‘ಮಾಲೂರು ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆ ಹಿನ್ನೆಲೆಯಲ್ಲಿ ನಾನು ಬಿಜೆಪಿ ಸದಸ್ಯರಿಗೆ ಹಣದ ಆಮಿಷವೊಡ್ಡಿಲ್ಲ. ಆದರೆ, ಬಿಜೆಪಿ ಮುಖಂಡರು ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.</p>.<p>ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನಾನು ಬಿಜೆಪಿ ಸದಸ್ಯರಿಗೆ ಕರೆ ಮಾಡಿ ಹಣಕಾಸಿನ ಸಂಬಂಧ ಸಂಭಾಷಣೆ ನಡೆಸಿರುವುದಾಗಿ ಬಿಜೆಪಿ ಮುಖಂಡರು ನಕಲಿ ಸಿ.ಡಿ ಸೃಷ್ಟಿಸಿದ್ದಾರೆ. ಆ ಸಿ.ಡಿಯಲ್ಲಿರುವ ಧ್ವನಿ ಮುದ್ರಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ, ಆ ಧ್ವನಿ ನನ್ನದಲ್ಲ’ ಎಂದರು.</p>.<p>‘ಚುನಾವಣೆ ವಿಚಾರವಾಗಿ ಕೆಲ ಪಕ್ಷೇತರ ಸದಸ್ಯರೊಂದಿಗೆ ನಾನು ಮಾತನಾಡಿರುವುದು ನಿಜ. ಆದರೆ, ಅವರಿಗೆ ಹಣದ ಆಮಿಷವೊಡ್ಡಿಲ್ಲ. ಬಿಜೆಪಿ ಸದಸ್ಯರಿಗೆ ಕರೆ ಸಹ ಮಾಡಿಲ್ಲ. ಸಂಸದರು ಹಾಗೂ ಅವರ ಬೆಂಬಲಿಗ ಪಡೆಯು ಹತಾಶೆಯಿಂದ ಸಿ.ಡಿ ಸೃಷ್ಟಿಯ ಕುತಂತ್ರ ಮಾಡಿದೆ’ ಎಂದು ಟೀಕಿಸಿದರು.</p>.<p>‘ಧ್ವನಿ ಅನುಕರಣೆ (ಮಿಮಿಕ್ರಿ) ಮಾಡುವುದರಲ್ಲಿ ನಿಸ್ಸೀಮರಾದ ಬಿಜೆಪಿ ಮುಖಂಡರೇ ನನ್ನ ಧ್ವನಿ ಅನುಕರಿಸಿ ನಕಲಿ ಸಿ.ಡಿ ಸೃಷ್ಟಿಸಿದ್ದಾರೆ. ಸಿ.ಡಿಯಲ್ಲಿರುವ ಧ್ವನಿ ನನ್ನದೆಂದು ಸಾಬೀತುಪಡಿಸಿದರೆ ಆ ಕ್ಷಣವೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಬಿಜೆಪಿ ನನ್ನ ವಿರುದ್ಧ ಮಾಡಿರುವ ಆಮಿಷದ ಆರೋಪ ಸುಳ್ಳಾದರೆ ಸಂಸದರು ರಾಜೀನಾಮೆ ಕೊಡಲು ಸಿದ್ಧರೆ?’ ಎಂದು ಸವಾಲು ಹಾಕಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>