ಲಾಕ್ಡೌನ್ನಿಂದ ರೈತರು, ದಿನಗೂಲಿ ನೌಕರರು, ಕಟ್ಟಡ ಕಾರ್ಮಿಕರು, ಸಣ್ಣ ಕೈಗಾರಿಕೆಗಳ ಮಾಲೀಕರು, ಬೀದಿ ಬದಿ ವ್ಯಾಪಾರಿಗಳು, ಕ್ಯಾಬ್ ಮತ್ತು ಆಟೊ ಚಾಲಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ಸಂತ್ರಸ್ಥರ ನೆರವಿಗೆ ನಿಲ್ಲಲು ಹಾಗೂ ಸೋಂಕು ತಡೆಗೆ ಸುಸಜ್ಜಿತ ಆಸ್ಪತ್ರೆ, ಚಿಕಿತ್ಸೆ ನೀಡುವ ಸರ್ಕಾರದ ಜವಾಬ್ದಾರಿಯುತ ಪ್ರಯತ್ನಕ್ಕೆ ದೇಣಿಗೆ ನೀಡಿದ ಬ್ಯಾಂಕ್ನ ಕಾರ್ಯ ಶ್ಲಾಘನೀಯ ಎಂದು ಮುಖ್ಯಮಂತ್ರಿಗಳು ಪತ್ರದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.