<p><strong>ಕೋಲಾರ</strong>: ಇ- ಶಕ್ತಿ ಮಹಿಳಾ ಶಕ್ತಿಯಾದರೆ, ಕಾಯಕ ಯೋಜನೆ ಅವರನ್ನು ಸ್ವಾವಲಂಬಿ ಉದ್ಯಮಶೀಲರನ್ನಾಗಿ ಮಾಡುತ್ತದೆ ಎಂದು ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.</p>.<p>ಜಿಲ್ಲಾ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ಭಾನುವಾರ ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕಿನ ಶಾಖಾ ವ್ಯವಸ್ಥಾಪಕರು, ಮೇಲ್ವಿಚಾರಕರು, ಇ-ಶಕ್ತಿ ಅನುಷ್ಠಾನಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಸಭೆಯಲ್ಲಿ ಮಾತನಾಡಿದರು.</p>.<p>ಇ-ಶಕ್ತಿಯಿಂದ ವಹಿವಾಟಿನಲ್ಲಿ ಭ್ರಷ್ಟತೆ ತೊಡೆದು ಹಾಕಿ ಪಾರದರ್ಶಕತೆಗೆ ಕಾರಣವಾಗುವುದರಿಂದ ಮಹಿಳೆಯರ ನಂಬಿಕೆ ಬಲಗೊಳ್ಳುತ್ತದೆ. ಎರಡು ದಿನದೊಳಗೆ ನಬಾರ್ಡ್ ಸೂಚಿಸಿರುವ ಎಲ್ಲ 7ಸಾವಿರ ಮಹಿಳಾ ಸಂಘಗಳ ಮಾಹಿತಿ ಅಪ್ಲೋಡ್ ಮಾಡಬೇಕು ಎಂದು ಸೂಚಿಸಿದರು.</p>.<p>ಸಭೆಯಲ್ಲಿ ಇ-ಶಕ್ತಿ ಹೊಣೆ ಹೊತ್ತ ಸಿಬ್ಬಂದಿ ತಮಗೆ ನೀಡಿರುವ ಗುರಿ ಸಾಧಿಸದಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿದರು.</p>.<p>ಜ. 26ಕ್ಕೆ ಶೇ 100 ಗಣಕೀಕರಣ ಮಾಡಿ: ಸೊಸೈಟಿಗಳು ಶೇ 90 ರಷ್ಟು ಗಣಕೀಕರಣವಾಗಿದೆ. ವಹಿವಾಟು ಕೇವಲ 60ರಷ್ಟು ಮಾತ್ರ ಮಾಡುತ್ತಿದ್ದಾರೆ. ಆದ್ದರಿಂದ ಜ.26 ರೊಳಗೆ ಶೇ100 ಗಣಕೀಕರಣ ಮತ್ತು ಆನ್ಲೈನ್ ವಹಿವಾಟು ನಡೆಯಬೇಕು ಎಂದು ಸೂಚಿಸಿದರು.</p>.<p>ಕಾಯಕ ಯೋಜನೆ: ಕಾಯಕ ಯೋಜನೆಯಡಿ ಮಹಿಳಾ ಸಂಘಗಳಿಗೆ ₹5 ಲಕ್ಷ ಬಡ್ಡಿರಹಿತ ಸಾಲ ಮತ್ತು ಬಡ್ಡಿಯ ₹5 ಲಕ್ಷ ಸಾಲ ಭದ್ರತೆ ಇಲ್ಲದೇ ಸಿಗುತ್ತದೆ. ಹೈನುಗಾರಿಕೆ, ಮಿನಿಡೇರಿ ಆರಂಭಿಸಿ ಉದ್ಯಮಶೀಲರಾದರೆ ಅವರ ಬದುಕನ್ನು ಯೋಜನೆ ಕಾಯುತ್ತದೆ ಎಂದರು.</p>.<p>ಬ್ಯಾಂಕ್ ಎಲ್ಲ ವಿಷಯಗಳಲ್ಲೂ ಸಾಧನೆ ಮಾಡಿದೆ. ಆದರೆ ಠೇವಣಿ ಸಂಗ್ರಹದಲ್ಲಿ ಹಿಂದುಳಿದಿದೆ. ಮಾರ್ಚ್ ವೇಳೆಗೆ ₹700 ಕೋಟಿ ಸಂಗ್ರಹದ ಗುರಿ ಸಾಧನೆಗೆ ಶ್ರಮಿಸಿ ಎಂದರು.