‘ಆರೋಪ ಸಾಬೀತುಪಡಿಸಲು ಹೇಳಿದಾಗ, ‘ನಿನ್ನನ್ನು ಇವತ್ತು ಮುಗಿಸುತ್ತೇನೆ’ ಎಂದು ಆಕ್ರೋಶಭರಿತರಾಗಿ ಅಲ್ಲಿದ್ದ ಸಿಬ್ಬಂದಿಯನ್ನು ಪಕ್ಕಕ್ಕೆ ತಳ್ಳಿ ಹೊಡೆಯಲು ಮುನ್ನುಗ್ಗಿರುತ್ತಾರೆ. ಆಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಿಸ್ಥಿತಿಯನ್ನು ಅವಲೋಕಿಸಿ ತಕ್ಷಣ ಆಗಬಹುದಾದ ಅನಾಹುತ ತಡೆದಿದ್ದಾರೆ. ಜಿಲ್ಲಾ ಸಚಿವರು ಎದ್ದು ನಿಂತು ಸಂಸದರಿಂದ ಆಗಬಹುದಾದ ಮಾರಣಾಂತಿಕ ಹಲ್ಲೆಯಿಂದ ತಪ್ಪಿಸಿದ್ದಾರೆ. ಸಂಸದರು ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆವೊಡ್ಡಿದ್ದಾರೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.