<p><strong>ಕೋಲಾರ: </strong>‘ಕೊರೊನಾ ಸೋಂಕಿನ ಸಂಕಷ್ಟದ ಸಂದರ್ಭದಲ್ಲೂ ಬಡ್ಡಿರಹಿತ ಸಾಲ ನೀಡಿ ಆರ್ಥಿಕ ಶಕ್ತಿ ತುಂಬುತ್ತಿರುವ ಡಿಸಿಸಿ ಬ್ಯಾಂಕ್ ದೈವ ಸಮಾನ. ಬ್ಯಾಂಕ್ ಉಳಿಸಿ ಬೆಳೆಸುವ ಜವಾಬ್ದಾರಿ ರೈತರು ಮತ್ತು ಮಹಿಳೆಯರ ಮೇಲಿದೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಹೇಳಿದರು.</p>.<p>ಡಿಸಿಸಿ ಬ್ಯಾಂಕ್ ಹಾಗೂ ತಾಲ್ಲೂಕಿನ ಮದ್ದೇರಿ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ (ಎಸ್ಎಫ್ಸಿಎಸ್) ಸಹಯೋಗದಲ್ಲಿ ಮದ್ದೇರಿ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ₹ 1.70 ಕೋಟಿ ಸಾಲದ ಚೆಕ್ ವಿತರಿಸಿ ಮಾತನಾಡಿದರು.</p>.<p>‘ಸಂಕಷ್ಟದಲ್ಲಿ ನೆರವು ನೀಡುವವರು ದೇವರಿಗೆ ಸಮಾನ. ಅಂತಹ ಸ್ಥಾನದಲ್ಲಿ ನಿಂತಿರುವ ಡಿಸಿಸಿ ಬ್ಯಾಂಕ್ ಮನೆ ಬಾಗಿಲಿಗೆ ಬಡ್ಡಿರಹಿತ ಸಾಲ ನೀಡುವ ಮೂಲಕ ಬಡ ಜನರ ಕೈ ಹಿಡಿದಿದೆ. ಆರ್ಥಿಕವಾಗಿ ದಿವಾಳಿಯಾಗಿದ್ದ ಬ್ಯಾಂಕ್ ಚೇತರಿಸಿಕೊಂಡು ಇಡೀ ದೇಶಕ್ಕೆ ಮಾದರಿಯಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.</p>.<p>‘ಸಾಲ ನೀಡಿಕೆಗೆ ಜಾತಿ, ಪಕ್ಷ ನೋಡಿಲ್ಲ. ಮಹಿಳೆಯರು ಸಂಘ ರಚಿಸಿಕೊಂಡು ಬಂದಾಗ ಯಾವ ಪಕ್ಷ, ಜಾತಿ ಎಂದು ಪ್ರಶ್ನಿಸದೆ ಸಾಲ ಕೊಟ್ಟಿದ್ದೇವೆ. ಬದುಕಿಗೆ ಆಸರೆಯಾಗಿರುವ ಬ್ಯಾಂಕ್ನಲ್ಲೇ ಉಳಿತಾಯದ ಹಣ ಠೇವಣಿ ಇಡಬೇಕು’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ಮನವಿ ಮಾಡಿದರು.</p>.<p>‘ಸೊಸೈಟಿ ಇನ್ನು ಮುಂದೆ ಡಿಸಿಸಿ ಬ್ಯಾಂಕ್ ಇದ್ದಂತೆ. ಮಹಿಳೆಯರು ಸೊಸೈಟಿಯಲ್ಲೇ ಠೇವಣಿ ಇಡಬಹುದು. ವಾಣಿಜ್ಯ ಬ್ಯಾಂಕ್ಗಳಲ್ಲಿನ ಖಾತೆಯನ್ನು ಧೈರ್ಯದಿಂದ ಡಿಸಿಸಿ ಬ್ಯಾಂಕ್ಗೆ ಬದಲಿಸಿ’ ಎಂದು ಕೋರಿದರು.</p>.<p><strong>ಹೆಚ್ಚಿನ ಸಾಲ: </strong>‘ಮದ್ದೇರಿ ಗ್ರಾ.