</p>.<p>ಗೌರಿಬಿದನೂರು ಶಾಖೆ ಜಿಲ್ಲೆಗೆ ಮಾದರಿಯಾಗಿದೆ. ಅವರಂತೆ ಅಂದಿನ ವಹಿವಾಟು ಅಂದೇ ಆನ್ಲೈನ್ಗೆ ದಾಖಲಿಸುವ ಮೂಲಕ ಕೆಲಸದಲ್ಲಿ ಶಿಸ್ತು ಬೆಳೆಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.</p>.<p>ಸುಸ್ತಿ ಸಾಲಗಳ ವಸೂಲಾತಿ ಬಗ್ಗೆ ವಿಮರ್ಶೆ, ಠೇವಣಿ ಸಂಗ್ರಹ ಪ್ರಗತಿ ಪರೀಶೀಲನೆ, ಇ-ಶಕ್ತಿ ಯೋಜನೆ ಪ್ರಗತಿ, ಸ್ವಸಹಾಯ ಸಂಘಗಳು, ಕೆಸಿಸಿ, ಮಧ್ಯಮಾವಧಿ ಸಾಲಗಳ ಬಡ್ಡಿ ಸಹಾಯಧನ ಕ್ಲೈಮ್ ಬಿಲ್ಲುಗಳ ಕುರಿತು ಮತ್ತು ಸಹಕಾರ ಸಂಘಗಳ ಗಣಕೀಕರಣ ಪ್ರಗತಿ ಕುರಿತು ಚರ್ಚಿಸಲಾಯಿತು.</p>.<p>ಸಭೆಯಲ್ಲಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ, ಕೆ.ವಿ.ದಯಾನಂದ್, ಯಲವಾರ ಸೊಣ್ಣೇಗೌಡ, ಎಂಡಿ ರವಿ, ಎಜಿಎಂ ಬೈರೇಗೌಡ, ಖಲೀಮುಲ್ಲಾ, ಹುಸೇನ್ಸಾಬ್ ದೊಡ್ಡಮನಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲಾರ</strong>: ಇ- ಶಕ್ತಿ ಮಹಿಳಾ ಶಕ್ತಿಯಾದರೆ, ಕಾಯಕ ಯೋಜನೆ ಅವರನ್ನು ಸ್ವಾವಲಂಬಿ ಉದ್ಯಮಶೀಲರನ್ನಾಗಿ ಮಾಡುತ್ತದೆ ಎಂದು ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.</p>.<p>ಜಿಲ್ಲಾ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ಭಾನುವಾರ ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕಿನ ಶಾಖಾ ವ್ಯವಸ್ಥಾಪಕರು, ಮೇಲ್ವಿಚಾರಕರು, ಇ-ಶಕ್ತಿ ಅನುಷ್ಠಾನಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಸಭೆಯಲ್ಲಿ ಮಾತನಾಡಿದರು.</p>.<p>ಇ-ಶಕ್ತಿಯಿಂದ ವಹಿವಾಟಿನಲ್ಲಿ ಭ್ರಷ್ಟತೆ ತೊಡೆದು ಹಾಕಿ ಪಾರದರ್ಶಕತೆಗೆ ಕಾರಣವಾಗುವುದರಿಂದ ಮಹಿಳೆಯರ ನಂಬಿಕೆ ಬಲಗೊಳ್ಳುತ್ತದೆ. ಎರಡು ದಿನದೊಳಗೆ ನಬಾರ್ಡ್ ಸೂಚಿಸಿರುವ ಎಲ್ಲ 7ಸಾವಿರ ಮಹಿಳಾ ಸಂಘಗಳ ಮಾಹಿತಿ ಅಪ್ಲೋಡ್ ಮಾಡಬೇಕು ಎಂದು ಸೂಚಿಸಿದರು.</p>.