‘ಹೈನು ಉದ್ಯಮವನ್ನು ಸಾಮ್ರಾಜ್ಯಶಾಹಿ ರಾಷ್ಟ್ರಗಳು ಮತ್ತು ಬಂಡವಾಳಶಾಹಿ ಕಾರ್ಪೊರೇಟ್ ಶಕ್ತಿಗಳ ಕೈಗೆ ನೀಡಲು ಮುಂದಾಗಿದ್ದು, ಭಾರತದ ಹೈನುಗಾರಿಕೆಯನ್ನು ಸರ್ವನಾಶ ಮಾಡಿದಂತಾಗುತ್ತದೆ. ಹಾಲಿನ ದರ ಕುಸಿತ ಮತ್ತು ನಿಯಂತ್ರಣವಿಲ್ಲದ ಪಶು ಆಹಾರ ಬೆಲೆ ಏರಿಕೆ ಹಾಗೂ ಇನ್ನಿತರೆ ಸಮಸ್ಯೆಗಳಿಂದ ರೈತರು ಈಗಾಗಲೇಸಂಕಷ್ಟ ಎದುರಿಸುತ್ತಿದ್ದಾರೆ. ಜಿಎಸ್ಟಿ ಜಾರಿಯಿಂದ ಈ ಕ್ಷೇತ್ರದಿಂದಲೇ ದೂರ ಉಳಿಯಬೇಕಾಗುತ್ತದೆ. ಆದ್ದರಿಂದ ತೆರಿಗೆಯನ್ನು ಕೂಡಲೇ ವಾಪಸ್ ಪಡೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.