‘ಕೆಲ ಸೊಸೈಟಿ ಸಿಇಒಗಳು ಮೈಗಳ್ಳರಿದ್ದಾರೆ. ಪಡಿತರ ವಿತರಿಸಿ, ಸಾಲ ನೀಡಿದರೆ ತಮ್ಮ ಕೆಲಸ ಮುಗಿಯಿತೆಂದು ಅವರು ಭಾವಿಸಿದ್ದಾರೆ. ಸಾಲ ವಸೂಲಾತಿ, ಪಾವತಿ ವಿವರವನ್ನು ತಮಗೆ ಇಷ್ಟಬಂದಂತೆ ದಾಖಲಿಸುವ ಬಗ್ಗೆ ದೂರುಗಳಿವೆ. ಮುಂದೆ ಅವರ ಆಟ ನಡೆಯಲ್ಲ. ಗಣಕೀಕರಣದಿಂದ ಬುಕ್ ಅಡ್ಜಸ್ಟ್ಮೆಂಟ್ ವಹಿವಾಟಿಗೆ ಕಡಿವಾಣ ಬೀಳುತ್ತದೆ’ ಎಂದು ಅಭಿಪ್ರಾಯಪಟ್ಟರು.