ಪಂ ವ್ಯಾಪ್ತಿಯಲ್ಲಿ ಬಡ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಮತ್ತಷ್ಟು ಸಂಘ ರಚಿಸಿಕೊಂಡರೆ ಹೆಚ್ಚಿನ ಸಾಲ ನೀಡಲಾಗುವುದು. ಬಡ್ಡಿರಹಿತ ಸಾಲದ ಸದುಪಯೋಗ ಪಡೆಯಿರಿ’ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮಣ್ಣ ಕಿವಿಮಾತು ಹೇಳಿದರು.</p>.<p>‘ಸೊಸೈಟಿಗಳು ದಿವಾಳಿಯಾಗಿ ಸಕ್ಕರೆ, ಸೀಮೆಎಣ್ಣೆ ವಿತರಣೆಗೆ ಸೀಮಿತವಾಗಿದ್ದವು. ಅಂತಹ ಸಹಕಾರ ಸಂಸ್ಥೆಗಳಿಗೆ ಮರುಜೀವ ನೀಡಲಾಗಿದೆ. ಡಿಸಿಸಿ ಬ್ಯಾಂಕ್ ಹೆಮ್ಮರವಾಗಿ ಬೆಳೆದಿದ್ದು, ಬಡ ರೈತರು ಮತ್ತು ಮಹಿಳೆಯರ ಜೀವಾಳವಾಗಿದೆ’ ಎಂದು ಬ್ಯಾಂಕ್ ನಿರ್ದೇಶಕ ಕೆ.ವಿ.ದಯಾನಂದ್ ಅಭಿಪ್ರಾಯಪಟ್ಟರು.</p>.<p>ಪಿಎಲ್ಡಿ ಬ್ಯಾಂಕ್ ನಿರ್ದೇಶಕ ರಮೇಶ್, ಮದ್ದೇರಿ ಎಸ್ಎಫ್ಸಿಎಸ್ ಅಧ್ಯಕ್ಷ ಶ್ರೀನಿವಾಸಗೌಡ, ಉಪಾಧ್ಯಕ್ಷೆ ಮುನಿರಾಮಕ್ಕ, ನಿರ್ದೇಶಕರಾದ ಶ್ರೀನಿವಾಸ್, ವೆಂಕಟರೆಡ್ಡಿ, ಕೃಷ್ಣಪ್ಪ, ಮಲ್ಲೇಗೌಡ, ನಾರಾಯಣಮ್ಮ, ಈರಮ್ಮ, ನಾರಾಯಣಸ್ವಾಮಿ, ಅಶ್ವತ್ಥ್, ಮಾಜಿ ಅಧ್ಯಕ್ಷ ವೆಂಕಟರಾಮ್ ಪಾಲ್ಗೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲಾರ: </strong>‘ಕೊರೊನಾ ಸೋಂಕಿನ ಸಂಕಷ್ಟದ ಸಂದರ್ಭದಲ್ಲೂ ಬಡ್ಡಿರಹಿತ ಸಾಲ ನೀಡಿ ಆರ್ಥಿಕ ಶಕ್ತಿ ತುಂಬುತ್ತಿರುವ ಡಿಸಿಸಿ ಬ್ಯಾಂಕ್ ದೈವ ಸಮಾನ. ಬ್ಯಾಂಕ್ ಉಳಿಸಿ ಬೆಳೆಸುವ ಜವಾಬ್ದಾರಿ ರೈತರು ಮತ್ತು ಮಹಿಳೆಯರ ಮೇಲಿದೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಹೇಳಿದರು.</p>.<p>ಡಿಸಿಸಿ ಬ್ಯಾಂಕ್ ಹಾಗೂ ತಾಲ್ಲೂಕಿನ ಮದ್ದೇರಿ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ (ಎಸ್ಎಫ್ಸಿಎಸ್) ಸಹಯೋಗದಲ್ಲಿ ಮದ್ದೇರಿ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ₹ 1.70 ಕೋಟಿ ಸಾಲದ ಚೆಕ್ ವಿತರಿಸಿ ಮಾತನಾಡಿದರು.</p>.<p>‘ಸಂಕಷ್ಟದಲ್ಲಿ ನೆರವು ನೀಡುವವರು ದೇವರಿಗೆ ಸಮಾನ. ಅಂತಹ ಸ್ಥಾನದಲ್ಲಿ ನಿಂತಿರುವ ಡಿಸಿಸಿ ಬ್ಯಾಂಕ್ ಮನೆ ಬಾಗಿಲಿಗೆ ಬಡ್ಡಿರಹಿತ ಸಾಲ ನೀಡುವ ಮೂಲಕ ಬಡ ಜನರ ಕೈ ಹಿಡಿದಿದೆ. ಆರ್ಥಿಕವಾಗಿ ದಿವಾಳಿಯಾಗಿದ್ದ ಬ್ಯಾಂಕ್ ಚೇತರಿಸಿಕೊಂಡು ಇಡೀ ದೇಶಕ್ಕೆ ಮಾದರಿಯಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.