‘ಪತ್ರಿಕೆ ಓದು–ಸುತ್ತೋಲೆ ಹೊರಡಿಸಿ’
‘ಸಾಧಕರ ಕುರಿತು ಅರಿಯಲು ಹಾಗೂ ಜ್ಞಾನಾರ್ಜನೆಗಾಗಿ ಮಕ್ಕಳಲ್ಲಿ ಪತ್ರಿಕೆ ಓದುವ ಅಭ್ಯಾಸ ಬೆಳೆಸಿ. ನಿತ್ಯ ಶಾಲೆಗಳಲ್ಲಿ ಪ್ರಾರ್ಥನೆಯ ಸಂದರ್ಭದಲ್ಲಿ ಕಡ್ಡಾಯವಾಗಿ ಪತ್ರಿಕೆಯ ಮುಖ್ಯಾಂಶಗಳು ಕ್ರೀಡಾ ಸಾಂಸ್ಕೃತಿಕ ಸಾಧಕರ ಮಾಹಿತಿಯನ್ನು ಓದಿ ತಿಳಿಸಲು ಸುತ್ತೋಲೆ ಹೊರಡಿಸಿ’ ಎಂದು ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಡಿಡಿಪಿಐಗೆ ಸಲಹೆ ನೀಡಿದರು.