ಐಪಿಎಸ್ ಅಧಿಕಾರಿಯಾಗಿರುವ ಪತಿ ಹೇಮಂತ್ ನಿಂಬಾಳ್ಕರ್, ಕುಟುಂಬ ಸದಸ್ಯರು ಹಾಗೂ ಸಂಬಂಧಿಕರೊಂದಿಗೆ ಬೆಂಗಳೂರಿನಿಂದ ಶನಿವಾರ (ಜ.11) ಪಾದಯಾತ್ರೆ ಆರಂಭಿಸಿದ್ದ ಅಂಜಲಿ ನಿಂಬಾಳ್ಕರ್ ಅವರು ಸೋಮವಾರ ಬೆಳಿಗ್ಗೆ ಗಡಿ ಭಾಗ ರಾಮಸಂದ್ರ ಗೇಟ್ ಮೂಲಕ ಜಿಲ್ಲೆಗೆ ಆಗಮಿಸಿದರು. ಅವರು ಮಾರ್ಗ ಮಧ್ಯೆ ಹಲವೆಡೆ ಪತಿ ಹಾಗೂ ಕುಟುಂಬ ಸದಸ್ಯರೊಂದಿಗೆ ಮೊಬೈಲ್ನಲ್ಲಿ ಸೆಲ್ಫಿ ತೆಗೆದುಕೊಂಡರು.