</p>.<p>‘ಸಾಲ ನೀಡಿಕೆಗೆ ಜಾತಿ, ಪಕ್ಷ ನೋಡಿಲ್ಲ. ಮಹಿಳೆಯರು ಸಂಘ ರಚಿಸಿಕೊಂಡು ಬಂದಾಗ ಯಾವ ಪಕ್ಷ, ಜಾತಿ ಎಂದು ಪ್ರಶ್ನಿಸದೆ ಸಾಲ ಕೊಟ್ಟಿದ್ದೇವೆ. ಬದುಕಿಗೆ ಆಸರೆಯಾಗಿರುವ ಬ್ಯಾಂಕ್ನಲ್ಲೇ ಉಳಿತಾಯದ ಹಣ ಠೇವಣಿ ಇಡಬೇಕು’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ಮನವಿ ಮಾಡಿದರು.</p>.<p>‘ಸೊಸೈಟಿ ಇನ್ನು ಮುಂದೆ ಡಿಸಿಸಿ ಬ್ಯಾಂಕ್ ಇದ್ದಂತೆ. ಮಹಿಳೆಯರು ಸೊಸೈಟಿಯಲ್ಲೇ ಠೇವಣಿ ಇಡಬಹುದು. ವಾಣಿಜ್ಯ ಬ್ಯಾಂಕ್ಗಳಲ್ಲಿನ ಖಾತೆಯನ್ನು ಧೈರ್ಯದಿಂದ ಡಿಸಿಸಿ ಬ್ಯಾಂಕ್ಗೆ ಬದಲಿಸಿ’ ಎಂದು ಕೋರಿದರು.</p>.<p><strong>ಹೆಚ್ಚಿನ ಸಾಲ: </strong>‘ಮದ್ದೇರಿ ಗ್ರಾ.ಪಂ ವ್ಯಾಪ್ತಿಯಲ್ಲಿ ಬಡ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಮತ್ತಷ್ಟು ಸಂಘ ರಚಿಸಿಕೊಂಡರೆ ಹೆಚ್ಚಿನ ಸಾಲ ನೀಡಲಾಗುವುದು. ಬಡ್ಡಿರಹಿತ ಸಾಲದ ಸದುಪಯೋಗ ಪಡೆಯಿರಿ’ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮಣ್ಣ ಕಿವಿಮಾತು ಹೇಳಿದರು.</p>.<p>‘ಸೊಸೈಟಿಗಳು ದಿವಾಳಿಯಾಗಿ ಸಕ್ಕರೆ, ಸೀಮೆಎಣ್ಣೆ ವಿತರಣೆಗೆ ಸೀಮಿತವಾಗಿದ್ದವು. ಅಂತಹ ಸಹಕಾರ ಸಂಸ್ಥೆಗಳಿಗೆ ಮರುಜೀವ ನೀಡಲಾಗಿದೆ. ಡಿಸಿಸಿ ಬ್ಯಾಂಕ್ ಹೆಮ್ಮರವಾಗಿ ಬೆಳೆದಿದ್ದು, ಬಡ ರೈತರು ಮತ್ತು ಮಹಿಳೆಯರ ಜೀವಾಳವಾಗಿದೆ’ ಎಂದು ಬ್ಯಾಂಕ್ ನಿರ್ದೇಶಕ ಕೆ.ವಿ.ದಯಾನಂದ್ ಅಭಿಪ್ರಾಯಪಟ್ಟರು.</p>.<p>ಪಿಎಲ್ಡಿ ಬ್ಯಾಂಕ್ ನಿರ್ದೇಶಕ ರಮೇಶ್, ಮದ್ದೇರಿ ಎಸ್ಎಫ್ಸಿಎಸ್ ಅಧ್ಯಕ್ಷ ಶ್ರೀನಿವಾಸಗೌಡ, ಉಪಾಧ್ಯಕ್ಷೆ ಮುನಿರಾಮಕ್ಕ, ನಿರ್ದೇಶಕರಾದ ಶ್ರೀನಿವಾಸ್, ವೆಂಕಟರೆಡ್ಡಿ, ಕೃಷ್ಣಪ್ಪ, ಮಲ್ಲೇಗೌಡ, ನಾರಾಯಣಮ್ಮ, ಈರಮ್ಮ, ನಾರಾಯಣಸ್ವಾಮಿ, ಅಶ್ವತ್ಥ್, ಮಾಜಿ ಅಧ್ಯಕ್ಷ ವೆಂಕಟರಾಮ್ ಪಾಲ್ಗೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>