<p>ಸಭೆಯಲ್ಲಿ ಇ-ಶಕ್ತಿ ಹೊಣೆ ಹೊತ್ತ ಸಿಬ್ಬಂದಿ ತಮಗೆ ನೀಡಿರುವ ಗುರಿ ಸಾಧಿಸದಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿದರು.</p>.<p>ಜ. 26ಕ್ಕೆ ಶೇ 100 ಗಣಕೀಕರಣ ಮಾಡಿ: ಸೊಸೈಟಿಗಳು ಶೇ 90 ರಷ್ಟು ಗಣಕೀಕರಣವಾಗಿದೆ. ವಹಿವಾಟು ಕೇವಲ 60ರಷ್ಟು ಮಾತ್ರ ಮಾಡುತ್ತಿದ್ದಾರೆ. ಆದ್ದರಿಂದ ಜ.26 ರೊಳಗೆ ಶೇ100 ಗಣಕೀಕರಣ ಮತ್ತು ಆನ್ಲೈನ್ ವಹಿವಾಟು ನಡೆಯಬೇಕು ಎಂದು ಸೂಚಿಸಿದರು.</p>.<p>ಕಾಯಕ ಯೋಜನೆ: ಕಾಯಕ ಯೋಜನೆಯಡಿ ಮಹಿಳಾ ಸಂಘಗಳಿಗೆ ₹5 ಲಕ್ಷ ಬಡ್ಡಿರಹಿತ ಸಾಲ ಮತ್ತು ಬಡ್ಡಿಯ ₹5 ಲಕ್ಷ ಸಾಲ ಭದ್ರತೆ ಇಲ್ಲದೇ ಸಿಗುತ್ತದೆ. ಹೈನುಗಾರಿಕೆ, ಮಿನಿಡೇರಿ ಆರಂಭಿಸಿ ಉದ್ಯಮಶೀಲರಾದರೆ ಅವರ ಬದುಕನ್ನು ಯೋಜನೆ ಕಾಯುತ್ತದೆ ಎಂದರು.</p>.<p>ಬ್ಯಾಂಕ್ ಎಲ್ಲ ವಿಷಯಗಳಲ್ಲೂ ಸಾಧನೆ ಮಾಡಿದೆ. ಆದರೆ ಠೇವಣಿ ಸಂಗ್ರಹದಲ್ಲಿ ಹಿಂದುಳಿದಿದೆ. ಮಾರ್ಚ್ ವೇಳೆಗೆ ₹700 ಕೋಟಿ ಸಂಗ್ರಹದ ಗುರಿ ಸಾಧನೆಗೆ ಶ್ರಮಿಸಿ ಎಂದರು.</p>.<p>ಗೌರಿಬಿದನೂರು ಶಾಖೆ ಜಿಲ್ಲೆಗೆ ಮಾದರಿಯಾಗಿದೆ. ಅವರಂತೆ ಅಂದಿನ ವಹಿವಾಟು ಅಂದೇ ಆನ್ಲೈನ್ಗೆ ದಾಖಲಿಸುವ ಮೂಲಕ ಕೆಲಸದಲ್ಲಿ ಶಿಸ್ತು ಬೆಳೆಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.</p>.<p>ಸುಸ್ತಿ ಸಾಲಗಳ ವಸೂಲಾತಿ ಬಗ್ಗೆ ವಿಮರ್ಶೆ, ಠೇವಣಿ ಸಂಗ್ರಹ ಪ್ರಗತಿ ಪರೀಶೀಲನೆ, ಇ-ಶಕ್ತಿ ಯೋಜನೆ ಪ್ರಗತಿ, ಸ್ವಸಹಾಯ ಸಂಘಗಳು, ಕೆಸಿಸಿ, ಮಧ್ಯಮಾವಧಿ ಸಾಲಗಳ ಬಡ್ಡಿ ಸಹಾಯಧನ ಕ್ಲೈಮ್ ಬಿಲ್ಲುಗಳ ಕುರಿತು ಮತ್ತು ಸಹಕಾರ ಸಂಘಗಳ ಗಣಕೀಕರಣ ಪ್ರಗತಿ ಕುರಿತು ಚರ್ಚಿಸಲಾಯಿತು.</p>.<p>ಸಭೆಯಲ್ಲಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ, ಕೆ.ವಿ.ದಯಾನಂದ್, ಯಲವಾರ ಸೊಣ್ಣೇಗೌಡ, ಎಂಡಿ ರವಿ, ಎಜಿಎಂ ಬೈರೇಗೌಡ, ಖಲೀಮುಲ್ಲಾ, ಹುಸೇನ್ಸಾಬ್ ದೊಡ್ಡಮನಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>