‘ಪ್ರಜಾಪ್ರಭುತ್ವದಲ್ಲಿ ಜನಾಭಿಪ್ರಾಯಕ್ಕೆ ಮಹತ್ವವಿದೆ. ಪೌರತ್ವ ಇಲ್ಲದವರಿಗೆ ಕೊಡಲಾಗುವುದು. ಇರುವವರ ಬಳಿ ಕಿತ್ತುಕೊಳ್ಳುವುದಿಲ್ಲ. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಶಕ್ತಿ ಬಲವಾಗಿದೆ. ಸಿಎಎ ವಿರೋಧಿಸುವ ಸ್ವಾತಂತ್ರ್ಯ ಹೋರಾಟಗಾರರು, ಚಿಂತಕರು, ಸಾಹಿತಿಗಳ ಬಗ್ಗೆ ಮಾತನಾಡುವುದಿಲ್ಲ. ಸುಳ್ಳು ಹೇಳುವವರು ಮತ್ತು ಅಪಪ್ರಚಾರ ಮಾಡುವವರು ರಾಷ್ಟ್ರದ್ರೋಹಿಗಳು’ ಎಂದು ಗುಡುಗಿದರು.